22 ಆಗಸ್ಟ್ 2021

ನನ್ನಣ್ಣ .ಎರಡು ಹನಿ

 



ನನ್ನಣ್ಣನ ಕುರಿತು ಎರಡು ಹನಿ


ನನ್ನಣ್ಣ ಕೃಷಿಕ 



ನನ್ನಣ್ಣ ಸುರೇಶ

ಮನೆಯವರು ಕನಸು 

ಕಂಡರು ನನ್ನಣ್ಣ  ಓದಲಿ  

 ಬಿಸ್ಸಿ ಕೃಷಿ|

ಇಂದು ಅವನು 

ನಿಜವಾಗಿಯೂ

ಅನ್ನದಾತ  ಅದರಲ್ಲೇ

ಕಾಣುತಿರುವ ಖುಷಿ||


ಜೈ ಜವಾನ್ ಜೈ ಕಿಸಾನ್


ನನ್ನಣ್ಣ ಕನಸ ಕಂಡನು

ಆಗಬೇಕೆಂದು ಜವಾನ್|

ಎದೆಯಳತೆ ಕಡಿಮೆಯೆಂದು

ತಿರಸ್ಕರಿಸಿದರು .

ನಾನು ಎದೆಯುಬ್ಬಿಸಿ 

ಹೇಳುವೆನು ನನ್ನಣ್ಣ ಕಿಸಾನ್||

ಜೈ ಜವಾನ್ 

ಜೈ ಕಿಸಾನ್



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

20 ಆಗಸ್ಟ್ 2021

ಲಕುಮಿಗೆ ನಮನ


 


ಖುಷಿ


ಖುಷಿಯಾಗುವುದೆನ್ನ

ಮನ ನಾ ಮುಂಜಾನೆಯ

ನಿದ್ದೆಯಿಂದೆದ್ದಾಗ |

ನಮಿಸುವೆನು ಶಿರಬಾಗಿ 

ವರಮಹಾಲಕುಮಿಗೆ

ಬದುಕಿಸಿದ್ದಕ್ಕಾಗಿ ಮತ್ತೊಂದು

ಮತ್ತೊಂದು ದಿನ

ನೋಡಲು ಈ ಜಗ ||


ಸಿಹಿಜೀವಿ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

18 ಆಗಸ್ಟ್ 2021

ಡುಂಡಿರಾಜರು


 


ಇವರು ಕನ್ನಡದ

ಹೆಮ್ಮೆಯ ಹನಿ ಕವಿ 

ಡುಂಡಿರಾಜರು|

ಇವರ ಕವಿತೆ ,ಹನಿ,

ಓದಲು ಮತ್ತು ಕೇಳಲು 

ಎಲ್ಲರೂ ಹಾಜರು||


(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)