ಆತ್ಮದ ಬೆಳಕು
ಭೌತಿಕ ಅಭಿವೃದ್ಧಿಯೇ
ನಿಜವಾದ ಬೆಳವಣಿಗೆ
ಎಂದು ಬೀಗಿದ್ದು ಸಾಕು|
ಇನ್ನಾದರೂ ನಾವು
ಜಾಗೃತಗೊಳಿಸಬೇಕಿದೆ
ಆತ್ಮದ ಬೆಳಕು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಆತ್ಮದ ಬೆಳಕು
ಭೌತಿಕ ಅಭಿವೃದ್ಧಿಯೇ
ನಿಜವಾದ ಬೆಳವಣಿಗೆ
ಎಂದು ಬೀಗಿದ್ದು ಸಾಕು|
ಇನ್ನಾದರೂ ನಾವು
ಜಾಗೃತಗೊಳಿಸಬೇಕಿದೆ
ಆತ್ಮದ ಬೆಳಕು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮೊಮ್ಮಗಳ ಬಂಧನ
ನಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾದ ಮಗಳು ಹಲವಾರು ಬಾರಿ ತವರು ಮನೆಗೆ ಬಂದಾಗ " ನೀನು ನಮ್ಮ ಪಾಲಿಗೆ ಎಂದೋ ಸತ್ತಿರುವೆ ತೊಲಗು" ಎಂದು ಅವಮಾನ ಮಾಡಿದ್ದರು ಹೆತ್ತವರು.
ಕರುಳಿನ ಸಂಬಂಧ ಕಡಿಯಾಲಾಗದು ಎಂದುಕೊಂಡು ತಾಯಿಯು ಗಂಡನ ಕಣ್ತಪ್ಪಿಸಿ ಮಗಳ ಮನೆಗೆ ಬಂದರು , ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳ ಕಂಡು ಬರಸೆಳೆದಪ್ಪಿ ಮುದ್ದಾಡಿದರು, ಹೊಸಲಿನ ಬಳಿ ನಿಂತಿದ್ದ ತಾಯಿಯ ಕಣ್ಣಲ್ಲಿ ತನಗರಿವಿಲ್ಲದೇ ನಾಲ್ಕು ಹನಿ ಉದುರಿದವು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಕಡಲಾಗಬೇಕು
ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|
ಜಗದೆಲ್ಲ ಕಣ್ಣೀರನ್ನು ಒರೆಸಿ
ತನ್ನಲ್ಲಿ ಇಂಗಿಸಿಕೊಂಡು
ತಾನು ಉಪ್ಪಾದರೂ
ಸರಿ ನೋಡುವವರಿಗೆ
ಬರೀ ಸೌಂದರ್ಯ
ತೋರಬೇಕು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ