mirabaichanu
#ಸಿಹಿಜೀವಿಯ_ಹನಿ
ಮೊದಲ ರಜತ
ಪದಕ ತಂದು
ಭಾರತಾಂಭೆಯ
ಮುಡಿಗೇರಿಸಿದೆ
ಮೀರಾಬಾಯಿ
ಚಾನು|
ಇದೋ ನಿನಗೆ
ನೂರೊಂದು ನಮನ
ಸಲ್ಲಿಸುವೆ ಎಲ್ಲರ
ಪರವಾಗಿ ನಾನು| |
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಸಿಹಿಜೀವಿಯ_ಹನಿ
ಮೊದಲ ರಜತ
ಪದಕ ತಂದು
ಭಾರತಾಂಭೆಯ
ಮುಡಿಗೇರಿಸಿದೆ
ಮೀರಾಬಾಯಿ
ಚಾನು|
ಇದೋ ನಿನಗೆ
ನೂರೊಂದು ನಮನ
ಸಲ್ಲಿಸುವೆ ಎಲ್ಲರ
ಪರವಾಗಿ ನಾನು| |
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಮೊಟ್ಟೆ, ಕೊಟ್ಟೆ*
ಮೊದಲ ಘೋಷಣೆ
ದಿನಕ್ಕೊಂದು ಮೊಟ್ಟೆ
ತುಂಬುವುದು ಹೊಟ್ಟೆ|
ಅಧಿಕಾರಿಗಳ ಘೋಷಣೆ
ಮಂತ್ರಿಗಳ ಬೊಕ್ಕಸ
ತುಂಬಲು ಪ್ರತಿ ತಿಂಗಳು
ಕೋಟಿ ನಾನೇ ಕೊಟ್ಟೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಅಪ್ಪನೇ ಆಸ್ತಿ*
ಎಲ್ಲೆಡೆ ಅಣ್ಣತಮ್ಮಂದಿರಲಿ
ಕಚ್ಚಾಟ ಪಡೆಯಲು
ಅಪ್ಪ ಮಾಡಿದ ಆಸ್ತಿ|
ಎಲ್ಲೋ ಕೆಲವರು
ಈಗಲೂ ನಂಬಿದ್ದಾರೆ
ಅಪ್ಪನೇ ಆಸ್ತಿ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಅತಿಯಾಗದಿರಲಿ
ಸರಳ ಸುಂದರ ಕಾಳಜಿಯುಕ್ತ
ಪ್ರೀತಿಯು ಸಂಬಂಧಗಳನ್ನು
ಗಟ್ಟಿಗೊಳಿಸುತ್ತದೆ|
ಅತಿಯಾದ ಕಾಳಜಿ ,ಪ್ರೀತಿ
ಅತಿಯಾದ ವ್ಯಾಮೋಹ
ಉಸಿರುಗಟ್ಟಿಸುತ್ತದೆ|
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಮೆರೆವೆ*
ನೀನೇ ಜೀವ ನನಗೆ ಈಗ
ನಿನ್ನ ತಬ್ಬಿ ಜಗವ ಮರೆವೆ |
ಸರಿಸಾಟಿ ಯಾರು ನನಗೆ
ಮೀಸೆ ತಿರುವಿ ನಾನು ಮೆರೆವೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.