*ಸ್ವಪ್ನ*
ಕನಸಲೂ ಬಂದು
ಕಾಡುವಳು ನನ್ನ
ಗೆಳತಿ ಸ್ವಪ್ನ|
ಯಾಕಾದರೂ
ಬೀಳುತ್ತವೋ
ನನಗೆ ಸ್ವಪ್ನ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಿಹಿಜೀವಿಯ ಹನಿಗಳು
*ಮನವಿ*
ಆ ನಿನ್ನೊಂದು ಸ್ಪರ್ಶಕೆ
ಜೀವ ಕಳೆ ಪಡೆಯುವುದು
ಇಳೆ|
ಕಾಲನಾಗಿ ಬಂದು
ಬಾದಿಸುತ ಕೊಚ್ಚಿ
ಹಾಕದಿರು ಅನ್ನದಾತನ
ಬೆಳೆ||
*ಹಾತೊರೆದಿದ್ದೆ*
ನಲ್ಲೆ ಆ ನಿನ್ನ
ಒಂದು ಸ್ಪರ್ಶಕ್ಕೆ
ಸದಾ ಕಾಲ
ಹಾತೊರೆದಿದ್ದೆ|
ನಿನ್ನ ನೆನಪಲಿ
ಅನ್ನ, ನೀರು, ನಿದಿರೆಯ
ತೊರೆದಿದ್ದೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಬದುಕು ನಿಂತ ನೀರಲ್ಲ
ಬದುಕು ನಿಂತ ನೀರಲ್ಲ ಅದು ಸದಾ ಹರಿವ ತೊರೆ ,
ಬದುಕೆಂಬುದು ನಮಗೆ ಜೀವನದಲ್ಲಿ ಏನೆಲ್ಲಾ ಕಲಿಸುತ್ತದೆ, ಏನೆಲ್ಲಾ ಕೊಡುತ್ತದೆ ಹಲವಾರು ಅನುಭವಗಳನ್ನು ನೀಡುತ್ತದೆ ,ಕೆಲವೊಮ್ಮೆ ನೋವು, ಕೆಲವೊಮ್ಮೆ ನಲಿವು ಮತ್ತು ಕೆಲವೊಮ್ಮೆ ಎಲ್ಲಾ ಮುಗಿದಂತೆ ಮತ್ತೆ ಪುನಃ ಚಿಗುರೊಡೆದು ಬೆಳೆದಂತೆ ಇದು ಎಲ್ಲರ ಬದುಕಿನಲ್ಲಿ ನಡೆವ ಸಾಮಾನ್ಯ ಅಂಶಗಳು.
ಪುಟ್ಟ ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿಗೆ ಕನಸಿದ್ದದ್ದು ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ರೀತಿ ಶಿಕ್ಷಕರ ವೃತ್ತಿ ಮಾಡುವುದು ನನ್ನ ಗುರಿ ಮುಟ್ಟವಲ್ಲಿ ಸಫಲನಾಗಿ ೨೪ ನೇ ವಯಸ್ಸಿಗೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಬಿಸಿದೆ, ಪದವಿಯನ್ನು ಪೂರೈಸಿದ ನಾನು ಸ್ನಾತಕೋತ್ತರ ಪದವಿ ಮತ್ತು ಬಿ .ಎಡ್ ಮತ್ತು ಎಂ ಎಡ್ ಪದವಿ ಪಡೆದೆ.ಈ ಮಧ್ಯೆ ಮದುವೆಯೂ ಅಗಿ ಎರಡು ಮುತ್ತಿನಂತಹ ಮುದ್ದು ಲಕ್ಷ್ಮಿ ಯರು ನನ್ನ ಆನಂದ ಹೆಚ್ಚಿಸಿದರು .
ಮತ್ತೊಮ್ಮೆ ಬದುಕು ನಿಂತ ನೀರಲ್ಲ ಎಂದು ಅನಿಸಿತು ಅದಕ್ಕೆ ಪೂರಕವೆಂಬಂತೆ ಕ್ರಮೇಣವಾಗಿ
ನನಗೆ ಬೇರೆ ವೃತ್ತಿ ಬಗ್ಗೆ ತುಡಿತ ಉಂಟಾಯಿತು. ಅದರ ಪರಿಣಾಮವಾಗಿ ವಿವಿಧ ಪರೀಕ್ಷೆ ಬರೆಯಲು ಆರಂಭಿಸಿದ ಪರಿಣಾಮವಾಗಿ ,ನನಗೆ ಗೊತ್ತಿಲ್ಲದ ಹಾಗೆ ಅಲ್ಪ ಸ್ವಲ್ಪಮಟ್ಟಿಗೆ ಜ್ಞಾನದ ಸಂಚಯನ ಉಂಟಾಗಿ ಅದು ಪ್ರೌಢಶಾಲಾ ಶಿಕ್ಷಕನಾಗಲು ದಾರಿ ಮಾಡಿಕೊಟ್ಟಿತು. ಆದರೂ ತೃಪ್ತಿ ಇಲ್ಲದ ನಾನು ಕೆ .ಎ .ಎಸ್. ಕೆ .ಇ .ಎಸ್ ,ಐ .ಎ .ಎಸ್ ಮುಂತಾದ ಪರೀಕ್ಷೆ ಬರೆದು ಅಧಿಕಾರಿಯಾಗುವ ಕನಸು ಕಂಡು ಸಂದರ್ಶನದ ಹಂತಕ್ಕೆ ಹೋಗಿ ಆ ಹುದ್ದೆಯನ್ನು ಪಡೆಯಲಾಗಲಿಲ್ಲ. ಕಡೆಗೆ ಈಗಿರುವ ವೃತ್ತಿಯಲ್ಲಿ ಬದ್ದತೆಯಿಂದ ಕೆಲಸ ಮಾಡಲು ನಿರ್ಧಾರ ಮಾಡಿ ಕಾರ್ಯ ನಿರ್ವಹಿಸುತ್ತಿರುವೆ . ಇದರ ಪರಿಣಾಮವಾಗಿ ನಮ್ಮ ಇಲಾಖೆಯು ನನ್ನ ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಿದೆ.ಆಗ ನನ್ನ ತಾಯಿ ಮತ್ತು ನಮ್ಮ ಬಂಧುಗಳು ನನಗಿಂತ ಸಂತಸಪಟ್ಟಿದ್ದನ್ನು ನಾನು ಕಂಡಿದ್ದೇನೆ.
ಇತ್ತೀಚಿನ ವರ್ಷಗಳಲ್ಲಿ ವೃತ್ತಿ ಜೊತೆಗೆ ಹವ್ಯಾಸವಾಗಿ ಬರವಣಿಗೆಯನ್ನು ಆರಂಬಿಸಿ ಸಾವಿರಕ್ಕೂ ಹೆಚ್ಚು ರಚನೆಗಳನ್ನು ಮಾಡಿರುವೆನು ಅವೆಲ್ಲವೂ "ಶ್ರೀದೇವಿತನಯ" ಎಂಬ ಬ್ಲಾಗ್ ನಲ್ಲಿ ಅಡಕವಾಗಿವೆ ,ಪ್ರಪಂಚದ ವಿವಿಧ ದೇಶಗಳ ಒಂದೂವರೆ ಲಕ್ಷಕ್ಕೂ ಹೆಚ್ಚು ಓದುಗ ದೊರೆಗಳು ಬ್ಲಾಗ್ ನಲ್ಲಿ ನನ್ನ ಬರೆಹಗಳನ್ನು ಓದಿ ,ಹರಸಿ, ಹಾರೈಸಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾದ ,ಕಥೆ, ಕವನ, ಹನಿಗವನ,ಗಜಲ್, ಲೇಖನ, ನ್ಯಾನೊಕಥೆ, ಹೀಗೆ ವಿವಿದ ಪ್ರಕಾರದ ಬರೆಹಗಳನ್ನು ಓದಿದ ಓದುಗ ಪ್ರಭುಗಳು ಬೆನ್ನು ತಟ್ಟಿದ್ದಾರೆ. "ಸಾಲು ದೀಪಾವಳಿ " ಎಂಬ ಕವನ ಸಂಕಲನ ಹಾಗೂ " ಸಿಹಿಜೀವಿಯ ಗಜಲ್ " ಎಂಬ ಗಜಲ್ ಸಂಕಲನ ಪುಸ್ತಕದ ರೂಪದಲ್ಲಿ ಪ್ರಕಟವಾಗಿವೆ.
ಸಾಹಿತ್ಯದ ಈ ಸಾಧನೆಯನ್ನು ಗುರ್ತಿಸಿ " ಸಾಹಿತ್ಯ ಚಿಂತಾಮಣಿ, ಸಂಘಟನಾ ಚತುರ" ಎಂಬ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪುರಸ್ಕಾರ ನೀಡಿರುವರು.
ನನ್ನ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇನ್ನೂ ಬಹು ದೂರ ಸಾಗಬೇಕಿದೆ ಬಹಳಷ್ಟು ಸಾಧಿಸುವ ಗುರಿ ಇದೆ.ಭಗವಂತನ ಕೃಪೆ ,ಸಹೃದಯರ ಹಾರೈಕೆಯ ನಿರೀಕ್ಷೆಯಲ್ಲಿ ಇರುವೆ.
ಇದರ ಮಧ್ಯ ಸಂಬಂಧಿಕರ, ಆತ್ಮೀಯರ ಸಾವು ನೋವುಗಳು , ಜೊತೆಗಿದ್ದೇ ಬೆನ್ನಿ ಗೆ ಚೂರಿ ಹಾಕಿದ ಹಿತಶತೃಗಳು, ಕೆಲ ಅಹಿತಕರ ಘಟನೆಗಳು ನನ್ನನ್ನು ಕಾಡಿ ಮಾನಸಿಕವಾಗಿ ನೊಂದಿರುವುದು ಸಹಜವಾದರೂ , ಬದುಕಲ್ಲಿ ಸಿಕ್ಕ ಕೆಲ ಚಿಕ್ಕ ಪುಟ್ಟ ಯಶಸ್ಸುಗಳು ಮತ್ತು ಜೀವನ ಪ್ರೀತಿ ಮುಂದೆ ಹೆಜ್ಜೆ ಇಡಲು ಪ್ರೇರಣೆ ನೀಡುತ್ತವೆ ,ಎಷ್ಟೇ ಅಡೆತಡೆಗಳು ಬಂದರೂ ಜೀವಿಸಬೇಕು ಸಾಧಿಸಬೇಕು ಎಂಬ ಛಲ ಹುಟ್ಟುತ್ತದೆ.
ಇಷ್ಟಕ್ಕೂ ಬದುಕು ನಿಂತ ನೀರಲ್ಲವಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮದ್ದು ಬರುವುದು
ಜಗವನ್ನೇ ನಲುಗಿಸಿದ
ಜೀವಕೋಟಿಗಳ
ಹೈರಾಣಾಗಿಸಿದ
ವೈರಾಣುವಿನ ವಿರುದ್ಧ
ಮದ್ದು ಬಂದಿದೆ.
ಅತಿಯಾಸೆಯೆಂಬ
ಮಹಾವ್ಯಾಧಿಗೆ ಯತಿಗಳು
ಚಿಂತಕರು, ಸಂತರು,
ಬುದ್ದಿವಂತರು ಮದ್ದು
ನೀಡಲು ಪ್ರಯತ್ನಿಸಿದರು
ವ್ಯಾದಿ ಗುಣಮುಖವಾಗಿಲ್ಲ ಉಲ್ಬಣವಾಗುತ್ತಲೇ ಇದೆ.
ಆ ಮದ್ದನು ಕಂಡುಹಿಡಿಯಲು
ನನಗೆ ,ನಿನಗೆ ಸಾದ್ಯವಾಗಿಲ್ಲ
ಬ್ರಹ್ಮಾಂಡದಲ್ಲೆಲ್ಲೋ
ಅಡಗಿದೆ ಅವನು
ಇಂದಲ್ಲ ನಾಳೆ ತರುವನು
ಎಂಬ ಸದಾಶಯವಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಮಾಡಿದ್ದುಣ್ಣೋ ಮಹರಾಯ*
ಕಂಬಿಗಳಿಲ್ಲದೇ ರೈಲು ಬಿಟ್ಟು ಲಕ್ಷಾಂತರ ಜನ ಅಮಾಯಕರಿಗೆ ,ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡಿದವನು ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕೊನೆಗೂ ಈಗ ಕಂಬಿಗಳನ್ನು ಎಣಿಸುತ್ತಿದ್ದಾನೆ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ