This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
22 ಏಪ್ರಿಲ್ 2021
ಜನನಿ ಜನ್ಮ ಭೂಮಿ. ಹನಿ
*ಜನನಿ ಜನ್ಮ ಭೂಮಿ*
ಜನನಿ ಜನ್ಮಭೂಮಿಯೆ
ಪರಮ ನೀಚರು ನಾವು
ಮಹಾ ಕೃತಘ್ನರು ನಾವು
ನೀಡಿಹೆವು ನಿನಗೆ ನೋವು
ನೀ ಮುನಿದರೆ ನಮಗೆ ಸಾವು
ಹೆಚ್ಚಾದರೂ ಅಡ್ಡಿಯಿಲ್ಲ ಬೇವು
ಕಡಿಮೆಯಾದರೂ ಇರಲಿ ಮಾವು
ನೀ ಉರಿದರೆ ಬಾಳುವುದೇಗೆ ನಾವು?
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಹಾಯ್ಕುಗಳು
*ಹಾಯ್ಕುಗಳು*
(ಇಂದು ವಿಶ್ವ ಭೂಮಿ ದಿನ )
ವಿಶ್ವ ಭೂ ದಿನ
ಘೋಷಣೆಗಳು ಸಾಕು
ಗಿಡಬೆಳೆಸು
ಭೂಮಿ ಉಳಿಸಿ
ಇರುವುದೊಂದೇ ಭೂಮಿ
ಪ್ಲಾಸ್ಟಿಕ್ ಬೇಡ
ಜೀವ ಜಲವು
ಪೋಲೇಕೆ ಮಾಡುವಿರಿ?
ಇಂದೇ ಉಳಿಸಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
20 ಏಪ್ರಿಲ್ 2021
ಜೀವಿ _ ಸಿಹಿಜೀವಿ .ಹನಿಗವನ
*ಜೀವಿ_ಸಿಹಿಜೀವಿ*
ಇಗೋ ಕನ್ನಡ!
ಎಂದು ನಮಗೆ ತೋರಿ
ಕನ್ನಡಕೆ ಲಕ್ಷಾಂತರ
ಪದಗಳ ನೀಡಿದ
ಪದಗಾರುಡಿಗ
(ಜಿ. ವೆಂಕಟಸುಬ್ಬಯ್ಯ)
ಜೀವಿ|
ನಿಮ್ಮನೆಂದೂ ನೆನೆಯುವೆ
ನಾನು ಸಿಹಿಜೀವಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



