22 ಏಪ್ರಿಲ್ 2021

ಪ್ರತಿನಿಧಿ ಪತ್ರಿಕೆ ಗಜಲ್ ೨೨/೪/೨೦೨೧


 

ಜನನಿ ಜನ್ಮ ಭೂಮಿ. ಹನಿ


 


*ಜನನಿ ಜನ್ಮ ಭೂಮಿ*


ಜನನಿ ಜನ್ಮಭೂಮಿಯೆ

ಪರಮ ನೀಚರು ನಾವು

ಮಹಾ ಕೃತಘ್ನರು ನಾವು

ನೀಡಿಹೆವು ನಿನಗೆ ನೋವು

ನೀ ಮುನಿದರೆ ನಮಗೆ ಸಾವು

ಹೆಚ್ಚಾದರೂ ಅಡ್ಡಿಯಿಲ್ಲ ಬೇವು

ಕಡಿಮೆಯಾದರೂ ಇರಲಿ ಮಾವು

ನೀ ಉರಿದರೆ ಬಾಳುವುದೇಗೆ ನಾವು?


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಹಾಯ್ಕುಗಳು


 


*ಹಾಯ್ಕುಗಳು*


(ಇಂದು ವಿಶ್ವ ಭೂಮಿ ದಿನ )


ವಿಶ್ವ ಭೂ ದಿನ

ಘೋಷಣೆಗಳು ಸಾಕು

ಗಿಡಬೆಳೆಸು


ಭೂಮಿ ಉಳಿಸಿ

ಇರುವುದೊಂದೇ ಭೂಮಿ

ಪ್ಲಾಸ್ಟಿಕ್ ಬೇಡ


ಜೀವ ಜಲವು 

ಪೋಲೇಕೆ ಮಾಡುವಿರಿ?

ಇಂದೇ ಉಳಿಸಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



20 ಏಪ್ರಿಲ್ 2021