*ಸಿಹಿಜೀವಿಯ ವಚನ*
ಸತತ ಮಾತನಾಡುವರೊಂದಿಗೆ
ರಹಸ್ಯ ಹೇಳಬೇಡ
ವಾದಿಸುವವರೊಂದಿಗೆ
ಪ್ರತಿ ವಾದ ಮಾಡಬೇಡ
ಬುದ್ಧಿವಂತರೊಂದಿಗೆ
ಸ್ಪರ್ಧೆಗಿಳಿಯಬೇಡ
ಎಲ್ಲಬಿಟ್ಟವರೊಂದಿಗೆ
ಜಗಳವಾಡಬೇಡೆಂದ ಸಿಹಿಜೀವಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸಿಹಿಜೀವಿಯ ವಚನ*
ಸತತ ಮಾತನಾಡುವರೊಂದಿಗೆ
ರಹಸ್ಯ ಹೇಳಬೇಡ
ವಾದಿಸುವವರೊಂದಿಗೆ
ಪ್ರತಿ ವಾದ ಮಾಡಬೇಡ
ಬುದ್ಧಿವಂತರೊಂದಿಗೆ
ಸ್ಪರ್ಧೆಗಿಳಿಯಬೇಡ
ಎಲ್ಲಬಿಟ್ಟವರೊಂದಿಗೆ
ಜಗಳವಾಡಬೇಡೆಂದ ಸಿಹಿಜೀವಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನಮ್ಮಯ ಕಂದ*
ನಮ್ಮಯ ಕಂದನ ಲೀಲೆಯ ನೋಡಲು
ಕಣ್ಣಿಗೆ ಹಬ್ಬವು
ಕಣ್ಣನು ಮಿಟುಕುಸಿ ಆಡುವ ಆಟವ
ನೋಡಲು ಆನಂದವು.
ಗೊಂಬೆಗಳೊಂದಿಗೆ ಆಟವನಾಡುತ
ಕಿಲ ಕಿಲ ನಗುವುದು
ಆಟದ ವಸ್ತುವು ಕೈಜಾರಿದರೆ
ರಚ್ಚೆ ಹಿಡಿಯುವುದು.
ಅಮ್ಮನು ತೋರುವ ಚಂದ್ರನ ನೋಡುತ
ಕೈತುತ್ತು ತಿನ್ನುವುದು
ಆಗಸದ ಬಿಳಿಯ ಚೆಂಡನಿಡಿಯಲು
ಕೈಯ ಚಾಚುವುದು.
ತೊಟ್ಟಿಲು ಕಂಡರೆ ಕೈಯನು ತೋರುತ
ಆ ಕಡೆ ಓಡುವುದು
ಅಮ್ಮನ ಲಾಲಿಯ ಹಾಡನು ಕೇಳುತ
ನಿದ್ದೆಗೆ ಜಾರುವುದು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಗಜಲ್*
ನೋವಿನಲ್ಲೂ ನಗುತಿರವ ಜನಗಳ ಸಂತೈಸು
ನೊಂದು ಬೇಯುತಿರುವ ಮನಗಳ ಸಂತೈಸು
ಧರಣಿಯು ಕೇವಲ ಮಾನವರದು ಮಾತ್ರವಲ್ಲ
ಭುವಿಯಲಿರುವ ಎಲ್ಲಾ ಪ್ರಾಣಿಗಳ ಸಂತೈಸು
ರೆಕ್ಕೆ ಬಲಿತ ಪಕ್ಷಿಗಳು ಹಾರಾಡುವುದು ಸಹಜ
ವೃದ್ಧಾಶ್ರಮದಲಿರುವ ಜನ್ಮದಾತರುಗಳ ಸಂತೈಸು
ಝಗಮಗಿಸುತಿವೆ ಉಳ್ಳವರ ಮಹಲುಗಳು
ಸೂರಿರದೆ ಕೊರುಗಿರುವ ಹಾಡಿಗಳ ಸಂತೈಸು
ದುರ್ಜನರು ಅಟ್ಟಹಸಾದಿ ಮೆರೆಯುತಿಹರು
ಬೆಂದು ಬಳಲುತಿರುವ "ಸಿಹಿಜೀವಿ"ಗಳ ಸಂತೈಸು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಶಿಶುಗೀತೆ
ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು💐💐
ಬಾರೋ ಗೆಳೆಯ ಬಾರೋ ಗೆಳೆಯ
ಹೋಳಿ ಆಡೋಣ
ವಿಧ ವಿಧ ಬಣ್ಣವ ಎರಚುತ ನಾವು
ಹಬ್ಬವ ಮಾಡೋಣ
ಸರ್ವಕಾಲಕೂ ಉಲ್ಲಾಸವಾಗಿರಲೆಂದು
ಕೆಂಪು ಬಣ್ಣ ಎರಚೋಣ
ಭುವಿಯಲಿ ಸಮೃದ್ಧಿ ನೆಲೆಸಲಿ ಎನುತಾ
ಹಸಿರನು ಹಚ್ಚೋಣ.
ಸಕಲರ ಜೀವನದಿ ಸಂಭ್ರಮ ಉಳಿಸಲು
ಹಳದಿಯ ಬಳಿಯೋಣ
ನೋವುಂಡವರಿಗೆ ಸಂತೋಷ ಹಂಚಲು
ಗುಲಾಬಿಯ ಹಚ್ಚೋಣ.
ದೀನ ದಲಿತರಿಗೆ ಸಂಪತ್ತು ನೀಡಲು
ನೇರಳೆ ಎರಚೋಣ
ನಕಾರ ಭಾವನೆ ತೊಲಗಿಸಲು
ನೀಲಿಯ ಹಚ್ಚೋಣ.
ಬಣ್ಣಗಳೇಳು ಇರಲಿ ಎಂದಿಗೂ
ನಮ್ಮಯ ಜೀವನದಿ
ಬಣ್ಣ ಬಣ್ಣದಲಿ ಕಂಗೊಳಿಸುತಾ
ಹರಿಯುತಿರಲಿ ಜೀವ ನದಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
🔴🟠🟡🟢🔵
*ಆಟಗಳ ಆಡೋಣ*
ಶಿಶುಗೀತೆ
ಭಾನುವಾರ ರಜೆಯು ನಮಗೆ
ಆಟವಾಡಲು ನಾವ್ ರೆಡಿ
ಒಂದು ದಿನ ಪೆನ್ನು ಪುಸ್ತಕ
ಪಾಠದ ಚಿಂತೆಯ ಬಿಡಿ.
ಮರವನತ್ತಿ ಇಳಿಯುತ ಮರಕೋತಿ
ಆಟವನು ಆಡೋಣ
ವೃತ್ತದಿ ನಿಂತು ಹುಲಿ ಹಸು
ಆಟವಾಡುತ ಕುಣಿಯೋಣ.
ಸಾಲಾಗಿ ನಿಂತು ಕೆರೆ ದಡ
ಆಟದಿ ನಲಿಯೋಣ
ಗೋಲಿ,ಲಗೋರಿ,ಚಿನ್ನಿದಾಂಡು
ಎಲ್ಲಾ ಆಟಗಳ ಆಡೋಣ.
ಸಂಜೆಯಾಗುತ ಆಟದಿ ದಣಿದು
ಮನೆಕಡೆ ಓಡೋಣ
ಕೈಯನು ತೊಳೆದು ಸಾಲಾಗಿಕುಳಿತು
ಅಮ್ಮನ ಕೈತುತ್ತು ತಿನ್ನೋಣ.
ಊಟದ ನಂತರ ನಾವು
ಅಮ್ಮನ ಮಡಿಲಲಿ ಮಲಗೋಣ
ಸೋಮವಾರ ಮತ್ತೆ ಸಿದ್ದವಾಗಿ
ಶಾಲೆ ಕಡೆ ನಡೆಯೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ