ಅಕ್ಷಯ
ಹನಿಗವನ
ದೀರ್ಘಕಾಲದ ಕೆಮ್ಮು
ಇದ್ದರೆ ಬರಬಹುದು
ರೋಗ ಕ್ಷಯ (T B)|
ಸಕಾಲಕ್ಕೆ ಚಿಕಿತ್ಸೆ
ಪಡೆದರೆ ನಮ್ಮ
ಅರೋಗ್ಯವಾಗುವುದು
ಅಕ್ಷಯ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅಕ್ಷಯ
ಹನಿಗವನ
ದೀರ್ಘಕಾಲದ ಕೆಮ್ಮು
ಇದ್ದರೆ ಬರಬಹುದು
ರೋಗ ಕ್ಷಯ (T B)|
ಸಕಾಲಕ್ಕೆ ಚಿಕಿತ್ಸೆ
ಪಡೆದರೆ ನಮ್ಮ
ಅರೋಗ್ಯವಾಗುವುದು
ಅಕ್ಷಯ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನಮ್ಮನೆ ಕೂಸು*
ನಮ್ಮ ಮನೆಯಲೊಂದು ಪುಟ್ಟ
ಕೂಸು ಇರುವುದು
ಅಂಬೆಗಾಲನಿಟ್ಟು ನಡೆದು
ಮುದವ ನೀಡುವುದು.
ಕೈಯ ತಟ್ಟಿ ಕೇಕೆಹಾಕಿ
ನಕ್ಕು ನಲಿವುದು
ಬಾಲ ಭಾಷೆ ನುಡಿದು
ನಮಗೆ ಖುಷಿಯ ತರುವುದು.
ಸಿಕ್ಕಿದ್ದೆಲ್ಲವನ್ನು ಹಿಡಿದು
ಬಾಯಲಿಟ್ಟುಕೊಳುವುದು
ಗದರಿದಾಗ ನಗುತ ನಮ್ಮ
ಕೋಪ ಮರೆಸುವುದು.
ಹೊಟ್ಟೆ ಹಸಿಯೆ ಜೋರಾಗಿ
ಅಳುತಲಿರುವುದು
ಅಮ್ಮ ಕಂಡರೆ ತಟ್ಟನೆ
ಅಳು ನಿಲ್ಲಿಸುವುದು.
ಹವಾಮಾನ?
ಕಷ್ಟ ಪಟ್ಟು ಕಂಡುಹಿಡಿಯಬಹುದು
ಇದೇ ರೀತಿಯಲ್ಲಿ
ಇರುವುದು ಮುಂದಿನ
ದಿನಗಳ ಹವಾಮಾನ|
ಯಾರಿಗೂ ಗೊತ್ತಾಗುವುದಿಲ್ಲ
ಯಾರಿಂದ ?ಯಾವಾಗ?
ಹೇಗೆ ಆಗುವುದು ಅವಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಕಾಯುತ್ತವೆ*
ನಾವೇ ಕಾಯಬೇಕು
ಉಳಿಸಿಕೊಳ್ಳಲು ಗಳಿಸಿದ
ಸಂಪತ್ತು|
ನಮ್ಮನ್ನೇ ಕಾಯುತ್ತವೆ
ಸದ್ಗುಣಗಳು ನಮಗೆ ಬಂದಾಗ
ಆಪತ್ತು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಕವನ-ವನ*
(ಇಂದು ವಿಶ್ವ ಕವನ ಮತ್ತು ವನ ದಿನ)
ನಮ್ಮ ಭಾವನೆಗಳಿಗೆ
ಅಕ್ಷರ ರೂಪ ಕೊಟ್ಟರೆ
ಅದು "ಕವನ"
ಉತ್ತಮ ಭಾವನೆಯಿಂದ
ಗಿಡ ಮರ ನೆಟ್ಟು
ಬೆಳೆಸಿದರೆ ಮುಂದೊಂದು
ದಿನ ಅದೇ "ವನ"
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ