ಹವಾಮಾನ?
ಕಷ್ಟ ಪಟ್ಟು ಕಂಡುಹಿಡಿಯಬಹುದು
ಇದೇ ರೀತಿಯಲ್ಲಿ
ಇರುವುದು ಮುಂದಿನ
ದಿನಗಳ ಹವಾಮಾನ|
ಯಾರಿಗೂ ಗೊತ್ತಾಗುವುದಿಲ್ಲ
ಯಾರಿಂದ ?ಯಾವಾಗ?
ಹೇಗೆ ಆಗುವುದು ಅವಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಹವಾಮಾನ?
ಕಷ್ಟ ಪಟ್ಟು ಕಂಡುಹಿಡಿಯಬಹುದು
ಇದೇ ರೀತಿಯಲ್ಲಿ
ಇರುವುದು ಮುಂದಿನ
ದಿನಗಳ ಹವಾಮಾನ|
ಯಾರಿಗೂ ಗೊತ್ತಾಗುವುದಿಲ್ಲ
ಯಾರಿಂದ ?ಯಾವಾಗ?
ಹೇಗೆ ಆಗುವುದು ಅವಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಕಾಯುತ್ತವೆ*
ನಾವೇ ಕಾಯಬೇಕು
ಉಳಿಸಿಕೊಳ್ಳಲು ಗಳಿಸಿದ
ಸಂಪತ್ತು|
ನಮ್ಮನ್ನೇ ಕಾಯುತ್ತವೆ
ಸದ್ಗುಣಗಳು ನಮಗೆ ಬಂದಾಗ
ಆಪತ್ತು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಕವನ-ವನ*
(ಇಂದು ವಿಶ್ವ ಕವನ ಮತ್ತು ವನ ದಿನ)
ನಮ್ಮ ಭಾವನೆಗಳಿಗೆ
ಅಕ್ಷರ ರೂಪ ಕೊಟ್ಟರೆ
ಅದು "ಕವನ"
ಉತ್ತಮ ಭಾವನೆಯಿಂದ
ಗಿಡ ಮರ ನೆಟ್ಟು
ಬೆಳೆಸಿದರೆ ಮುಂದೊಂದು
ದಿನ ಅದೇ "ವನ"
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ವನಮಹೋತ್ಸವ*
ಶಿಶುಗೀತೆ
ರಾಮ ರಹೀಮ ಬೇಗನೆಬಾರೋ
ಒಂದೊಂದು ಗಿಡವ ಹಾಕೋಣ
ಹಾಕಿದ ಗಿಡಗಳ ಮರಗಳನಾಗಿಸಿ
ವನಮಹೋತ್ಸವ ಆಚರಿಸೋಣ.
ಬೇವು ,ಹಲಸು, ತೇಗ ಹೊನ್ನೆ
ಗಂಧದ ಮರಗಳ ಬೆಳೆಸೋಣ
ಕಾಡಿನ ಕಿಚ್ಚನು ತಡೆಯುತ
ವನ ಸಂರಕ್ಷಣೆ ಮಾಡೋಣ.
ವನ್ಯಜೀವಿಗಳ ಕಾಡದೆ ನಾವು
ಕಾಡಲೇ ಇರಲು ಬಿಡೋಣ
ನಾಡಲೂ ಕಾಡನು ಬೆಳಸಿ
ಪ್ರಕೃತಿಯನ್ನು ಉಳಿಸೋಣ.
ಕಾಡನು ಕಡಿಯುವ ಮನಗಳಿಗೆ
ಬುದ್ದಿಯ ಮಾತನು ಹೇಳೋಣ
ಕಾಡು ಇದ್ದರೆ ನಾಡು ಎನ್ನುತ
ಪರಿಸರ ಗೀತೆಯ ಹಾಡೋಣ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ