21 ಮಾರ್ಚ್ 2021

ಕವನ _ವನ . ಹನಿಗವನ


 



*ಕವನ-ವನ*


(ಇಂದು ವಿಶ್ವ ಕವನ ಮತ್ತು ವನ ದಿನ)


ನಮ್ಮ ಭಾವನೆಗಳಿಗೆ

ಅಕ್ಷರ ರೂಪ ಕೊಟ್ಟರೆ

ಅದು "ಕವನ"

ಉತ್ತಮ ಭಾವನೆಯಿಂದ

ಗಿಡ ಮರ ನೆಟ್ಟು 

ಬೆಳೆಸಿದರೆ ಮುಂದೊಂದು

ದಿನ ಅದೇ "ವನ"


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ವನಮಹೋತ್ಸವ (ಶಿಶುಗೀತೆ)


 



*ವನಮಹೋತ್ಸವ*


ಶಿಶುಗೀತೆ


ರಾಮ ರಹೀಮ ಬೇಗನೆಬಾರೋ

ಒಂದೊಂದು ಗಿಡವ ಹಾಕೋಣ

ಹಾಕಿದ ಗಿಡಗಳ ಮರಗಳನಾಗಿಸಿ

ವನಮಹೋತ್ಸವ ಆಚರಿಸೋಣ.


ಬೇವು ,ಹಲಸು, ತೇಗ ಹೊನ್ನೆ

ಗಂಧದ ಮರಗಳ ಬೆಳೆಸೋಣ 

ಕಾಡಿನ ಕಿಚ್ಚನು ತಡೆಯುತ 

ವನ ಸಂರಕ್ಷಣೆ ಮಾಡೋಣ.


ವನ್ಯಜೀವಿಗಳ ಕಾಡದೆ ನಾವು 

ಕಾಡಲೇ ಇರಲು ಬಿಡೋಣ

ನಾಡಲೂ ಕಾಡನು ಬೆಳಸಿ

ಪ್ರಕೃತಿಯನ್ನು ಉಳಿಸೋಣ.


ಕಾಡನು ಕಡಿಯುವ ಮನಗಳಿಗೆ

ಬುದ್ದಿಯ ಮಾತನು ಹೇಳೋಣ

ಕಾಡು ಇದ್ದರೆ ನಾಡು ಎನ್ನುತ 

ಪರಿಸರ ಗೀತೆಯ ಹಾಡೋಣ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

20 ಮಾರ್ಚ್ 2021

ಬಣ್ಣಕೆ ಕಾರಣ ಯಾರಣ್ಣ? .ಶಿಶುಗೀತೆ


 

ಗುಬ್ಬಚ್ಚಿ .ಶಿಶುಗೀತೆ


 

*ಗುಬ್ಬಚ್ಚಿ* 


ಬಾರೋ ಬಾರೋ ಗುಬ್ಬಚ್ಚಿ
ಕೊಡುವೆ ನಿನಗೆ ಅಪ್ಪಚ್ಚಿ


ಕಾಳು‌ ಕಡಿಯನು ನೀಡುವೆನು
ಕುಡಿಯಲು‌ ನೀರು‌ ಇಡುವೆನುು.


ಪುರ್ರನೆ ಹಾರುವ ನಿನ ಚೆಂದ
ನೋಡಲು ನಮಗೆ ಆನಂದ.


ನಮ್ಮನೆ ಮುಂದೆ ಹಾರಾಡು
ನಮ್ಮಯ ಮನಕೆ ಮುದ ನೀಡು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




19 ಮಾರ್ಚ್ 2021

ವರ ? . ಹನಿಗವನ


 ವರ?*


ನಿದ್ರೆಯು ದೇವರು

ನಮಗೆ ನೀಡಿದ 

ಅದ್ಭುತವಾದ ವರ

ಅದು ಬಂದರೆ

ಎಲ್ಲವನ್ನೂ ಮರೆಸುತ್ತದೆ|

ಬಾರದಿದ್ದರೆ 

ಬೇಡದ್ದನ್ನೇ  ನೆನಪಿಸುತ್ತದೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ