20 ಮಾರ್ಚ್ 2021

ಬಣ್ಣಕೆ ಕಾರಣ ಯಾರಣ್ಣ? .ಶಿಶುಗೀತೆ


 

ಗುಬ್ಬಚ್ಚಿ .ಶಿಶುಗೀತೆ


 

*ಗುಬ್ಬಚ್ಚಿ* 


ಬಾರೋ ಬಾರೋ ಗುಬ್ಬಚ್ಚಿ
ಕೊಡುವೆ ನಿನಗೆ ಅಪ್ಪಚ್ಚಿ


ಕಾಳು‌ ಕಡಿಯನು ನೀಡುವೆನು
ಕುಡಿಯಲು‌ ನೀರು‌ ಇಡುವೆನುು.


ಪುರ್ರನೆ ಹಾರುವ ನಿನ ಚೆಂದ
ನೋಡಲು ನಮಗೆ ಆನಂದ.


ನಮ್ಮನೆ ಮುಂದೆ ಹಾರಾಡು
ನಮ್ಮಯ ಮನಕೆ ಮುದ ನೀಡು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




19 ಮಾರ್ಚ್ 2021

ವರ ? . ಹನಿಗವನ


 ವರ?*


ನಿದ್ರೆಯು ದೇವರು

ನಮಗೆ ನೀಡಿದ 

ಅದ್ಭುತವಾದ ವರ

ಅದು ಬಂದರೆ

ಎಲ್ಲವನ್ನೂ ಮರೆಸುತ್ತದೆ|

ಬಾರದಿದ್ದರೆ 

ಬೇಡದ್ದನ್ನೇ  ನೆನಪಿಸುತ್ತದೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ನಿದಿರೆ ( ಇಂದು ವಿಶ್ವ ನಿದಿರೆ ದಿನ)


 




*ನಿದಿರೆ*


ವೃಥಾ ಏಕೆ ಹಾಳು

ಮಾಡಿಕೊಳ್ಳುತಿರುವೆ

ನಿನ್ನ ಆರೋಗ್ಯವನ್ನು

ಸೇವಿಸುತ ಮದಿರೆ|

ಕಷ್ಟ ಪಟ್ಟು ದುಡಿದು

ಸ್ವಚ್ಛ ಮನಸ್ಸನ್ನು

ಹೊಂದಿದರೆ ರಾತ್ರಿಯಲ್ಲಿ

ಕಣ್ಮುಚ್ಚಿದರೆ ಸಾಕು

ಆವರಿಸುವುದು ನಿದಿರೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


18 ಮಾರ್ಚ್ 2021

ಪುಟ್ಟನ ಚಿತ್ರ ಶಿಶುಗೀತೆ


 



*ಪುಟ್ಟನ ಚಿತ್ರ* 


ಶಿಶುಗೀತೆ


ನಮ್ಮ ಪುಟ್ಟ ದುಡ್ಡು ಕೊಟ್ಟು

ಚಿತ್ರದ ಪುಸ್ತಕ ಕೊಂಡನು

ಚಿತ್ರಗಳನ್ನು ನೋಡಿ

ಅವನು ಖುಷಿಯಪಟ್ಟನು.


ತಾನೂ ಕೂಡ ಚಿತ್ರ

ಬರೆಯಲು ಸಿದ್ದನಾದನು

ಪೇಪರ್ ಪೆನ್ಸಿಲ್ ಹಿಡಿದು

ಚಿತ್ರ ಬರೆಯಲು ಕುಳಿತನು.


ಬೆಟ್ಟ ಗುಡ್ಡ ,ಗಿಡ ಮರ

ಬಿಳಿಹಾಳೆಯಲಿ ಮೂಡಿದವು

ಪ್ರಾಣಿ ಪಕ್ಷಿ, ಚಿಟ್ಟೆಗಳು 

ಅಲ್ಲಲ್ಲಿ ಕಂಡು ಬಂದವು.


ಬಣ್ಣದ ಬ್ರಷ್ ಹಿಡಿದು

ಬಣ್ಣವನ್ನು ತುಂಬಿದ

ಬರೆದ ಚಿತ್ರವನ್ನು ಅವನು

ಅಮ್ಮನಿಗೆ ತೋರಿಸಿದ.


ಮಗನ ಚಿತ್ರ ನೋಡಿ

ಅಮ್ಮ ಖುಷಿಯ ಪಟ್ಟರು

ಹಣೆಗೆ ಮುತ್ತನಿಟ್ಟು

ಕೈಗೆ ಲಾಡು ಕೊಟ್ಟರು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ