*ಗಂಟು*
ಮದುವೆಯಲ್ಲಿ ನಾನು
ನನ್ನವಳಿಗೆ ಹಾಕಿದ್ದೆ
ಮೂರು ಗಂಟು|
ಅದೇ ಸಿಟ್ಟಿಗೆ
ಪ್ರತಿದಿನವೂ ಮುದ್ದೆಯಲಿ
ಮಾಡುತಿರುವಳು
ಹತ್ತಾರು ಗಂಟು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಗಂಟು*
ಮದುವೆಯಲ್ಲಿ ನಾನು
ನನ್ನವಳಿಗೆ ಹಾಕಿದ್ದೆ
ಮೂರು ಗಂಟು|
ಅದೇ ಸಿಟ್ಟಿಗೆ
ಪ್ರತಿದಿನವೂ ಮುದ್ದೆಯಲಿ
ಮಾಡುತಿರುವಳು
ಹತ್ತಾರು ಗಂಟು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಆಡಂಬರ ತೋರುತ್ತಾ ಹೋಟೆಲ್ ಅನ್ನವನ್ನು ತಿನ್ನಲು ಬೇಕೇ
ಬೇಕು ಹಣ|
ಜೋಪಡಿಯಾದರೂ ಪ್ರೀತಿಯಿಂದ
ಕೂಡಿದ ಅಮ್ಮನ ಕೈ ತುತ್ತು ತಿನ್ನಲು
ಬೇಕು ಋಣ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು*
ಚುಟುಕು ೧
ಶಿವ
ಶುದ್ಧವಾದ ಮನದಿಂದ
ಶಿವನಾಮ ಜಪಿಸೋಣ|
ಬುದ್ದನಂತೆ ಜ್ಞಾನ ಪಡೆದು
ಆತ್ಮಜಾಗೃತಗೊಳಿಸಿಕೊಳ್ಳೋಣ||
ಚುಟುಕು ೨
ಶಿವರಾತ್ರಿ
ಶಿವರಾತ್ರಿ ಆಚರಿಸೋಣ
ಮಾಡುತ ಹರ ಭಜನೆ|
ಶುದ್ದವಾದ ಭಕ್ತಿಯೊಂದಿದ್ದರೆ
ಸಿಗುವದು ಅವನ ಕರುಣೆ ||
ಚುಟುಕು ೩
ಉಪವಾಸ
ಪಾತಕ ಮಾಡುವ ದುರ್ಜನರ
ಜೊತೆ ಬೇಡವೆ ಬೇಡ ಸಹವಾಸ|
ಹರನನು ಧ್ಯಾನಿಸಿ ಕರುಣೆ ಪಡೆಯಲು
ಮಾಡಬೇಕು ನೀ ಉಪವಾಸ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸಾರ್ಥಕತೆ*
ತಾವರೆಯು ಸೇರುವುದು
ಭಗವಂತನ ಪಾದವನ್ನು ಅದು ಹುಟ್ಟಿದರೂ ಕೆಸರಿನಲ್ಲಿ |
ಎತ್ತರದ ಬೆಟ್ಟದಲ್ಲಿದ್ದರೂ
ಹುಟ್ಟಿದಲ್ಲೇ ಕೊಳೆಯುವುದು
ಪಾಪಾಸುಕಳ್ಳಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ