ಅಳುಕದಿರು ಮನವೆ...
ಅಳುವ ದಿನಗಳು ಅಳಿಯುವವು
ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು
ಅಳಿಯುವ ಮುನ್ನ
ಆಳಾಗಿ ದುಡಿದು
ಅರಸನಾಗಿ ಉಣ್ಣು |
ಸತ್ಕರ್ಮ ಮಾಡುತ
ಧರ್ಮ ಮಾರ್ಗದಿ ನಡೆ
ಕ್ರಮೇಣವಾಗಿ ತೆರೆಯುವುದು
ನಿನ್ನ ಒಳಗಣ್ಣು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಅಳುಕದಿರು ಮನವೆ...
ಅಳುವ ದಿನಗಳು ಅಳಿಯುವವು
ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು
ಅಳಿಯುವ ಮುನ್ನ
ಆಳಾಗಿ ದುಡಿದು
ಅರಸನಾಗಿ ಉಣ್ಣು |
ಸತ್ಕರ್ಮ ಮಾಡುತ
ಧರ್ಮ ಮಾರ್ಗದಿ ನಡೆ
ಕ್ರಮೇಣವಾಗಿ ತೆರೆಯುವುದು
ನಿನ್ನ ಒಳಗಣ್ಣು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
(ರಥ ಸಪ್ತಮಿಯ ನೆನಪಲ್ಲಿ)
ಮೂಡಣದರಮನೆಯ
ಬಾಗಿಲ ತೆರೆದು
ಜಗಬೆಳಗಲು ದಿನವೂ
ಬರುವ ದಿನಕರ|
ಬನ್ನಿ ನಾವೆಲ್ಲರೂ
ನಮಿಸೋಣ ಆ ರವಿಗೆ
ಮುಗಿದು ನಮ್ಮ ಕರ|
ನಡೆ ನುಡಿ
ನಮ್ಮ ನಡೆ ನುಡಿ
ಬಂಗಾರದಂತಿರಬೇಕು
ಬದುಕು ಬಂಗಾರವಾಗಲು
ಬಾಳು ಹಸನಾಗಲು
ನಾವು ನಿಜವಾದ
ಮಾನವರಾಗಲು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನಮ್ಮವರು*
ಸಮಯ ಕಳೆದದ್ದೆ ತಿಳಿಯುವುದಿಲ್ಲ
ಜೊತೆಯಾಗಿದ್ದರೆ ನಮ್ಮವರು|
ಸಮಯ ಕಳೆದಂತೆ ನಮಗೆ
ಕ್ರಮೇಣವಾಗಿ ಅರಿವಾಗುವುದು
ಯಾರು ನಮ್ಮವರು?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ