19 ಫೆಬ್ರವರಿ 2021

ಅಳುಕದಿರು ಮನವೆ ... ಹನಿ

 ಅಳುಕದಿರು ಮನವೆ...


ಅಳುವ ದಿನಗಳು ಅಳಿಯುವವು

ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು

ಅಳಿಯುವ ಮುನ್ನ 

ಆಳಾಗಿ ದುಡಿದು 

ಅರಸನಾಗಿ ಉಣ್ಣು |

ಸತ್ಕರ್ಮ ಮಾಡುತ 

ಧರ್ಮ ಮಾರ್ಗದಿ ನಡೆ

ಕ್ರಮೇಣವಾಗಿ ತೆರೆಯುವುದು

ನಿನ್ನ ಒಳಗಣ್ಣು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ದಿನಕರ ಹನಿ


 ದಿನಕರ


(ರಥ ಸಪ್ತಮಿಯ ನೆನಪಲ್ಲಿ)


ಮೂಡಣದರಮನೆಯ

ಬಾಗಿಲ ತೆರೆದು 

ಜಗಬೆಳಗಲು ದಿನವೂ

ಬರುವ ದಿನಕರ|

ಬನ್ನಿ ನಾವೆಲ್ಲರೂ

ನಮಿಸೋಣ ಆ ರವಿಗೆ

ಮುಗಿದು ನಮ್ಮ ಕರ|

18 ಫೆಬ್ರವರಿ 2021

ನಡೆ ನುಡಿ ಹನಿ .

 ನಡೆ ನುಡಿ


 ನಮ್ಮ  ನಡೆ ನುಡಿ 

ಬಂಗಾರದಂತಿರಬೇಕು

ಬದುಕು ಬಂಗಾರವಾಗಲು

ಬಾಳು ಹಸನಾಗಲು

ನಾವು ನಿಜವಾದ

ಮಾನವರಾಗಲು



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 ಫೆಬ್ರವರಿ 2021

ಹೇಗೆ .ಹನಿ

 *ಹೇಗೆ?*


ಚಳಿ ಬಹಳ ಇದೆ

ನೀನೂ ಇಲ್ಲ

ಬೆಚ್ಚಗೆ ಇರುವುದು ಹೇಗೆ?



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ನಮ್ಮವರು . ಹನಿ

 *ನಮ್ಮವರು*


ಸಮಯ ಕಳೆದದ್ದೆ ತಿಳಿಯುವುದಿಲ್ಲ

ಜೊತೆಯಾಗಿದ್ದರೆ ನಮ್ಮವರು|

ಸಮಯ ಕಳೆದಂತೆ  ನಮಗೆ

ಕ್ರಮೇಣವಾಗಿ ಅರಿವಾಗುವುದು

ಯಾರು ನಮ್ಮವರು?||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ