*ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ*
ಸಿಹಿಜೀವಿಯ ಹನಿ
ಕಾಡು ಹರಟೆಯಲಿ
ಕಾಲಹರಣ ಮಾಡುತ
ಪೋಲಾಗುತಲಿದೆ
ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|
ಇಂತಹ ಮೂಢ
ಮತಿಗಳಿಗೆ
ಆದರ್ಶವಾಗಲಿ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಿಹಿಜೀವಿಯ ಹನಿ
ಕಾಡು ಹರಟೆಯಲಿ
ಕಾಲಹರಣ ಮಾಡುತ
ಪೋಲಾಗುತಲಿದೆ
ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|
ಇಂತಹ ಮೂಢ
ಮತಿಗಳಿಗೆ
ಆದರ್ಶವಾಗಲಿ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಿಹಿಜೀವಿಯ ಹನಿ*
*ಭಾಗ್ಯವಂತರು*
ನಾಲಿಗೆಯ ಮೇಲೆ
ಹಿಡಿತವಿಲ್ಲದಿರೆ ನಾವು
ರೋಗವಂತರು ಮತ್ತು
ಜಗಳಗಂಟರು|
ಅದರ ಮೇಲೆ
ಹಿಡಿತವಿದ್ದರೆ
ನಾವಾಗುವೆವು
ಆರೋಗ್ಯವಂತರು
ಭಾಗ್ಯವಂತರು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಹೆಜ್ಜೆ ಇಡು*
ಕವನ
ಇನ್ನೆಷ್ಟು ದಿನ
ಕತ್ತಲಲೇ ಕಳೆಯುವೆ?
ತಮವೇ ಜೀವನವೆಂದು
ಬದುಕುತಿರುವೆ. ಇನ್ನಾದರೂ
ಹೆಜ್ಜೆ ಇಡು ಬೆಳಕಿನೆಡೆಗೆ.
ಇನ್ನೆಷ್ಟು ದಿನ
ಅಜ್ಞಾನದಿ ತೊಳಲುವೆ?
ಅಂಧಕಾರದಲೇ ಬಾಳುವೆ
ಜ್ಞಾನದ ಜ್ಯೋತಿಯು
ನಿನಗಾಗಿ ಕಾದಿದೆ.
ಹೆಜ್ಜೆ ಇಡು ಜ್ಞಾನದೆಡೆಗೆ.
ಇನ್ನೆಷ್ಟು ದಿನ
ಲೌಕಿಕವೇ ಜೀವನವೆಂದು
ಮಬ್ಬಿನಲಿ ಒದ್ದಾಡುವೆ?
ಪಾರಮಾರ್ಥದಲಿ ಒಲವಿರಲಿ
ಹೆಜ್ಜೆ ಇಡು ಆತ್ಮಸಾಕ್ಷಾತ್ಕಾರದೆಡೆಗೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಶಿಶುಗೀತೆ
ನಮ್ಮ ಮನೆಯಲೊಂದು
ಸಣ್ಣ ಪಾಪವಿರುವುದು|
ಪಿಳಿ ಪಿಳಿ ಕಣ್ಣು ಬಿಟ್ಟು
ನಗುತಲಿರುವುದು.||
ಗಿಲಿಕಿ ಗೆಜ್ಜೆ ಹಿಡಿದು
ಕೊಂಡು ನಕ್ಕು ನಲಿವುದು|
ಅಂಬೆಗಾಲನಿಟ್ಟು ಅಮ್ಮನ
ಬಳಿಗೆ ಓಡುವುದು.||
ಅಮ್ಮ ಕಾಣದಿದ್ದರೆ
ಜೋರು ಅಳುವುದು|
ತಾಯ ಹೆಜ್ಜೆ ಸದ್ದು
ಕೇಳಿ ಕೇಕೆಪಾಪವಿರುವುದು|.
ಬಾಲ ಭಾಷೆಯಲ್ಲಿ
ಒಂದು ಹಾಡು ಹೇಳುವುದು|
ತಾಳ ಹಾಕಿ ಕೈಯ
ತಟ್ಟಿ ಕುಣಿಯುತಿರುವುದು.||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
👶👶👶👶👶👶