*ಅಧರ*
ಜನರು ಬೆದರಿಹರು
ಮಾರುಕಟ್ಟೆಯ ಜೇನಿಂದ
ತೊಂದರೆಗೊಳಗಾಗುವುದು
ತಮ್ಮ ಉದರ|
ನನಗಂತೂ ಭಯವಿಲ್ಲ
ನಾನೀಗಲೂ ಆಶ್ರಯಿಸಿರುವೆ
ಜೇನಿಗೆ ನನ್ನವಳ ಅಧರ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಅಧರ*
ಜನರು ಬೆದರಿಹರು
ಮಾರುಕಟ್ಟೆಯ ಜೇನಿಂದ
ತೊಂದರೆಗೊಳಗಾಗುವುದು
ತಮ್ಮ ಉದರ|
ನನಗಂತೂ ಭಯವಿಲ್ಲ
ನಾನೀಗಲೂ ಆಶ್ರಯಿಸಿರುವೆ
ಜೇನಿಗೆ ನನ್ನವಳ ಅಧರ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಹುಟ್ಟು ಗುಣ*
ಜೀವನದಿ ಬರೀ
ಸಿಹಿಯೇ ಬೇಕೆಂದು
ಕಿತ್ತು ತಿನ್ನುವ
ಸ್ವಾರ್ಥವ ಮಾನವ
ಬಿಡಲೇಇಲ್ಲ |
ಎಷ್ಟೇ ಕಿತ್ತರೂ
ಜೇನುಮಾತ್ರ ಗೂಡು
ಕಟ್ಟುವ ಭರವಸೆ
ಕಳೆದುಕೊಂಡಿಲ್ಲ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸುಸಂಸ್ಕಾರ*
ಸಂಪೂರ್ಣ ಜಗವನ್ನೇ
ಗೆಲ್ಲಬಹುದು
ನಮ್ಮಲ್ಲಿ ಇದ್ದರೆ
ಸುಸಂಸ್ಕಾರ|
ಗೆದ್ದ ಸರ್ವವನ್ನು
ಕಳೆದುಕೊಳ್ಳುವೆವು
ಸುಳಿದರೆ ಸ್ವಲ್ಪ
ಅಹಂಕಾರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕುರ್ಚಿಗಳು _ ಭಾವನೆಗಳು
ಮದುವೆಯ ಸಂಭ್ರಮದಿ
ಮಸಣ ಯಾತ್ರೆಯ ನೋವಿನಲಿ
ದೇವರ ಜಾತ್ರೆಯ ಭಕ್ತಿಯಲಿ
ಅವೇ ಶಾಮಿಯಾನ ಕುರ್ಚಿಗಳು|
ಸಮಯ ಸನ್ನಿವೇಶದಲ್ಲಿ
ನಮಗೆ ಅರಿವಿಲ್ಲದೆ
ಬೇರೆಯಾಗುವವು ಭಾವನೆಗಳು||
೧
*ಮಣ್ಣಿಗೆ*
ನಮ್ಮೆಲ್ಲರ ಪಯಣ
ಮಣ್ಣಿನಿಂದ ಮಣ್ಣಿಗೆ
ಮರಳಿ ಮಣ್ಣಿಗೆ|
ಅದನ್ನರಿತೂ ನಾವು
ಹಪಹಪಿಸುತಿಹೆವು
ಹೆಣ್ಣು, ಹೊನ್ನು ಮಣ್ಣಿಗೆ||
೨
*ಪರಿಣಾಮ*
ಕಲುಷಿತ ಮಾಡುತಿಹೆವು
ನಮ್ಮ ಪವಿತ್ರ ಮಣ್ಣನ್ನು|
ಸಂರಕ್ಷಣೆ ಮಾಡದಿದ್ದರೆ
ತಿನ್ನಬೇಕಾದೀತು ಮಣ್ಣನ್ನು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ