11 ಅಕ್ಟೋಬರ್ 2020

ಮಕ್ಕಳ ಆಟ (ಶಿಶು ಗೀತೆ)


 *ಮಕ್ಕಳ ಆಟ*



ಕಿಟ್ಟು ಬಂದನು ಪುಟ್ಟನ ಮನೆಗೆ

ಆಟವನಾಡಲು

ಕಾಲಿಗೆ ಎರಗಿದನವನು ಪುಟ್ಟನ

ಅಜ್ಜಿಯ ನೋಡಲು



ಪೆನ್ಸಿಲ್ ಪೇಪರ್ ಹಿಡಿದು

ಪರಿಸರ ಚಿತ್ರವ ಬಿಡಿಸಿದರು

ಬಣ್ಣದ ಬ್ರಷ್ಷನು ಹಿಡಿದು

ಚಿತ್ರಕೆ ಬಣ್ಣವ ತುಂಬಿದರು.


ದಾರವ ಹಿಡಿದು ಸೂತ್ರವ ಕಟ್ಟಿ

ಪತಂಗ ಮಾಡಿದರು

ಬಯಲಿಗೆ ಬಂದು ಪತಂಗ

ಹಾರಿಸಿ ಕುಣಿದಾಡಿದರು.


ಚಾಟಿಯ ಹಿಡಿದು ಬುಗುರಿಗೆ 

ಸುತ್ತಿ ಆಟವನಾಡಿದರು

ಹಸಿವಾದಾಗ ಅಮ್ಮನು ಕರೆದು

ಊಟವ ನೀಡಿದರು.


ಸಂಜೆಯಾಗಿದ್ದು ತಿಳಿಯಲೆ ಇಲ್ಲ

ಆಡುತ ವಿವಿಧ ಆಟ

ಕಿಟ್ಟು ಹೊರಟನು ತನ್ನಯ ಮನೆಗೆ  ಮಾಡುತ ಗೆಳಯಗೆ ಟಾಟಾ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಎರಡು ಚುಟುಕುಗಳು


 

ಚುಟುಕು ೧



*ಮಾಸದ ಪ್ರೀತಿ*



ನವೆಂಬರ್ ತಿಂಗಳಲ್ಲಿ

ಕನ್ನಡ ಧ್ವಜ ಹಿಡಿದು 

ಕೆಂಪು ಹಳದಿಯ ಬಟ್ಟೆಗಳನ್ನು

ತೊಟ್ಟು ಕೂಗಿದ್ದೇ ಕೂಗಿದ್ದು

ಕನ್ನಡ, ಕನ್ನಡ,ಕನ್ನಡ|

ಮುಂದಿನ ಹನ್ನೊಂದು ತಿಂಗಳು

ಅದೇ ಮಾಮೂಲು

ಎನ್ನಡ, ಎಕ್ಕಡ, ವಾಡ||


ಚುಟುಕು ೨


*ಅರ್ಹತೆ*


ರಾಜಕಾರಣಿಗಳಿಗೆ ನಮ್ಮ

ನಮ್ಮ ಸಂವಿಧಾನದಲ್ಲಿ 

ನಿಗಧಿಪಡಿಸಿಲ್ಲ ಕನಿಷ್ಟ

ವಿದ್ಯಾರ್ಹತೆ|

ಮಂತ್ರಿಯ ಮಗನಿಗೆ ಅಮ್ಮನೆಂದರು

ಪೀಯೂಸಿ ಪೇಲಾದ್ರೇನಂತೆ, ನೀಂತ್ಕೋ

ಗ್ರಾಮ ಪಂಚಾಯಿತಿ ಚುನಾವಣೆ

ಮುಂದೈತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



ಪ್ರಜಾ ಪ್ರಗತಿ ಹನಿಗಳು ೧೧/೧೦/೨೦೨೦


 

ಪ್ರತಿನಿಧಿ ಪತ್ರಿಕೆಯಲ್ಲಿ ಹನಿಗಳು ೧೧/೧೦.೨೦೨೦


 

08 ಅಕ್ಟೋಬರ್ 2020

ಸಿಹಿಜೀವಿಯ ಹನಿಗಳು


 *ಸಿಹಿಜೀವಿಯ ಹನಿಗಳು*


(ಇಂದು ವಿಶ್ವ ದೃಷ್ಟಿ ದಿನ)




*ದಾನವ?*


ನಿನ್ನ ನೇತ್ರಗಳ 

ಮಾಡಿದರೆ ದಾನವ|

ನೀನಲ್ಲವೇ ಅಲ್ಲ

ದಾನವ|| 



*ಸ್ತೋತ್ರ*


ನೀ ಸತ್ತ ಮೇಲೆ 

ದಾನವಾಗಿ ಕೊಟ್ಟರೆ

ನಿನ್ನ ನೇತ್ರ|

ಈ ಜಗವೇ ಜಪಿಸುವುದು

ನಿನ್ನ ಸ್ತೋತ್ರ||




*ಒಳಗಣ್ಣು*


ಯಾರಾದರೂ ದಾನ

ಮಾಡಬಹುದು ಕಣ್ಣು|

ನೀನೇ ಪಡೆದುಕೊಳ್ಳಬೇಕು

ನಿನ್ನ ಒಳಗಣ್ಣು||



*ಪಾವನ*


ದಾನ ಮಾಡಿದರೆ 

ನಮ್ಮ ನಯನ|

ನಮ್ಮ ಜೀವನವಾಗುವುದು

ಪಾವನ||



*ದೃಷ್ಟಿಹೀನರು*



ಇತ್ತೀಚಿಗೆ ಮಹಿಳೆಯರ

ಮಕ್ಕಳ, ಅಮಾಯಕರ

ಮೇಲಿನ ದೌರ್ಜನ್ಯಕ್ಕೆ 

ಕಾರಣರಾಗಿದ್ದಾರೆ 

ಹೀನರು|

ಅವರೇ ನಿಜವಾದ

ದೃಷ್ಟಿ ಹೀನರು||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು