*ಕಷ್ಟ_ಸಂಕಷ್ಟ*
ಸ್ನೇಹ, ಮಾನ, ಧನ
ಈ ಮೂರನ್ನೂ ಗಳಿಸುವುದು ,ಉಳಿಸಿಕೊಳ್ಳುವುದು ಕಷ್ಟ|
ಇವಿಲ್ಲದಿರೆ ಮಾನವಗೆ
ತಪ್ಪಿದ್ದಲ್ಲ ಸಂಕಷ್ಟ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಕಷ್ಟ_ಸಂಕಷ್ಟ*
ಸ್ನೇಹ, ಮಾನ, ಧನ
ಈ ಮೂರನ್ನೂ ಗಳಿಸುವುದು ,ಉಳಿಸಿಕೊಳ್ಳುವುದು ಕಷ್ಟ|
ಇವಿಲ್ಲದಿರೆ ಮಾನವಗೆ
ತಪ್ಪಿದ್ದಲ್ಲ ಸಂಕಷ್ಟ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸ್ನೇಹ*
ಸಾವಿರಾರು ಸ್ನೇಹಿತರನ್ನು
ಸಂಪಾದನೆ ಮಾಡುವುದು
ದೊಡ್ಡದಲ್ಲ|
ಒಂದು ಸ್ನೇಹವನ್ನು ಸಾವಿರಾರು
ವರ್ಷಗಳ ಕಾಲ ಕಾಪಾಡುವುದು
ಸುಲಭವಲ್ಲ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಜ್ಜನರ ಸಂಗ*
ಕುಡಿಯಲು ಸಿಹಿನೀರೆ
ಬೇಕು ಎಷ್ಟಿದ್ದರೇನು
ಸುತ್ತ ಮುತ್ತ ಸಾಗರ|
ನಮ್ಮನ್ನು ಅರಿಯಲು
ವ್ಯಕ್ತಿತ್ವ ಬೆಳಗಲು
ಸಜ್ಜನರ ಸಂಗವೇ ಬೇಕು
ಎಷ್ಟಿದ್ದರೇನು ಜನಸಾಗರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು