07 ಜೂನ್ 2020

ಸಿಹಿಜೀವಿಯ ಹನಿ

ಸಿಹಿಜೀವಿಯ ಹನಿ

ಕೆನ್ನೆಗೆ ಹೊಡೆತ

ಮೂರ್ಖರೊಂದಿಗೆ
ವಾದ ಮಾಡುವುದು
ನಿಮ್ಮ ಕೆನ್ನೆ ಮೇಲೆ
ಕುಳಿತ ಸೊಳ್ಳೆ
ಸಾಯಿಸಲು ಪಣ
ತೊಟ್ಟಂತೆ ತಿಳಿಯಿರಿ|
ಸೊಳ್ಳೆ ಸಾಯಲಿ
ಬಿಡಲಿ ನಿಮ್ಮ
ಕೆನ್ನೆಗೆ ನೀವೇ
ಹೊಡೆದುಕೊಳ್ಳುವಿರಿ||

*ಸಿ ಜಿ ವೆಂಕಟೇಶ್ವರ*

06 ಜೂನ್ 2020

ಸಿಹಿಜೀವಿಯ ಹಾಯ್ಕುಗಳು ( ಹೆಚ್ ಎನ್ ನೆನಪಲ್ಲಿ)


*ಸಿಹಿಜೀವಿಯ
ಹಾಯ್ಕುಗಳು* ೪೧ ರಿಂದ ೪೪
೪೧

ಸರಳತೆಗೆ
ಶತಮಾನ ಸಂಭ್ರಮ
ನರಸಿಂಹಯ್ಯ.

೪೨

ವಿದ್ಯಾದೇಗುಲ
ನ್ಯಾಷನಲ್ ಕಾಲೇಜು
ಹೆಚ್ಚೆನ್ ಕೂಸು.

೪೩

ಹೆಚ್ಚೆನ್ ಮೇಷ್ಟ್ರು
ನಡೆ, ನುಡಿ, ವಿಚಾರ
ನೇರ ,ಸರಳ .

೪೪

ಸ್ವಾತಂತ್ರ್ಯ ವೀರ
ಗಾಂಧೀವಾದಿ ಚಿಂತಕ
ನಮ್ಮಯ ಮೇಷ್ಟ್ರು.

*ಸಿ ಜಿ‌ ವೆಂಕಟೇಶ್ವರ*

ಹೆಮ್ಮೆಯ ಭಾರತೀಯರು ( ದೇಶ ಭಕ್ತಿ ಗೀತೆ)

*ಹೆಮ್ಮೆಯ ಭಾರತೀಯರು*

ಜಗಕೆ ಮಾದರಿ ಇಂದು
ನನ್ನಯ ಭಾರತ
ಯುಗದ ಹಿರಿಮೆಯ
ಕಂಡಿದೆ ಇದು ನನ್ನ ಭಾರತ

ಸುತ್ತಲ ಶತೃಗಳ
ಎದೆಗಳ ನಡುಗಿಸಿದೆ
ಕೊತ್ತಲ ಕೋಟೆಗಳಿಲ್ಲದೆ
ಜನರಿಗೆ ರಕ್ಷಣೆ ನೀಡಿದೆ.

ಜ್ಞಾನದಲಿ ವಿಜ್ಞಾನದಿ
ಅಪರಿಮಿತ ಸಾಧನೆ ತೋರಿದೆ
ದಾಸ್ಯ ಸಂಕೋಲೆಯ ಕಳಚಿ
ಸ್ವಾಭಿಮಾನದ ಬಾಳು ನೀಡಿದೆ.

ಕೃಷಿಯು, ಉದ್ದಿಮೆ, ಸೇವೆಗೆ
ಭಾರತ ಹೆಸರುವಾಸಿ ಆಗುತಿದೆ
ಪ್ರಗತಿಯ ಪಥದಲಿ ನಾವೇ
ಮುಂದು ಎಂದು ಸಾಗುತಿದೆ.

ಗುರಿ ಇರುವ ಜನರಿಹರು
ಗುರುವಾಗಿ ಬೆಳೆಯುವರು
ವಿಶ್ವ ಗುರು ನಮ್ಮಮ್ಮ
ಎಂದು ಘರ್ಜಿಸುವರು.

ಸಿ ಜಿ ವೆಂಕಟೇಶ್ವರ
ತುಮಕೂರು




05 ಜೂನ್ 2020

ಸಿಹಿಜೀವಿಯ ಹಾಯ್ಕುಗಳು_೩೧ ರಿಂದ ೪೦( ಇಂದು ವಿಶ್ವ ಪರಿಸರ ದಿನ)

*ಸಿಹಿಜೀವಿಯ ಹಾಯ್ಕುಗಳು*

(ಇಂದು ವಿಶ್ವ ಪರಿಸರ ದಿನ)

೩೧

ಗಿಡವ ನೆಡು
ಶುಧ್ದ ಗಾಳಿಯ ಪಡೆ
ಜಗದುಳಿವು.

೩೨

ಇಂದಿಗಾದರೂ
ಒಂದು ಗಿಡ ನೆಡುವ
ನಮ್ಮೊಳಿತಿಗೆ.

೩೩

ಉಳಿಸಿದರೆ
ಜಲ,ನೆಲ,ಪವನ
ನೀನೇ ಪಾವನ.

೩೪

ನನಗೆ ಗೊತ್ತು
ಈ ಭೂಮಿ ನನದಲ್ಲ
ಮಗುವ ಕಡ .

೩೫

ಪರಿಸರದ
ಮಲಿನ ಮಾಡಿದರೆ
ನೆಮ್ಮದಿ ಏಲ್ಲಿ?

೩೬

ನಮ್ಮದಾಗಲಿ
ಗಿಡ ಮರ ನೆಡುವ
ಹಸಿರ ಹಾದಿ.

೩೭

ಅಸಡ್ಡೆ ಬೇಡ
ಇರುವುದೊಂದೆ ಭೂಮಿ
ಸಂರಕ್ಷಿಸೋಣ.

೩೮

ನಮಗೇತಕೆ
ಪಳೆಯುಳಿಕೆ ಇಂಧನ
ಸೂರ್ಯನೇ ಶಕ್ತಿ.

೩೯

ಘನ ತ್ಯಾಜ್ಯವ
ಮರುಬಳಕೆಯ ಮಾಡಿ
ಘನ ಕೆಲಸ .

೪೦

ಕಾನನ ಬೇಕು
ತಡೆಯೋಣ ನಾವೆಲ್ಲ
ಕಾಡಿನ ನಾಶ.

ಸಿ ಜಿ ವೆಂಕಟೇಶ್ವರ

03 ಜೂನ್ 2020

ಸಿಹಿಜೀವಿಯ ಮೂವತ್ತು ಹಾಯ್ಕುಗಳು

ಸಿಹಿಜೀವಿಯ ಮೂವತ್ತು ಹಾಯ್ಕುಗಳು



*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ.



*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ.



*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ



*ಕರುಣಾಮೂರ್ತಿ*

ಕರುಣಾಮೂರ್ತಿ
ಸಹನೆಯ ಕಡಲು
ನಮ್ಮಯ ತಾಯಿ.



*ಮಾತೆ*

ದೇವರು ಇಲ್ಲಿ
ಕಣ್ಣಿಗೆ ಕಾಣುವಳು
ಅವಳೇ ಮಾತೆ .




ಕವಿತೆಗಳು
ಹೃದಯದ ಆಳದ
ಭಾವನೆಗಳು



ಮಳೆಯಾಗಿದೆ
ಒಳಿತಿಗಿಂತ ಹೆಚ್ಚು
ಕೊಚ್ಚಿಹೋಗಿದೆ


ಬಡಿದಾಡುವೆ
ಇಲ್ಲಿರುವೆ ಕೇವಲ
ಮೂರುದಿವಸ



ನಾನೆನ್ನದಿರು
ಹಮ್ಮಿನಲಿ‌ ಏನಿದೆ?
ನಾವೆಂದುನೋಡು

೧೦
ಮೊದಲಿದ್ದವು
ಕಡಲಿನಾಳದಲಿ
ಕೆನ್ನೆಸೇರಿವೆ



೧೧
ಕೀರುತಿಗೊಬ್ಬ
ಬೇಕೆಂದು ಕೊರಗುವೆ
ಆರತಿಗೊಬ್ಬಳು?

೧೨

ಕ್ರಾಂತಿಯ ಕಿಡಿ
ಈಗಲೂ ಹರಿದಿದೆ
ವೀರಸಾವರ್ಕರ್

೧೩

ಉರಿಯಲಾಸೆ
ಇಂಧನ ತರಬೇಕು
ಅವನಿಗೀಗ


೧೪

ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.

೧೫.

ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .

೧೬

ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.

೧೭


ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.


೧೮

ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?

೧೯

ಮೊದಲು ಮಿಂಚು
ಅನಂತರ ಗುಡುಗು
ಮಳೆಯೋ ಮಳೆ

೨೦

ಮಕ್ಕಳಿಗಲ್ಲ
ಎಲ್ಲರಿಗೂ ಪರೀಕ್ಷೆ
ಪಾಸಾಗೋಣವೆ?

೨೧

ಹೊಸ ಸೇರ್ಪಡೆ
ಚಳಿ ಮಳೆ ಬೇಸಗೆ
ಕರೋನ ಕಾಲ


೨೨

ರೂಪದರ್ಶಿಗೆ
ಸಾವಿರದ ಶರಣು
ಅಭಿನಂದನೆ.

೨೩

ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ

೨೪

ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್


೨೫


ಚಿತ್ರಗಳಲ್ಲಿ
ಹಂಸ ರವಿಯ ಮಿಲನ
ಸಂಗೀತೋತ್ಸವ



೨೬

ಚಂಡಮಾರುತ
"ನಿಸರ್ಗದ ಮುನಿಸು"
ರೌದ್ರಾವತಾರ.


೨೭

ಮಾರುತ ಮಳೆ
ಜೋಡಿ ಅನಾಹುತ
ಚಂಡಮಾರುತ

೨೮

ತೂಕ ಇಳಿಸು
ದಢೂತಿ ದೇಹವೇಕೆ?
ಸೈಕಲ್ ಹೊಡಿ

೨೯

ಸೈಕಲ್ ತುಳಿ
ಶ್ವಾಸಕೋಶಕ್ಕೆ ಬಲ
ಸ್ವಾಸ್ಥ್ಯ ಜೀವನ

೩೦

ಮಾಲಿನ್ಯವಿಲ್ಲ
ಇಂಧನವು ಬೇಕಿಲ್ಲ
ಸೈಕಲ್ ಸರಿ



ಸಿ‌ ಜಿ ವೆಂಕಟೇಶ್ವರ
ತುಮಕೂರು