22 ಮೇ 2020

ನೇಪಾಳ _ತಾಳ (ಹನಿ)


*ನೇಪಾಳ_ತಾಳ*

ಭಾರತಾಂಬೆಯ
ನೆರೆಹೊರೆಯಲ್ಲಿ
ಹೊರೆಯಾಗದಂತೆ
ಇತ್ತು ನೇಪಾಳ|
ಈಗೀಗ ಅದು
ಕುಣಿಯುತ್ತಲಿದೆ
ಚೀನಾ ಹಾಕಿದಂತೆ ತಾಳ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಸಿಹಿಜೀವಿಯ ತ್ರಿಪದಿ

*ಸಿಹಿಜೀವಿಯ ತ್ರಿಪದಿ*

ಕಾಸಗಲ ಕಣ್ಣೀನ ಬಾಸಿಂಗದ ಹಣೆಯ
ಏಸು ಚೆಂದದ ಜಾಣ| ನನ ಕಂದ
ಕಾಸಿ ನೀರೆರೆವ ಬಾರೋ ಸಿಹಿಜೀವಿ

*ಸಿ ಜಿ ವೆಂಕಟೇಶ್ವರ*

ಶಾಯರಿ


*ಶಾಯರಿ*

ಅಂದು ಕಾಲ್ತೆಗೆದು ಹೋದೆ ನೀ ನಿಲ್ಲದೆ
ಗಡಿಯಾರದ ಮುಳ್ಳೂ  ನಿಂತಿದೆ
ನೀನಿಲ್ಲದೆ
ಸರಿಸಬಹುದು ಗಡಿಯಾರದ ಮುಳ್ಳು
ನೀನೇ ಬರಬೇಕು ಕೀಳಲು ಎದೆಗೆ ಚುಚ್ಚಿದ ಮುಳ್ಳು

*ಸಿ ಜಿ ವೆಂಕಟೇಶ್ವರ*


20 ಮೇ 2020

ಟಿಕೆಟ್ (ಹನಿಗವನ)

*ಟಿಕೆಟ್*

ಲಾಕ್ಡೌನ್ ಸಡಿಲಿಸಿ
ಬಹಳ‌‌ ದಿನಗಳ ನಂತರ
ಕಂಡಕ್ಟರ್ ಕೊಟ್ಟರು
ಟಿಕೆಟ್
ಮುನ್ನೆಚ್ಚರಿಕೆ ಮರೆತರೆ
ಎಲ್ಲರೂ ತೆಗೆದುಕೊಳ್ಳುವರು
ಟಿಕೆಟ್

ಸಿ ಜಿ‌ ವೆಂಕಟೇಶ್ವರ