10 ಮೇ 2020

ಅಮ್ಮನ ಕುರಿತು ಹಾಯ್ಕುಗಳು ( ಇಂದು ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ)

ಅಮ್ಮನ ಕುರಿತು ಹಾಯ್ಕುಗಳು
*ಕರುಣಾಮೂರ್ತಿ*

ಕರುಣಾಮೂರ್ತಿ
ಸಹನೆಯ ಕಡಲು
ನಮ್ಮಯ ತಾಯಿ.

*ಮಾತೆ*

ದೇವರು ಇಲ್ಲಿ
ಕಣ್ಣಿಗೆ ಕಾಣುವಳು
ಅವಳೇ ಮಾತೆ .


ಸಿ ಜಿ ವೆಂಕಟೇಶ್ವರ

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ *ಅಮ್ಮನಿಗೊಂದು ಪತ್ರ ,ಮತ್ತು ಕವನ* ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐 *ಸಿ ಜಿ ವೆಂಕಟೇಶ್ವರ*


ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ *ಅಮ್ಮನಿಗೊಂದು ಪತ್ರ ,ಮತ್ತು ಕವನ* ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐   *ಸಿ ಜಿ ವೆಂಕಟೇಶ್ವರ*

09 ಮೇ 2020

ಮೂರು ಹಾಯ್ಕುಗಳು

ಮೂರು ಹಾಯ್ಕುಗಳು

*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ

*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ

*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ

ಸಿ ಜಿ ವೆಂಕಟೇಶ್ವರ

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

05 ಮೇ 2020

ಮುತ್ತು (ಇಂದು‌ ಕ ಸಾ ಪ ಸಂಸ್ಥಾಪನಾ ದಿನ)

*ಮುತ್ತು*

(ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ)

ಅದು ಕನ್ನಡಿಗರ ಮುತ್ತು
ಕನ್ನಡಕೆ ಪ್ರೋತ್ಸಾಹವಿತ್ತು
ತೋರಿಸಿದೆ ಕನ್ನಡದ ತಾಕತ್ತು
ಇದು ಕನ್ನಡಿಗರೆಲ್ಲರ  ಸ್ವತ್ತು
ಅದುವೆ ಕನ್ನಡ ಸಾಹಿತ್ಯ ಪರಿಷತ್ತು

*ಸಿ‌ ಜಿ ವೆಂಕಟೇಶ್ವರ*