09 ಮೇ 2020

ಮೂರು ಹಾಯ್ಕುಗಳು

ಮೂರು ಹಾಯ್ಕುಗಳು

*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ

*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ

*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ

ಸಿ ಜಿ ವೆಂಕಟೇಶ್ವರ

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

05 ಮೇ 2020

ಮುತ್ತು (ಇಂದು‌ ಕ ಸಾ ಪ ಸಂಸ್ಥಾಪನಾ ದಿನ)

*ಮುತ್ತು*

(ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ)

ಅದು ಕನ್ನಡಿಗರ ಮುತ್ತು
ಕನ್ನಡಕೆ ಪ್ರೋತ್ಸಾಹವಿತ್ತು
ತೋರಿಸಿದೆ ಕನ್ನಡದ ತಾಕತ್ತು
ಇದು ಕನ್ನಡಿಗರೆಲ್ಲರ  ಸ್ವತ್ತು
ಅದುವೆ ಕನ್ನಡ ಸಾಹಿತ್ಯ ಪರಿಷತ್ತು

*ಸಿ‌ ಜಿ ವೆಂಕಟೇಶ್ವರ*



ಕಾಪಾಡಿಕೊಳ್ಳಿರಿ ( ವಿಶ್ವ ಅಸ್ತಮಾ ದಿನದ ಪ್ರಯುಕ್ತ ಹನಿ)

*ಕಾಪಾಡಿಕೊಳ್ಳಿರಿ*

(ಇಂದು ವಿಶ್ವ ಅಸ್ತಮಾ ದಿನ)

ಧೂಳು ಗಾಳಿಯ ಸೇವಿಸದಿರಿ
ಧೂಮಲೀಲೆಗಳಿಂದ ದೂರವಿರಿ
ಬಾಳ ಪಯಣದಿ ಶ್ವಾಸಕೋಶಕೆ
ಮಹತ್ವ ನೀಡಿ ಕಾಪಾಡಿಕೊಳ್ಳಿರಿ
ಹೀಗಿದ್ದರೆ ಅಸ್ತಮಾ ನಿಮ್ಮ ಬಳಿ
ಎಂದೆಂದೂ ಸುಳಿಯದು ಕೇಳಿರಿ

*ಸಿ ಜಿ ವೆಂಕಟೇಶ್ವರ*