14 ಮಾರ್ಚ್ 2020

ಎಲ್ಲಿರುವೆ ಮಳೆರಾಯ

*ಎಲ್ಲಿರುವೆ ಮಳೆರಾಯ*
ಕವನ

ಎಲ್ಲಿರುವೆ ಮಳೆರಾಯ
ಬಂದು ಬಿಡು ಮನೆಕಾಯ

ಜನ ಜಾನುವಾರುಗಳು
ಬಳಲಿ ಬೆಂಡಾಗಿಹರು
ತೊಳಲಾಟದಲಿ ನೀನು
ಬರಲೆಂದು‌ ಕಾದಿಹರು.

ಭೂತಾಯಿ ಬಿರಿದಿಹಳು
ನಿನ್ನಾಗಮನಕೆ ಕಾದಿಹಳು
ಎಂದು ಬರುವೆ ಎಂದು
ಇಂದೇ ನಮಗೆ ಹೇಳು.

ನೀನು‌ ಇಲ್ಲದೆ ನಮಗೆ
ಬಾಳುವೆಯೆ ಇಲ್ಲ
ಬರದೆ ಸತಾಯಿಸುವುದು
ನಿನಗೆ ತರವಲ್ಲ.

ನೀನು ಬಾರದಿರೆ ಭುವಿಗೆ
ಬದುಕು ಭಾರವಾಗುವುದು.
ನೀ ಬಂದರೆ ಧರೆಗೆ
ಬರವೆ ಬಾರದು.

*ಸಿ ಜಿ‌ ವೆಂಕಟೇಶ್ವರ*
ತುಮಕೂರು


09 ಮಾರ್ಚ್ 2020

ಇಂದಿನ *ವಿಜಯವಾಣಿ ಪ್ರಜಾವಾಣಿ, ನನ್ನ ಲೇಖನ



ಇಂದಿನ *ವಿಜಯವಾಣಿ * ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ಪ್ರಜಾವಾಣಿ,* ಪತ್ರಿಕೆಯಲ್ಲಿ ನನ್ನ ಲೇಖನ



ಇಂದಿನ ಪ್ರಜಾವಾಣಿ,  ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ


ಇಂದಿನ  ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ

08 ಮಾರ್ಚ್ 2020

ಮಾರುತಿ - ಮೂರುತಿ(ಕವನ)

ಮಾರುತಿ- ಮೂರುತಿ (ಕವನ)

ನಾನು ಕೋತಿ
ನಾನು ಮಾರುತಿ
ಕಡಿಮೆಯೇನಿಲ್ಲ
ನನ್ನ ಕೀರುತಿ
ಪೂಜಿಸುವರು ನನ್ನ
ಮೂರುತಿ.

ಚೇಷ್ಟೆಗೆ ಮಾಡುವೆನು ಆಗಾಗ
ಕೆಡುಕಿಗೆ ನನ್ನಲಿಲ್ಲ ಜಾಗ
ನಾನು ಜಗದ ಅವಿಭಾಜ್ಯ ಭಾಗ
ನಾನಿರಲು ವನವು ಸೊಗ
ನನ್ನ ನೋಡುವುದೇ ನಿಮಗೆ ಸೋಜಿಗ.

ಕಟ್ಟಿಹರು ಊರಿಗೊಂದು
ಸುಂದರ ಗುಡಿ
ನನ್ನ ಕಂಡರೆ
ಕಿರುಚುವರು ಹೊಡಿ ಬಡಿ
ನಾಡು ಬೇಡವೆಂದು
ಕಾಡಿಗೋಡಿದರೆ
ಹಚ್ಚುವಿರಿ ಬೆಂಕಿಯ ಕಿಡಿ
ದಯವಿಟ್ಟು ನನ್ನ ಪಾಡಿಗೆ
ನನ್ನ ಬಿಡಿ.

ಸಿ.ಜಿ ವೆಂಕಟೇಶ್ವರ