23 ಜನವರಿ 2020

ನನ್ನಮ್ಮ(ಲೇಖನ)

ತಾಯಿ

ನನಗೆ ನೆನಪಿದೆ ನಾನಿನ್ನು ನಾಲ್ಕು ವರ್ಷದ ಹುಡುಗನಾಗಿದ್ದಾಗ ನನ್ನ ತಂದೆ ಹಾವು ಕಚ್ಚಿ ತೀರಿಕೊಂಡರು. ಆಗ ಮನೆಯಲ್ಲಿ ಶೂನ್ಯ ಆವರಿಸಿದ್ದ ಸ್ಥಿತಿ . ಹಳ್ಳಿಯಲ್ಲಿ ಸ್ವಂತ ಮನೆಯೇನೋ ಇತ್ತು ದೂರದಲ್ಲಿ ನಾಲ್ಕು ಎಕರೆ ಒಣಬೇಸಾಯದ ಭೂಮಿಯು ಇತ್ತು, . ನಮ್ಮ ಅಮ್ಮನಿಗೆ ಒಂದೇ ಚಿಂತೆ ಈ ಇಬ್ಬರು ಮಕ್ಕಳನ್ನು ಹೇಗೆ ಸಾಕಲಿ ,? ಹೇಗೆ ದೊಡ್ಡವರ ಮಾಡಲಿ ? ನಾನು ಹೇಗೆ ದುಡಿಯಲಿ? . ಹೊಲದಲ್ಲಿ ವ್ಯವಸಾಯ ಮಾಡಿ ದುಡಿಯೋಣ ,ಎಂದರೆ ದಾಯಾದಿಗಳ ಉಪಟಳ, ಒಬ್ಬಂಟಿ ಹೆಂಗಸೆಂದು ಹೆದರಿಸಿ ,ಬೆದರಿಸಿ, ಹೊಲದಲ್ಲಿ ‌ಹೆಜ್ಜೆ ಇಡದಂತೆ ಮಾಡಿದರು. ಆಗ ನಮ್ಮ ಅಮ್ನ ಆಯ್ದುಕೊಂಡ ಆಯ್ಕೆ ಕೂಲಿ ಮಾಡಿ ನಮ್ಮ ಸಾಕುವುದು.ಮತ್ತು ಓದಿಸಿ ವಿದ್ಯಾವಂತರ ಮಾಡುವುದು. ಈ ಹಂತದಲ್ಲಿ ನನಗೆ P  ಲಂಕೇಶ್ ರವರ ಅಮ್ಮ‌ ಎಂಬ ಕವನ ನೆನಪಾಗುತ್ತದೆ ಅದರಲ್ಲಿ ಬರುವ ಅಮ್ಮನಂತೆ ನನ್ನಮ್ಮ ಸರೀಕರೊಡನೆ ತನ್ನ ಮಕ್ಕಳನ್ನು ತಲೆ ಎತ್ತುವಂತೆ ಬೆಳೆಸಲು ಪಣ ತೊಟ್ಟಿದ್ದರು. ತಾನು ಹರಿದ‌ ಸೀರೆ ಉಟ್ಟರೂ ನಮಗೆ ಯುಗಾದಿ ಹಬ್ಬಕ್ಕೆ ಎರಡು ಜೊತೆ ಬಟ್ಟೆಗಳನ್ನು ಕೊಡಿಸಲು ಮರೆಯುತ್ತಿರಲಿಲ್ಲ .ನಮಗೆ ಮನೆಯಲ್ಲಿ ರಾತ್ರಿ ಊಟ ಹಾಕಿ .ರಾತ್ರಿಯ ಪಾಳಿಯಲ್ಲಿ ಸುಗ್ಗಿ ಕಣದಲ್ಲಿ ಕೆಲಸ ಮಾಡುತ್ತಿದ್ದರು. ಈಗಲೂ ನನಗೆ ಅನುಮಾನವಿದೆ ನಮ್ಮಮ್ಮನಿಗೆ ಭಗವಂತ ಎಷ್ಟು ಶಕ್ತಿ ಕೊಟ್ಟಿದ್ದ . ಈ ನಡುವೆ ನಮ್ಮ ಅಮ್ಮ ಹೆರಿಗೆ ಮಾಡಿಸುವ ಸೂಲಗಿತ್ತಿಯ ಕೆಲಸ ಮಾಡುತ್ತಿದ್ದರು. ಕೆಲವು ಸಲ  ಹಗಲೆಲ್ಲಾ ಕೂಲಿ ಮಾಡಿ ಸುಸ್ತಾಗಿದ್ಧ ಅಮ್ಮ ನಿದ್ದೆಗೆ ಜಾರಿದಾಗ ಹೊತ್ತಲ್ಲದ ಹೊತ್ತಲ್ಲಿ " ಅಕ್ಕ ನಮ್ಮ ಮಗಳಿಗೆ ಹೆರಿಗೆ ನೋವು ಶುರುವಾಗಿದೆ ಬಾರಕ್ಕ" ಎಂದಾಗ ಅಮ್ಮ  ಮರುಮಾತಾಡದೇ ಎದ್ದು ಹೋದದ್ದೇ ಗೊತ್ತು ಮನೆಗೆ ಯಾವಾಗ ಬಂದು ಮಲಗಿದರೋ ಆದರೆ  ಬೆಳಗಿನ ಜಾವ  ಬೇಗನೆ ಎದ್ದು ಮನೆ ಮುಂದೆ ಕಸ ತೆಗೆದು ನೀರು‌ಹಾಕುವಾಗ ನಮಗೆ ಎಚ್ಚರವಾಗುತ್ತಿತ್ತು.  ಒಮ್ಮೆ ನಾನು ಎಂಟನೇ ತರಗತಿ ಓದುವಾಗ ನನಗೆ ಜ್ವರ ಬಂದು ಅನಾರೋಗ್ಯ ಪೀಡಿತನಾದಾಗ ಎರಡು ಕಿಲೋಮೀಟರಗಿಂತ ಹೆಚ್ಚು ದೂರ ನನ್ನ ಕಂಕುಳಲ್ಲಿ ಎತ್ತಿ ಕೊಂಡು ಹೋಗಿ ನನಗೆ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದರು. ಅಮ್ಮ ನಿನ್ನ ಬಗ್ಗೆ ಬರೆಯಲು ‌ಕುಳಿತರೆ ನಿಮಿಷ ದಿನ ,ವಾರ ,ತಿಂಗಳು ವರ್ಷ ಸಾಲಲ್ಲ ಆದರೂ ಕೆಲವೊಮ್ಮೆ ಹೀಗೆ ನಾಲ್ಕು ಸಾಲು ಬರೆದು ನಿನ್ನ ಜ್ಞಾಪಿಸಿಕೊಂಡರೆ ಎನೋ ಸಮಾಧಾನ.


ಸಿ ಜಿ ವೆಂಕಟೇಶ್ವರ

ಸುಭಾಷ್ ( ಹನಿ) ಸುಭಾಷ್ ಚಂದ್ರ ಬೋಸ್ ಮತ್ತು ನನ್ನ ಎರಡನೇ ಮಗಳು ವರ್ಷಿತಾಳ ಹುಟ್ಟು ಹಬ್ಬ

*ಸುಭಾಷ್*

(ಇಂದು ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ)

ಅವರು ನಿಜವಾದ ನೇತಾರ
ನೇರ ದಿಟ್ಟ ನುಡಿಯ ಹರಿಕಾರ
ಸ್ವಾತಂತ್ರ್ಯ ಹೋರಾಟದ ಧೀರ
ನಂಬಿದ ದೇಶಭಕ್ತರ ಚಂದಿರ
ಪರಂಗಿಗಳ ಪಾಲಿನ ಉರಿವ ಸೂರ್ಯ
ಅವರ ಕಾರ್ಯಕ್ಕೆ ಹೇಳಲೇಬೇಕು
ಶಹಬ್ಬಾಸ್
ಅವರೇ ನಮ್ಮ ಹೆಮ್ಮೆಯ
ಸುಭಾಷ್.

*ಸಿ ಜಿ ವೆಂಕಟೇಶ್ವರ*

21 ಜನವರಿ 2020

ಸ್ವಾಗತಾರ್ಹ (ಪತ್ರಿಕೆಯಲ್ಲಿ ಲೇಖನ)

ಪತ್ರಿಕಾ ಲೇಖನ

ಚುನಾವಣಾ ಆಯೋಗದ
ಸ್ವಾಗತಾರ್ಹ ಕ್ರಮ

ಚುನಾವಣಾ ಆಯೋಗವು ಚುನಾವಣೆಗಳಲ್ಲಿ
ಪೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮತದಾರರ ಗುರುತಿಸುವ ಬಗ್ಗೆ ಯೋಚನೆ ಮಾಡಿರುವುದು ಸ್ವಾಗತಾರ್ಹ. ಈ ರೀತಿ ಮಾಡುವುದರಿಂದ ನಿಜವಾದ ಮತದಾರರ ಗುರುತು ಪತ್ತೆ ‌ಮಾಡಬಹುದು. ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಬೇರೆಯವರು ಬಂದು ತಮ್ಮದಲ್ಲದ ಮತ ಚಲಾಯಿಸಲು ಮತಗಟ್ಟೆಯ ಸಿಬ್ಬಂದಿಯ ಜೊತೆಗೆ ಅನವಶ್ಯಕ ವಾಗ್ವಾದ ಮಾಡುವುದು ಕಂಡುಬರುತ್ತದೆ. ಪೇಸ್ ರೆಕಗ್ನಿಶನರ ತಂತ್ರಾಂಶದ ಸಹಾಯದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಜೊತೆಗೆ ದೋಷ ರಹಿತವಾದ ಯಂತ್ರಗಳ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಊದುವುದು ಕೊಟ್ಟು ಒದರುವುದು ತಂದರು ಎಂದಾಗುತ್ತದೆ.

*ಸಿ.ಜಿ.ವೆಂಕಟೇಶ್ವರ*

ರುಬಾಯಿ

*ರುಬಾಯಿ*

ಪ್ರಿಯೆ,  ಕಣ್ಣ ರೆಪ್ಪೆಗಳಲಿ  ಬಚ್ಚಿಡಲೇ?
ಹೃದಯದಲಿ ಮುಚ್ಚಿಡಲೇ
ಅವಳೆಂದಳು ಬೇಳೆ ,ಉಪ್ಪು         ತರಕಾರಿಯಿಲ್ಲದ ಸಾಂಬಾರ್ ಮಾಡಲೆ?
*ಸಿ.ಜಿ ವೆಂಕಟೇಶ್ವರ*


ಜಗವು ಜಗಮಗಿಸಲಿ (ಕವನ)


*ಜಗವು ಜಗಮಗಿಸಲಿ*

ಜಗವನುದ್ದರಿಸಿದವಳು ಜಗಜ್ಜನನಿ
ತನ್ನ ಮಕ್ಕಳಿಗೆ ಸೃಷ್ಟಿ ಸ್ಥಿತಿ ಲಯದ
ಅಧಿಕಾರವ ನೀಡಿ ಜಗವ ನಡೆಸಲು
ಬ್ರಹ್ಮ ,ವಿಷ್ಣು,,ಮಹೇಶ್ವರರ  ನೇಮಿಸಿಹಳು.
ಜಗ ಸಮತೋಲನದಿಂದಿರುವುದು ದೇವಿಯ ಕೃಪೆ ಎಂದರು ಮುನಿಗಳು.

ಮುನಿದ ವಿಜ್ಞಾನಿ 
ಜಗದ ಮೂಲ ಅಣು, ಪರಮಾಣು,
ಬಿಗ್ ಬ್ಯಾಂಗ್ ನಿಂದ ಉಗಮ
ಸೃಷ್ಟಿ ವೈಜ್ಞಾನಿಕ ಸ್ಥಿತಿ ಸಂಶೋಧನಾ ಫಲ.
ನಾಶವಾದರೆ ಪರಮಾಣುಬಾಂಬು ಅಸ್ತ್ರಗಳಿಂದ, ಇದರಲ್ಲಿ ದೇವಿಯ ಪಾತ್ರವೆಲ್ಲಿ ದೈವದ ನಿಯಮವೆಲ್ಲಿ? ಎಂದರು.

ಇವರೀರ್ವರಲಿ ಯಾರು ಸರಿ? 
ಯಾರು ತಪ್ಪು ?
ಗೊಂದಲದ ಗೂಡಾದ ಮನ 
ಕೊಂಚ ಯೋಚಿಸಿ ಇಂತೆಂದಿತು.

ಆದ್ಯಾತ್ಮ ಇಲ್ಲದ ವಿಜ್ಞಾನ ಕುರುಡು
ವಿಜ್ಞಾನವಿಲ್ಲದ ಆದ್ಯಾತ್ಮ ಬರಡು 
ವಿಜ್ಞಾನಿಗಳ ಹೃದಯದಿ ಆದ್ಯಾತ್ಮ  ಉದಿಸಲಿ.
ಸಂತರು ವೈಜ್ಞಾನಿಕ ದೃಷ್ಟಿಕೋನ ಬೆಳಸಲಿ.
ಆದ್ಯಾತ್ಮ ಮತ್ತು ವಿಜ್ಞಾನ ಸಂಗಮವಾಗಲಿ
ಜಗವು ಜಗಮಗಿಸಲಿ.

ಸಿಹಿಜೀವಿ
*ಸಿ.ಜಿ ವೆಂಕಟೇಶ್ವರ*
ತುಮಕೂರು
9900925529