This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
23 ಜನವರಿ 2020
21 ಜನವರಿ 2020
ಸ್ವಾಗತಾರ್ಹ (ಪತ್ರಿಕೆಯಲ್ಲಿ ಲೇಖನ)
ಪತ್ರಿಕಾ ಲೇಖನ
ಚುನಾವಣಾ ಆಯೋಗದ
ಸ್ವಾಗತಾರ್ಹ ಕ್ರಮ
ಚುನಾವಣಾ ಆಯೋಗವು ಚುನಾವಣೆಗಳಲ್ಲಿ
ಪೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮತದಾರರ ಗುರುತಿಸುವ ಬಗ್ಗೆ ಯೋಚನೆ ಮಾಡಿರುವುದು ಸ್ವಾಗತಾರ್ಹ. ಈ ರೀತಿ ಮಾಡುವುದರಿಂದ ನಿಜವಾದ ಮತದಾರರ ಗುರುತು ಪತ್ತೆ ಮಾಡಬಹುದು. ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಬೇರೆಯವರು ಬಂದು ತಮ್ಮದಲ್ಲದ ಮತ ಚಲಾಯಿಸಲು ಮತಗಟ್ಟೆಯ ಸಿಬ್ಬಂದಿಯ ಜೊತೆಗೆ ಅನವಶ್ಯಕ ವಾಗ್ವಾದ ಮಾಡುವುದು ಕಂಡುಬರುತ್ತದೆ. ಪೇಸ್ ರೆಕಗ್ನಿಶನರ ತಂತ್ರಾಂಶದ ಸಹಾಯದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಜೊತೆಗೆ ದೋಷ ರಹಿತವಾದ ಯಂತ್ರಗಳ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಊದುವುದು ಕೊಟ್ಟು ಒದರುವುದು ತಂದರು ಎಂದಾಗುತ್ತದೆ.
*ಸಿ.ಜಿ.ವೆಂಕಟೇಶ್ವರ*
ಚುನಾವಣಾ ಆಯೋಗದ
ಸ್ವಾಗತಾರ್ಹ ಕ್ರಮ
ಚುನಾವಣಾ ಆಯೋಗವು ಚುನಾವಣೆಗಳಲ್ಲಿ
ಪೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮತದಾರರ ಗುರುತಿಸುವ ಬಗ್ಗೆ ಯೋಚನೆ ಮಾಡಿರುವುದು ಸ್ವಾಗತಾರ್ಹ. ಈ ರೀತಿ ಮಾಡುವುದರಿಂದ ನಿಜವಾದ ಮತದಾರರ ಗುರುತು ಪತ್ತೆ ಮಾಡಬಹುದು. ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಬೇರೆಯವರು ಬಂದು ತಮ್ಮದಲ್ಲದ ಮತ ಚಲಾಯಿಸಲು ಮತಗಟ್ಟೆಯ ಸಿಬ್ಬಂದಿಯ ಜೊತೆಗೆ ಅನವಶ್ಯಕ ವಾಗ್ವಾದ ಮಾಡುವುದು ಕಂಡುಬರುತ್ತದೆ. ಪೇಸ್ ರೆಕಗ್ನಿಶನರ ತಂತ್ರಾಂಶದ ಸಹಾಯದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಜೊತೆಗೆ ದೋಷ ರಹಿತವಾದ ಯಂತ್ರಗಳ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಊದುವುದು ಕೊಟ್ಟು ಒದರುವುದು ತಂದರು ಎಂದಾಗುತ್ತದೆ.
*ಸಿ.ಜಿ.ವೆಂಕಟೇಶ್ವರ*
ಜಗವು ಜಗಮಗಿಸಲಿ (ಕವನ)
*ಜಗವು ಜಗಮಗಿಸಲಿ*
ಜಗವನುದ್ದರಿಸಿದವಳು ಜಗಜ್ಜನನಿ
ತನ್ನ ಮಕ್ಕಳಿಗೆ ಸೃಷ್ಟಿ ಸ್ಥಿತಿ ಲಯದ
ಅಧಿಕಾರವ ನೀಡಿ ಜಗವ ನಡೆಸಲು
ಬ್ರಹ್ಮ ,ವಿಷ್ಣು,,ಮಹೇಶ್ವರರ ನೇಮಿಸಿಹಳು.
ಜಗ ಸಮತೋಲನದಿಂದಿರುವುದು ದೇವಿಯ ಕೃಪೆ ಎಂದರು ಮುನಿಗಳು.
ಮುನಿದ ವಿಜ್ಞಾನಿ
ಜಗದ ಮೂಲ ಅಣು, ಪರಮಾಣು,
ಬಿಗ್ ಬ್ಯಾಂಗ್ ನಿಂದ ಉಗಮ
ಸೃಷ್ಟಿ ವೈಜ್ಞಾನಿಕ ಸ್ಥಿತಿ ಸಂಶೋಧನಾ ಫಲ.
ನಾಶವಾದರೆ ಪರಮಾಣುಬಾಂಬು ಅಸ್ತ್ರಗಳಿಂದ, ಇದರಲ್ಲಿ ದೇವಿಯ ಪಾತ್ರವೆಲ್ಲಿ ದೈವದ ನಿಯಮವೆಲ್ಲಿ? ಎಂದರು.
ಇವರೀರ್ವರಲಿ ಯಾರು ಸರಿ?
ಯಾರು ತಪ್ಪು ?
ಗೊಂದಲದ ಗೂಡಾದ ಮನ
ಕೊಂಚ ಯೋಚಿಸಿ ಇಂತೆಂದಿತು.
ಆದ್ಯಾತ್ಮ ಇಲ್ಲದ ವಿಜ್ಞಾನ ಕುರುಡು
ವಿಜ್ಞಾನವಿಲ್ಲದ ಆದ್ಯಾತ್ಮ ಬರಡು
ವಿಜ್ಞಾನಿಗಳ ಹೃದಯದಿ ಆದ್ಯಾತ್ಮ ಉದಿಸಲಿ.
ಸಂತರು ವೈಜ್ಞಾನಿಕ ದೃಷ್ಟಿಕೋನ ಬೆಳಸಲಿ.
ಆದ್ಯಾತ್ಮ ಮತ್ತು ವಿಜ್ಞಾನ ಸಂಗಮವಾಗಲಿ
ಜಗವು ಜಗಮಗಿಸಲಿ.
ಸಿಹಿಜೀವಿ
*ಸಿ.ಜಿ ವೆಂಕಟೇಶ್ವರ*
ತುಮಕೂರು
9900925529
15 ಜನವರಿ 2020
ಒಳ್ಳೆಯ ಮಾತಾಡು (ನ್ಯಾನೋ ಕಥೆ)
*ಒಳ್ಳೆಯ ಮಾತಾಡು*
"ಏ ಕಂಡಿದೀನಿ ಕುತ್ಕೊಳ್ಳೋ ---------- ಮಗನೆ, ನಿಂದು ಜಾಸ್ತಿ ಆಯ್ತು," ಎಂದು ಏರುಧ್ವನಿಯಲ್ಲಿ ರಮೇಶ ಕಿರುಚುತ್ತಿದ್ದರೆ "ನಾನು ನಿನ್ನ ಬಾಳ ನೊಡಿದ್ದೀನಿ ನಿಮ್ಮ ವಂಶದ ಜಾತಕ ಬಿಚ್ಚಲಾ? ಈಗ ಮುಚ್ಕೊಂಡಿರೋ ------ ಮಗನೆ" ಎಂಬ ಸುರೇಶನ ಮಾತು ಇಡೀ ಬೀದಿಗೆ ಕೇಳುತ್ತಿತ್ತು.ಸಂಜೆಯಾಗುತ್ತ ಕತ್ತಲು ಆವರಿಸುತ್ತಿತ್ತು.ರಮೇಶನ ಮಗ ಅಪ್ಪ ಬಳಸಿದ ಬೈಗುಳಗಳಿಗೆ ಶಬ್ದಕೋಶದಲ್ಲಿ ಅರ್ಥ ಹುಡುಕುತ್ತಿದ್ದ.ಸುರೇಶನ ಮಗಳಿಗೆ ಬೆಳಿಗ್ಗೆ ಅಪ್ಪ ಹೇಳಿದ " ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬ ನುಡಿ ಕಿವಿಯಲ್ಲಿ ಮಾರ್ಧನಿಸುತ್ತಿತ್ತು.
*ಸಿ ಜಿ ವೆಂಕಟೇಶ್ವರ*
"ಏ ಕಂಡಿದೀನಿ ಕುತ್ಕೊಳ್ಳೋ ---------- ಮಗನೆ, ನಿಂದು ಜಾಸ್ತಿ ಆಯ್ತು," ಎಂದು ಏರುಧ್ವನಿಯಲ್ಲಿ ರಮೇಶ ಕಿರುಚುತ್ತಿದ್ದರೆ "ನಾನು ನಿನ್ನ ಬಾಳ ನೊಡಿದ್ದೀನಿ ನಿಮ್ಮ ವಂಶದ ಜಾತಕ ಬಿಚ್ಚಲಾ? ಈಗ ಮುಚ್ಕೊಂಡಿರೋ ------ ಮಗನೆ" ಎಂಬ ಸುರೇಶನ ಮಾತು ಇಡೀ ಬೀದಿಗೆ ಕೇಳುತ್ತಿತ್ತು.ಸಂಜೆಯಾಗುತ್ತ ಕತ್ತಲು ಆವರಿಸುತ್ತಿತ್ತು.ರಮೇಶನ ಮಗ ಅಪ್ಪ ಬಳಸಿದ ಬೈಗುಳಗಳಿಗೆ ಶಬ್ದಕೋಶದಲ್ಲಿ ಅರ್ಥ ಹುಡುಕುತ್ತಿದ್ದ.ಸುರೇಶನ ಮಗಳಿಗೆ ಬೆಳಿಗ್ಗೆ ಅಪ್ಪ ಹೇಳಿದ " ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬ ನುಡಿ ಕಿವಿಯಲ್ಲಿ ಮಾರ್ಧನಿಸುತ್ತಿತ್ತು.
*ಸಿ ಜಿ ವೆಂಕಟೇಶ್ವರ*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




