This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
04 ಜನವರಿ 2020
01 ಜನವರಿ 2020
ದಿನವೂ ಹೊಸ ವರ್ಷ
*ದಿನವೂ ಹೊಸ ವರ್ಷ*
ಹೊಸ ಕ್ಯಾಲೆಂಡರ್ ವರ್ಷ
ಬಂದಿದೆ
*ದಿನ* ಬಂದರೆ ಹೊಸತಾಗಲೇ ಬೇಕು
ದಿನ ಇದ್ದರೆ ಮಾಸವಾಗಲೇ ಬೇಕು
ಮಾಸದಂತೆ ಹಳೆಯ ನೆನಪುಗಳ
ಕಾಪಿಡಬೇಕು
ದಿನಗಳುರುಳಿ *ತಿಂಗಳು*
ಬರಲೇ ಬೇಕು
ನಮಗೆಲ್ಲಾ ತಂಪನೀಯಬೇಕು
ಮಾಸಗಳುರುಳಿದರೆ *ವರ್ಷ*
ಬಂದು ಇಳೆ ಹರ್ಷಗೊಳ್ಳಬೇಕು
ಪ್ರಕೃತಿಯಲ್ಲಿ ದಿನವೂ ಹೊಸ ವರ್ಷ
ಆದರೂ ಇಂದು ನಾ ಹೇಳುವೆ
ನಿಮಗೆ ಹೊಸ ಕ್ಯಾಲೆಂಡರ್ ವರ್ಷದ
ಶುಭಾಾಶಯಗಳು
ಬಂದಿದೆ
*ದಿನ* ಬಂದರೆ ಹೊಸತಾಗಲೇ ಬೇಕು
ದಿನ ಇದ್ದರೆ ಮಾಸವಾಗಲೇ ಬೇಕು
ಮಾಸದಂತೆ ಹಳೆಯ ನೆನಪುಗಳ
ಕಾಪಿಡಬೇಕು
ದಿನಗಳುರುಳಿ *ತಿಂಗಳು*
ಬರಲೇ ಬೇಕು
ನಮಗೆಲ್ಲಾ ತಂಪನೀಯಬೇಕು
ಮಾಸಗಳುರುಳಿದರೆ *ವರ್ಷ*
ಬಂದು ಇಳೆ ಹರ್ಷಗೊಳ್ಳಬೇಕು
ಪ್ರಕೃತಿಯಲ್ಲಿ ದಿನವೂ ಹೊಸ ವರ್ಷ
ಆದರೂ ಇಂದು ನಾ ಹೇಳುವೆ
ನಿಮಗೆ ಹೊಸ ಕ್ಯಾಲೆಂಡರ್ ವರ್ಷದ
ಶುಭಾಾಶಯಗಳು
*ಸಿ.ಜಿ.ವೆಂಕಟೇಶ್ವರ*
*ತುಮಕೂರು*
*ತುಮಕೂರು*
31 ಡಿಸೆಂಬರ್ 2019
ಕ್ರಾಂತಿ ಶಾಂತಿಯಾಗಬೇಕಿದೆ (ಕವನ)
ಅರಸನ ಬದಲಿಗೆ ಬಂದ
ರಾಜಕಾರಣಿಗಳು ಸ್ವಹಿತ
ಅರಸುವುದನ್ನು ತಪ್ಪಿಸಲು
ಜನತಾ ಸೇವೆಯೇ ಜನಾರ್ದನ
ಸೇವೆಯೆಂದು ಕಾಯಕ ಮಾಡಲು
ರಾಜಕೀಯ ಕ್ರಾಂತಿಯಾಗಬೇಕಿದೆ.
ಅಂಕಗಳೇ ಜೀವನವೆಂದು
ಅಂಕೆಯಿಲ್ಲದೆ ಬೆಳೆದು
ಸಂಸ್ಕಾರ ತಿಳಿಯದೆ
ಸಂಕಟಪಡುವ ಸಂಭಂಧಗಳ
ಗಾಳಿಗೆ ತೂರುವವರಿಗೆ
ಬುದ್ದಿ ನೀಡುವ
ಶಿಕ್ಷಣ ಕ್ರಾಂತಿಯಾಗಬೇಕಿದೆ.
ಗುಡಿ ಕೈಗಾರಿಕೆಗಳು
ನಾಶವಾಗಿ ಯಂತ್ರಗಳ
ಗುಲಾಮರಾಗಿ ನಿರುದ್ಯೋಗ
ತಾಂಡವವಾಡುವ ದೃಶ್ಯಗಳನ್ನು
ತೊಲಗಿಸಿ ಪ್ರತಿ ಗೃಹದಲೂ
ಉತ್ಪಾದನೆ ಮಾಡುವ
ಕೈಗಾರಿಕಾ ಕ್ರಾಂತಿಯಾಗಬೇಕಿದೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ
ಇವುಗಳಿಂದ ಬೇಸತ್ತ ಜನರು
ಭ್ರಮನಿರಸನ ಹೊಂದಿರುವರು
ಪ್ರಜಾಸ್ನೇಹಿ ಆಡಳಿತ ನೀಡಲು
ಆಡಳಿತದಲ್ಲಿ ಕ್ರಾಂತಿಯಾಗಬೇಕಿದೆ.
ಹೊಸ ವರ್ಷವೆಂದು ಕರೆವ
ಈ ಕ್ಯಾಲೆಂಡರ್ ವರ್ಷದಲ್ಲಾದರೂ
ಸಕಲ ರಂಗದಿ ಕ್ರಾಂತಿಯಾಗಬೇಕಿದೆ
ವಿಶ್ವ ನಾಯಕರಿಗೆ ಒಳ್ಳೆಯ ಬುದ್ದಿ
ಬಂದು ಜಗತ್ ಶಾಂತಿಯಾಗಬೇಕಿದೆ.
*ಸಿ ಜಿ ವೆಂಕಟೇಶ್ವರ*
ತುಮಕೂರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)