22 ಸೆಪ್ಟೆಂಬರ್ 2019

ತಂಗಾಳಿ (ಬಹುಮಾನ ಪಡೆದ ಹನಿ)

*ತಂಗಾಳಿ*

ಸಕಲ ವಿಷಯಗಳಲಿ
ಪಥ್ಯವಿದ್ಧರೆ ದಾಂಪತ್ಯದಲಿ
ಬೀಸುವುದು ತಂಗಾಳಿ
ಇಲ್ಲದಿದ್ದರೆ ಖಂಡಿತ
ತಪ್ಪದು ಬಿರುಗಾಳಿ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



19 ಸೆಪ್ಟೆಂಬರ್ 2019

ಸಿಡಿಗುಂಡು (ಹನಿಗವನ)


*ಸಿಹಿಜೀವಿಯ ಹನಿ*

*ಸಿಡಿಗುಂಡು*

ಮದುವೆಗೆ ಮೊದಲು
ಅವನು
ಗಂಡು
ಸಿಡಿಗುಂಡು
ಬೆಂಕಿ ಚೆಂಡು.
ಈಗ
ಗಂಡ
ಸಿಡಿಯದ ಗುಂಡು
ಬೆಂಕಿಯಿರದ ಚೆಂಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

07 ಸೆಪ್ಟೆಂಬರ್ 2019

ನ್ಯಾನೋ ಕಥೆ(ಹಾರೈಕೆ)ಪ್ರಥಮ ಬಹುಮಾನ ಕವಿ ಕಾವ್ಯ ದೀವಿಗೆ





ಸ್ಪರ್ಧೆಗೆ

*ನ್ಯಾನೋ ಕಥೆ*

ಆರೈಕೆ"

" ನನ್ನ ಮಗ ಅಮೇರಿಕಾದಲ್ಲಿ ದೊಡ್ಡ ಕಂಪನೀಲಿ ಕೆಲಸ ಮಾಡ್ತಾ ಇದ್ದಾನೆ,ನನ್ನ ಹೃದಯದ ಆಪರೇಷನ್ ಮಾಡಿಸಲು ಅಕೌಂಟ್ ಗೆ ಹತ್ತು ಲಕ್ಷ ಹಾಕಿದ್ದಾನೆ ,ನೋಡಿಕೊಳ್ಳಲು ಒಳ್ಳೆಯ ನರ್ಸ್ ನೇಮಕ ಮಾಡಿದ್ದಾನೆ,ನಾಳೇನೆ ಆಪರೇಷನ್, ಆಪರೇಷನ್ ಆದ ಮೇಲೆ ವೀಡಿಯೋ ಕಾಲ್ ಮಾಡಿ ನನ್ನ ಕ್ಷೇಮ ವಿಚಾರಿಸ್ತಾನಂತೆ " ಎಂದು  ತನ್ನ ಮಗನ ಕೆಲಸ ಹಣ ಅಂತಸ್ತಿನ ಬಗ್ಗೆ ಹೆಮ್ಮೆಯಿಂದ ಪಕ್ಕದ ಮನೆಯ ಸಾವಿತ್ರಮ್ಮನಿಗೆ ಹೇಳುತ್ತಲೇ ಇದ್ದರು  ಬಂಗಾರಮ್ಮ . " ಅಮ್ಮಾ ನಿಧಾನ, ಬಾ ಈ ಸೈಕಲ್ ಮೇಲೆ ಕೂತ್ಕೋ ಆಸ್ಪತ್ರೆಗೆ ಹೋಗೋಣ ,ಬೆಳಿಗ್ಗೆಯಿಂದ ನೆಗೆಡಿ ಕೆಮ್ಮು ಸುಸ್ತು ಅಂತಿದ್ದೆ ,ಲೇಟಾದ್ರೆ ಡಾಕ್ಟರ್ ಸಿಗಲ್ಲ ಎಂದು ಅಮ್ಮನನ್ನು ಸೈಕಲ್ ಮೇಲೆ ಕೂರಿಸಿಕೊಂಡ ಸುರೇಶ್ ಸೈಕಲ್ ತುಳಿಯುತ್ತಾ ಕಣ್ಮರೆಯಾಗುವವರೆಗೂ ನೋಡುತ್ತಲೇ ನಿಂತರು ಬಂಗಾರಮ್ಮ...

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಸೆಪ್ಟೆಂಬರ್ 2019

ಗಜಲ್ ೫೮ (ನಾರಿಕೇಳ)

*ಗಜ್ಹಲ್೫೮*

ಕಲಿಯುಗದ ಕಲ್ಪವೃಕ್ಷವೆಂದು ಹೆಸರಾಗಿದೆ ನಾರಿಕೇಳ.
ನಾರಿಯರ ನೀಳ ಕೂದಲಿಗೆ ಕಾರಣವಾಗಿದೆ ನಾರಿಕೇಳ.

ಭಗವಂತನಿಗೆ ಅರ್ಪಿಸಲು ಕಾಯಿ ನೀಡುವೆ
ಔಷದಿಯ ಆಗರದ ಎಳನೀರು ನೀಡಿದೆ ನಾರಿಕೇಳ.

ಬಡವರ ಗುಡಿಸಲಿಗೆ ತೆಂಗಿನ ಚಾಪೆ ಆಧಾರ
ರೈತರ ಬೇಸಾಯಕೆ ಹಗ್ಗವ ಕರುಣಿಸಿದೆ ನಾರಿಕೇಳ.

ಸಾರಿಗೆ ಸಾರ ಕೊಡಲು ತೆಂಗಿನ ತುರಿ ಬೇಕು
ಸಾಮನ್ಯರ ಉರುವಲಿನ ಮೂಲವಾಗಿದೆ  ನಾರಿಕೇಳ.

ಸ್ವಚ್ಛ ಭಾರತ ಅಭಿಯಾನಕೆ ಪೊರಕೆ ನೀಡಿದೆ
ಸಿಹಿಜೀವಿಗಳಿಗೆ ಒಳಿತುಮಾಡುತಲಿದೆ ನಾರಿಕೇಳ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*










02 ಸೆಪ್ಟೆಂಬರ್ 2019

ನಾರಿಕೇಳ (ವಿಶ್ವ ತೆಂಗಿನ ಮರ ದಿನ ಪ್ರಯುಕ್ತ ಹನಿ)

*ನಾರಿಕೇಳ*

ಮನೆಗೆ ಸೂರು
ದೇವರ ನೈವೇದ್ಯ
ತಂಪು ಪಾನೀಯ
ಸಾರಿಗೆ ತುರಿ
ಸ್ವಚ್ಛತೆಗೆ ಪೊರಕೆ
ಕೂದಲಿಗೆ ತೈಲ
ಬೇಕಾದಾಗ ಹಗ್ಗ
ಜನರ ಉರುವಲು
ಕಲಿಯುಗ ಕಲ್ಪವೃಕ್ಷ
ಉಪಯೋಗ ಒಂದಲ್ಲ,
ಎರಡಲ್ಲ, ಹೇರಳ
ಅದುವೆ ನಾರಿಕೇಳ .

*ಸಿ.ಜಿ ವೆಂಕಟೇಶ್ವರ*

(ಇಂದು ವಿಶ್ವ ತೆಂಗಿನ ಮರದ ದಿನ