23 ಮಾರ್ಚ್ 2019

ಗಜಲ್ ೫೪(ನನ್ನ ಶಿಕ್ಷಕ)


         *ಗಜಲ್೫೪*


ಕನಸು ಕಾಣಲು ಹೇಳಿಕೊಟ್ಟವನೇ ನನ್ನ ಶಿಕ್ಷಕ,
ನನಸಾದ ನನ್ನ ಗುರಿಗಳ ತಲುಪಿಸಿದವನೇ ನನ್ನ ಶಿಕ್ಷಕ .

ದೇವರು ಕಣ್ಣಿಗೆ ಕಾಣುವುದು ಅಪರೂಪ,
ಶಿವನ ಸ್ವರೂಪಿಯಾಗಿ ಕ್ಷಕಿರಣ ಬೀರಿದವನೇ ನನ್ನ ಶಿಕ್ಷಕ

ಕೆಡಲು ನೂರು ದಾರಿಗಳು ಆಧುನಿಕ ಜಗದಿ,
ಬದುಕಲು ಮಾರ್ಗದರ್ಶನ ನೀಡಿದವನೇ ನನ್ನ ಶಿಕ್ಷಕ.

ಸಮಾಜ ತಿದ್ದುವವರು ಬಹಳಿಲ್ಲ ಭವದಿ ,
ಸಾಮ ದಾನ ಭೇದ  ದಂಡಗಳಲಿ ಕಲಿಸಿದವನೇ ನನ್ನ ಶಿಕ್ಷಕ.

ಸೀಜೀವಿಯು ಅಂಧಕಾರದಲ್ಲಿದ್ದು ತೊಳಲುತಲಿದ್ದನು ,
ಜ್ಞಾನದ ಪಂಜನಿಡಿದು ಬಾಳ ಬೆಳಗಿಸಿದವನೇ ನನ್ನ ಶಿಕ್ಷಕ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





22 ಮಾರ್ಚ್ 2019

*ಮಹಾಮಾತೆ*(ಹನಿಗವನ)

              *ಮಹಾಮಾತೆ*(ಹನಿಗವನ)

ಜನ್ಮ‌ನೀಡಿದ ಜನ್ಮದಾತೆ
ಬತ್ತದ ಪ್ರೀತಿಯ ವರತೆ
ನನ್ನ ಸಲಹಿದ ವಾತ್ಸಲ್ಯದಾತೆ
ಅವಳೇ ಮಹಾಮಾತೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್ ೫೩(ಜೀವಜಲ)

*ಗಜ್ಹಲ್*

ಜೀವಿಗಳು ಉಳಿಯಲು ರಕ್ಷಿಸಬೇಕಿದೆ  ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ

ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ  ಬಳುವಳಿ ನೀಡಬೇಕಿದೆ ಜೀವಜಲ

ಉಳಿಸಿದ  ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ  ಮಿತವಾಗಿ ಬಳಸಬೇಕಿದೆ ಜೀವಜಲ

ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ

ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*

15 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಕುಂಬಕರ್ಣ,ಸಂತಸ,ವಿರಳ)

              *ಸಿಹಿಜೀವಿಯ ಹನಿಗಳು*

*೧*

*ಕುಂಬಕರ್ಣ*

ಪಾತ್ರಾಭಿನಯ
ನಮ್ಮ ರಾಜಕಾರಣಿಗಳಿಗೆ
ಕರತಲಾಮಲಕ
ಚುನಾವಣೆಯ ಮೊದಲು
ಎಲ್ಲರೂ ನಟಿಸುವರು
ದಾನಶೂರ ಕರ್ಣನಂತೆ
ಗೆದ್ದ ನಂತರ ಆಗುವರು
ಕುಂಬಕರ್ಣನಂತೆ

*೨*

*ಸಂತಸ*

ದಿನನಿತ್ಯದ ಜೀವನದಿ
ಅಪ್ಪ‌ ,ಅಮ್ಮ ಅಣ್ಣ ತಮ್ಮ
ವಿವಿಧ ಪಾತ್ರಗಳ ನಿರ್ವಹಣೆ
ಮಾಡಲೇಬೇಕು
ಏತಕೆ ಎಲ್ಲೆಡೆ ವಿರಸ
ಬಾಳೋಣ ಹಂಚಿ ಸಂತಸ

*೩*

*ವಿರಳ*

ಜಗದಲಿ ಬಹಳ
ಸಂತಸದ ಜನರಿರುವ
ದೇಶ ಭೂತಾನ
ಕಾರಣ ಅತೀ ಸರಳ
ಆ ದೇಶದಲಿ
ಹಣವೊಂದೇ ಸಂತಸ
ಎಂಬುವರು ವಿರಳ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಮೂತ್ರ ಪಿಂಡ ದಿನ ವಿಶೇಷ)

          *ಸಿಹಿಜೀವಿಯ ಹನಿಗಳು*

*೧*

*ಮೂತ್ರ ಪಿಂಡ*

ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ

(ಇಂದು ವಿಶ್ವ ಮೂತ್ರ ಪಿಂಡ ದಿನ)


*೨*

*ಫಲಿತಾಂಶ*


ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*