This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
22 ಮಾರ್ಚ್ 2019
ಗಜಲ್ ೫೩(ಜೀವಜಲ)
*ಗಜ್ಹಲ್*
ಜೀವಿಗಳು ಉಳಿಯಲು ರಕ್ಷಿಸಬೇಕಿದೆ ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ
ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ ಬಳುವಳಿ ನೀಡಬೇಕಿದೆ ಜೀವಜಲ
ಉಳಿಸಿದ ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ ಮಿತವಾಗಿ ಬಳಸಬೇಕಿದೆ ಜೀವಜಲ
ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ
ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*
ಯ
ಜೀವಿಗಳು ಉಳಿಯಲು ರಕ್ಷಿಸಬೇಕಿದೆ ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ
ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ ಬಳುವಳಿ ನೀಡಬೇಕಿದೆ ಜೀವಜಲ
ಉಳಿಸಿದ ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ ಮಿತವಾಗಿ ಬಳಸಬೇಕಿದೆ ಜೀವಜಲ
ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ
ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*
ಯ
15 ಮಾರ್ಚ್ 2019
ಸಿಹಿಜೀವಿಯ ಹನಿಗಳು (ಕುಂಬಕರ್ಣ,ಸಂತಸ,ವಿರಳ)
*ಸಿಹಿಜೀವಿಯ ಹನಿಗಳು*
*೧*
*ಕುಂಬಕರ್ಣ*
ಪಾತ್ರಾಭಿನಯ
ನಮ್ಮ ರಾಜಕಾರಣಿಗಳಿಗೆ
ಕರತಲಾಮಲಕ
ಚುನಾವಣೆಯ ಮೊದಲು
ಎಲ್ಲರೂ ನಟಿಸುವರು
ದಾನಶೂರ ಕರ್ಣನಂತೆ
ಗೆದ್ದ ನಂತರ ಆಗುವರು
ಕುಂಬಕರ್ಣನಂತೆ
*೨*
*ಸಂತಸ*
ದಿನನಿತ್ಯದ ಜೀವನದಿ
ಅಪ್ಪ ,ಅಮ್ಮ ಅಣ್ಣ ತಮ್ಮ
ವಿವಿಧ ಪಾತ್ರಗಳ ನಿರ್ವಹಣೆ
ಮಾಡಲೇಬೇಕು
ಏತಕೆ ಎಲ್ಲೆಡೆ ವಿರಸ
ಬಾಳೋಣ ಹಂಚಿ ಸಂತಸ
*೩*
*ವಿರಳ*
ಜಗದಲಿ ಬಹಳ
ಸಂತಸದ ಜನರಿರುವ
ದೇಶ ಭೂತಾನ
ಕಾರಣ ಅತೀ ಸರಳ
ಆ ದೇಶದಲಿ
ಹಣವೊಂದೇ ಸಂತಸ
ಎಂಬುವರು ವಿರಳ
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
*೧*
*ಕುಂಬಕರ್ಣ*
ಪಾತ್ರಾಭಿನಯ
ನಮ್ಮ ರಾಜಕಾರಣಿಗಳಿಗೆ
ಕರತಲಾಮಲಕ
ಚುನಾವಣೆಯ ಮೊದಲು
ಎಲ್ಲರೂ ನಟಿಸುವರು
ದಾನಶೂರ ಕರ್ಣನಂತೆ
ಗೆದ್ದ ನಂತರ ಆಗುವರು
ಕುಂಬಕರ್ಣನಂತೆ
*೨*
*ಸಂತಸ*
ದಿನನಿತ್ಯದ ಜೀವನದಿ
ಅಪ್ಪ ,ಅಮ್ಮ ಅಣ್ಣ ತಮ್ಮ
ವಿವಿಧ ಪಾತ್ರಗಳ ನಿರ್ವಹಣೆ
ಮಾಡಲೇಬೇಕು
ಏತಕೆ ಎಲ್ಲೆಡೆ ವಿರಸ
ಬಾಳೋಣ ಹಂಚಿ ಸಂತಸ
*೩*
*ವಿರಳ*
ಜಗದಲಿ ಬಹಳ
ಸಂತಸದ ಜನರಿರುವ
ದೇಶ ಭೂತಾನ
ಕಾರಣ ಅತೀ ಸರಳ
ಆ ದೇಶದಲಿ
ಹಣವೊಂದೇ ಸಂತಸ
ಎಂಬುವರು ವಿರಳ
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
14 ಮಾರ್ಚ್ 2019
ಸಿಹಿಜೀವಿಯ ಹನಿಗಳು (ಮೂತ್ರ ಪಿಂಡ ದಿನ ವಿಶೇಷ)
*ಸಿಹಿಜೀವಿಯ ಹನಿಗಳು*
*೧*
*ಮೂತ್ರ ಪಿಂಡ*
ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ
(ಇಂದು ವಿಶ್ವ ಮೂತ್ರ ಪಿಂಡ ದಿನ)
*೨*
*ಫಲಿತಾಂಶ*
ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*೧*
*ಮೂತ್ರ ಪಿಂಡ*
ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ
(ಇಂದು ವಿಶ್ವ ಮೂತ್ರ ಪಿಂಡ ದಿನ)
*೨*
*ಫಲಿತಾಂಶ*
ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
13 ಮಾರ್ಚ್ 2019
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




