This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
09 ಜನವರಿ 2019
08 ಜನವರಿ 2019
ಮತ್ತೆರಡು ಹನಿಗಳು
ಎರಡು ಹನಿಗಳು
*೧*
*ಪಶ್ಚಾತ್ತಾಪ*
ಗುರುಗಳು ಹೇಳಿದರು
ಸಿಟ್ಟು ಬಂದಾಗ ಎಣಿಸು
ಒಂದರಿಂದ ಹತ್ತು
ಖಂಡಿತ ತಪ್ಪುವುದು
ದೊಡ್ಡ ಆಪತ್ತು
ಶಿಷ್ಯ ಗೊಣಗುತ್ತಾ ನುಡಿದ
ಹೌದು ನನ್ನ ಮದುವೆಯ
ದಿನ ಎಣಿಸಬೇಕಿತ್ತು
*೨*
*ಮಾಯ*
ಸಮಯ ಕಳೆಯದಿರು
ಅತ್ತು ಅತ್ತು
ದೇವನ ನೆನೆದು
ಏಳು ಬೆಟ್ಟಗಳ ಹತ್ತು
ಭಗವಂತನ ಸುತ್ತ
ಹತ್ತು ಸುತ್ತು
ಮಾಯವಾಗುವುದು
ನಿನ್ನ ಆಪತ್ತು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*೧*
*ಪಶ್ಚಾತ್ತಾಪ*
ಗುರುಗಳು ಹೇಳಿದರು
ಸಿಟ್ಟು ಬಂದಾಗ ಎಣಿಸು
ಒಂದರಿಂದ ಹತ್ತು
ಖಂಡಿತ ತಪ್ಪುವುದು
ದೊಡ್ಡ ಆಪತ್ತು
ಶಿಷ್ಯ ಗೊಣಗುತ್ತಾ ನುಡಿದ
ಹೌದು ನನ್ನ ಮದುವೆಯ
ದಿನ ಎಣಿಸಬೇಕಿತ್ತು
*೨*
*ಮಾಯ*
ಸಮಯ ಕಳೆಯದಿರು
ಅತ್ತು ಅತ್ತು
ದೇವನ ನೆನೆದು
ಏಳು ಬೆಟ್ಟಗಳ ಹತ್ತು
ಭಗವಂತನ ಸುತ್ತ
ಹತ್ತು ಸುತ್ತು
ಮಾಯವಾಗುವುದು
ನಿನ್ನ ಆಪತ್ತು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
07 ಜನವರಿ 2019
ಎರಡು ಹನಿಗಳು
*ಹನಿಗವನಗಳು*
*೧*
*ಮರೆತರೇನು*
ಈಗ ಒಪ್ಪಿದೆ ನಿನ್ನ
ನನ್ನ ಹಣ ಕೇಳದೆ
ಕೊಂಡಿರುವೆ ಒಡವೆಯನ್ನ
ನಿನ್ನ ತವರು ಮನೆಯರು
ಕೊಡಿಸಿದರೇನು?
ಹೆಂಡತಿ ನಾಚುತ ಹೇಳಿದಳು
ಮೊನ್ನೆ ನೀವು ಕುಡಿದ ನಶೆಯಲಿ
ಎರಡು ಸಾವಿರದ ಒಂದು
ಕಂತೆ ಕೊಟ್ಟಿದ್ದ ಮರೆತರೇನು?
*೨*
*ಬಂದ್*
ನಾಚುತ ನಿಂತಿದ್ದಳು
ಸುಂದರಿ ಅಂದು
ಮಡದಿಯಾದಳು
ನನ್ನ ಮನೆಗೆ ಬಂದು
ಅವಳು ಬಂದಾಗಿನಿಂದ
ನನ್ನ ಬಾಯಿ ಬಂದು
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
*೧*
*ಮರೆತರೇನು*
ಈಗ ಒಪ್ಪಿದೆ ನಿನ್ನ
ನನ್ನ ಹಣ ಕೇಳದೆ
ಕೊಂಡಿರುವೆ ಒಡವೆಯನ್ನ
ನಿನ್ನ ತವರು ಮನೆಯರು
ಕೊಡಿಸಿದರೇನು?
ಹೆಂಡತಿ ನಾಚುತ ಹೇಳಿದಳು
ಮೊನ್ನೆ ನೀವು ಕುಡಿದ ನಶೆಯಲಿ
ಎರಡು ಸಾವಿರದ ಒಂದು
ಕಂತೆ ಕೊಟ್ಟಿದ್ದ ಮರೆತರೇನು?
*೨*
*ಬಂದ್*
ನಾಚುತ ನಿಂತಿದ್ದಳು
ಸುಂದರಿ ಅಂದು
ಮಡದಿಯಾದಳು
ನನ್ನ ಮನೆಗೆ ಬಂದು
ಅವಳು ಬಂದಾಗಿನಿಂದ
ನನ್ನ ಬಾಯಿ ಬಂದು
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
06 ಜನವರಿ 2019
ತಪಾಸಣೆ ( ನ್ಯಾನೋ ಕಥೆ)
*ತಪಾಸಣೆ*(ನ್ಯಾನೋ ಕಥೆ)
"ಅಯ್ಯೋ ಇವತ್ತೇ ಹೆಲ್ಮೆಟ್ ಬಿಟ್ಟು ಬಂದೆನಲ್ಲಪ್ಪಾ ಬಿತ್ತು ಪೈನ್ " ಎಂದು ಬಾಲಜಿ ಮನದಲ್ಲೇ ಗೊಣಗಿಕೊಂಡು ಬೈಕ್ ನಿಲ್ಲಿಸಿದಾಕ್ಷಣ ಪೊಲೀಸ್ ಬಂದು ಬಾಯಲ್ಲಿ ಅದೇನೋ ಮಿಷನ್ ಇಟ್ಟು "ಜೋರಾಗಿ ಊದು" ಎಂದರು .
" ಸರಿ ನೀನೇನೂ ಕುಡಿದಿಲ್ಲ ಹೊರಡು" ಅಂದ ಪೊಲೀಸ್ ನ ಮಾತು ಕೇಳಿ ನಿಟ್ಟುಸಿರು ಬಿಟ್ಟು ಗಾಡಿ ಸ್ಟಾರ್ಟ್ ಮಾಡಿ ನೋಡಿದರೆ ಪೊಲೀಸ್ ಸ್ಟೇಷನ್ ಎದುರಿಗೆ "ಮಣಿಕಂಠ ಬಾರ್ ಅಂಡ್ ರೆಸ್ಟೋರೆಂಟ್" ಎಂಬ ಬೋರ್ಡ್ ನೇತಾಡುತ್ತಿತ್ತು.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
"ಅಯ್ಯೋ ಇವತ್ತೇ ಹೆಲ್ಮೆಟ್ ಬಿಟ್ಟು ಬಂದೆನಲ್ಲಪ್ಪಾ ಬಿತ್ತು ಪೈನ್ " ಎಂದು ಬಾಲಜಿ ಮನದಲ್ಲೇ ಗೊಣಗಿಕೊಂಡು ಬೈಕ್ ನಿಲ್ಲಿಸಿದಾಕ್ಷಣ ಪೊಲೀಸ್ ಬಂದು ಬಾಯಲ್ಲಿ ಅದೇನೋ ಮಿಷನ್ ಇಟ್ಟು "ಜೋರಾಗಿ ಊದು" ಎಂದರು .
" ಸರಿ ನೀನೇನೂ ಕುಡಿದಿಲ್ಲ ಹೊರಡು" ಅಂದ ಪೊಲೀಸ್ ನ ಮಾತು ಕೇಳಿ ನಿಟ್ಟುಸಿರು ಬಿಟ್ಟು ಗಾಡಿ ಸ್ಟಾರ್ಟ್ ಮಾಡಿ ನೋಡಿದರೆ ಪೊಲೀಸ್ ಸ್ಟೇಷನ್ ಎದುರಿಗೆ "ಮಣಿಕಂಠ ಬಾರ್ ಅಂಡ್ ರೆಸ್ಟೋರೆಂಟ್" ಎಂಬ ಬೋರ್ಡ್ ನೇತಾಡುತ್ತಿತ್ತು.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
02 ಜನವರಿ 2019
ಪರಿವರ್ತನೆ ( ನ್ಯಾನೋ ಕಥೆ)
*ನ್ಯಾನೋ ಕಥೆ*
*ಪರಿವರ್ತನೆ*
ಆತ್ಮೀಯ ಗೆಳೆಯ ರಮೇಶ್ ನೋಡಲು ಬೆಳಿಗ್ಗೆ ಒಂಭತ್ತಕ್ಕೆ ರಮೇಶ್ ನ ಮನೆಗೆ ಹೋದ . "ಇನ್ನೂ ಮಲಗಿದ್ದೀಯಲ್ಲಯ್ಯ ಸೂರ್ಯ ವಂಶಸ್ತ ನಲವತ್ತು ವರ್ಷ ದಾಟಿದ ಮೇಲಾದರೂ ಬೇಗ ಎದ್ದು ವಾಕ್ ಗೀಕ್ ಮಾಡು"ಎನ್ನವಷ್ಟರಲ್ಲಿ " ನನಗೇನಾಗಿದೆ ನನದು ಸ್ಟೀಲ್ ಬಾಡಿ" ಎಂದು ರಮೇಶ್ ಉಡಾಪೆಯಿಂದ ಉತ್ತರಿಸಿದ .
ಒಮ್ಮೆ ರಮೇಶ್ ನ ಕೈಗೆ ಗಾಯವಾಗಿ ತಿಂಗಳಾದರೂ ಮಾದಿರಲಿಲ್ಲ . ಒಂದು ಮುಂಜಾನೆ ಆದರ್ಶ್ ವಾಕ್ ಮಾಡುವಾಗ ಟ್ರಾಕ್ ಸೂಟ್ನಲ್ಲಿ ಗೆಳೆಯ ರಮೇಶ್ ನನ್ನು ಕಂಡ ಆದರ್ಶನಿಗೆ ಎಲ್ಲಾ ಅರ್ಥವಾಯಿತು. ಗೆಳೆಯನೊಡನೆ ಹೆಜ್ಜೆ ಹಾಕಿದ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಪರಿವರ್ತನೆ*
ಆತ್ಮೀಯ ಗೆಳೆಯ ರಮೇಶ್ ನೋಡಲು ಬೆಳಿಗ್ಗೆ ಒಂಭತ್ತಕ್ಕೆ ರಮೇಶ್ ನ ಮನೆಗೆ ಹೋದ . "ಇನ್ನೂ ಮಲಗಿದ್ದೀಯಲ್ಲಯ್ಯ ಸೂರ್ಯ ವಂಶಸ್ತ ನಲವತ್ತು ವರ್ಷ ದಾಟಿದ ಮೇಲಾದರೂ ಬೇಗ ಎದ್ದು ವಾಕ್ ಗೀಕ್ ಮಾಡು"ಎನ್ನವಷ್ಟರಲ್ಲಿ " ನನಗೇನಾಗಿದೆ ನನದು ಸ್ಟೀಲ್ ಬಾಡಿ" ಎಂದು ರಮೇಶ್ ಉಡಾಪೆಯಿಂದ ಉತ್ತರಿಸಿದ .
ಒಮ್ಮೆ ರಮೇಶ್ ನ ಕೈಗೆ ಗಾಯವಾಗಿ ತಿಂಗಳಾದರೂ ಮಾದಿರಲಿಲ್ಲ . ಒಂದು ಮುಂಜಾನೆ ಆದರ್ಶ್ ವಾಕ್ ಮಾಡುವಾಗ ಟ್ರಾಕ್ ಸೂಟ್ನಲ್ಲಿ ಗೆಳೆಯ ರಮೇಶ್ ನನ್ನು ಕಂಡ ಆದರ್ಶನಿಗೆ ಎಲ್ಲಾ ಅರ್ಥವಾಯಿತು. ಗೆಳೆಯನೊಡನೆ ಹೆಜ್ಜೆ ಹಾಕಿದ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




