08 ಜನವರಿ 2019

ಮತ್ತೆರಡು ಹನಿಗಳು

      ಎರಡು ಹನಿಗಳು

*೧*

*ಪಶ್ಚಾತ್ತಾಪ*

ಗುರುಗಳು ಹೇಳಿದರು
ಸಿಟ್ಟು ಬಂದಾಗ ಎಣಿಸು
ಒಂದರಿಂದ ಹತ್ತು
ಖಂಡಿತ ತಪ್ಪುವುದು
ದೊಡ್ಡ ಆಪತ್ತು
ಶಿಷ್ಯ ಗೊಣಗುತ್ತಾ ನುಡಿದ
ಹೌದು ನನ್ನ ಮದುವೆಯ
ದಿನ ಎಣಿಸಬೇಕಿತ್ತು

*೨*

*ಮಾಯ*

ಸಮಯ ಕಳೆಯದಿರು
ಅತ್ತು ಅತ್ತು
ದೇವನ ನೆನೆದು
ಏಳು ಬೆಟ್ಟಗಳ ಹತ್ತು
ಭಗವಂತನ ಸುತ್ತ
ಹತ್ತು ಸುತ್ತು
ಮಾಯವಾಗುವುದು
ನಿನ್ನ ಆಪತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಜನವರಿ 2019

ಎರಡು ಹನಿಗಳು

*ಹನಿಗವನಗಳು*

*೧*

*ಮರೆತರೇನು*

ಈಗ ಒಪ್ಪಿದೆ ನಿನ್ನ
ನನ್ನ ಹಣ ಕೇಳದೆ
ಕೊಂಡಿರುವೆ ಒಡವೆಯನ್ನ
ನಿನ್ನ ತವರು ಮನೆಯರು
ಕೊಡಿಸಿದರೇನು?
ಹೆಂಡತಿ ನಾಚುತ ಹೇಳಿದಳು
ಮೊನ್ನೆ ನೀವು ಕುಡಿದ  ನಶೆಯಲಿ
ಎರಡು ಸಾವಿರದ ಒಂದು
ಕಂತೆ ಕೊಟ್ಟಿದ್ದ ಮರೆತರೇನು?

*೨*

*ಬಂದ್*

ನಾಚುತ ನಿಂತಿದ್ದಳು
ಸುಂದರಿ ಅಂದು
ಮಡದಿಯಾದಳು
ನನ್ನ ಮನೆಗೆ ಬಂದು
ಅವಳು ಬಂದಾಗಿನಿಂದ
ನನ್ನ ಬಾಯಿ ಬಂದು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಜನವರಿ 2019

ತಪಾಸಣೆ ( ನ್ಯಾನೋ ಕಥೆ)

      *ತಪಾಸಣೆ*(ನ್ಯಾನೋ ಕಥೆ)

"ಅಯ್ಯೋ ಇವತ್ತೇ ಹೆಲ್ಮೆಟ್ ಬಿಟ್ಟು ಬಂದೆನಲ್ಲಪ್ಪಾ ಬಿತ್ತು ಪೈನ್ " ಎಂದು ಬಾಲಜಿ ಮನದಲ್ಲೇ  ಗೊಣಗಿಕೊಂಡು   ಬೈಕ್ ನಿಲ್ಲಿಸಿದಾಕ್ಷಣ ಪೊಲೀಸ್ ಬಂದು ಬಾಯಲ್ಲಿ ಅದೇನೋ ಮಿಷನ್ ಇಟ್ಟು "ಜೋರಾಗಿ ಊದು" ಎಂದರು .
" ಸರಿ ನೀನೇನೂ ಕುಡಿದಿಲ್ಲ ಹೊರಡು" ಅಂದ ಪೊಲೀಸ್ ನ ಮಾತು ಕೇಳಿ ನಿಟ್ಟುಸಿರು ಬಿಟ್ಟು ಗಾಡಿ ಸ್ಟಾರ್ಟ್ ಮಾಡಿ ನೋಡಿದರೆ ಪೊಲೀಸ್ ಸ್ಟೇಷನ್ ಎದುರಿಗೆ "ಮಣಿಕಂಠ ಬಾರ್ ಅಂಡ್ ರೆಸ್ಟೋರೆಂಟ್" ಎಂಬ ಬೋರ್ಡ್ ನೇತಾಡುತ್ತಿತ್ತು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಜನವರಿ 2019

ಪರಿವರ್ತನೆ ( ನ್ಯಾನೋ ಕಥೆ)

           *ನ್ಯಾನೋ ಕಥೆ*

*ಪರಿವರ್ತನೆ*

ಆತ್ಮೀಯ ಗೆಳೆಯ ರಮೇಶ್ ನೋಡಲು ಬೆಳಿಗ್ಗೆ ಒಂಭತ್ತಕ್ಕೆ ರಮೇಶ್ ನ ಮನೆಗೆ ಹೋದ . "ಇನ್ನೂ ಮಲಗಿದ್ದೀಯಲ್ಲಯ್ಯ ಸೂರ್ಯ ವಂಶಸ್ತ ನಲವತ್ತು ವರ್ಷ ದಾಟಿದ ಮೇಲಾದರೂ ಬೇಗ ಎದ್ದು ವಾಕ್ ಗೀಕ್ ಮಾಡು"ಎನ್ನವಷ್ಟರಲ್ಲಿ " ನನಗೇನಾಗಿದೆ  ನನದು ಸ್ಟೀಲ್ ಬಾಡಿ" ಎಂದು ರಮೇಶ್  ಉಡಾಪೆಯಿಂದ ಉತ್ತರಿಸಿದ .
ಒಮ್ಮೆ ರಮೇಶ್ ನ  ಕೈಗೆ  ಗಾಯವಾಗಿ ತಿಂಗಳಾದರೂ ಮಾದಿರಲಿಲ್ಲ . ಒಂದು ಮುಂಜಾನೆ ಆದರ್ಶ್ ವಾಕ್  ಮಾಡುವಾಗ ಟ್ರಾಕ್ ಸೂಟ್ನಲ್ಲಿ  ಗೆಳೆಯ ರಮೇಶ್ ನನ್ನು ಕಂಡ ಆದರ್ಶನಿಗೆ ಎಲ್ಲಾ ಅರ್ಥವಾಯಿತು. ಗೆಳೆಯನೊಡನೆ ಹೆಜ್ಜೆ ಹಾಕಿದ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಜನವರಿ 2019

ಮಾದರಿ (ನ್ಯಾನೋ ಕಥೆ) ಹನಿ‌ ಹನಿ ಇಬ್ಬನಿ ಬಳಗದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತಮ ಎಂದು ಪುರಸ್ಕಾರ ಪಡೆದ ಕಥೆ

             ನ್ಯಾನೋ ಕಥೆ

*ಮಾದರಿ*

"*ಮಕ್ಕಳು ಸಂಸ್ಕಾರ ಹೊಂದಿರಬೇಕು, ಸ್ವಚ್ಚತೆಯನ್ನು ಕಾಪಡಬೇಕು , ನಮ್ಮ ಪರಂಪರೆಯನ್ನು ಉಳಿಸಿ  ಬೆಳೆಸಬೇಕು*" ಎಂದು ಸ್ವಾಮೀಜಿಗಳು  ಪ್ರವಚನ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದರು .ಭಕ್ತರು ಕೊಟ್ಟ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ಅಲ್ಲೇ ಬಿಸಾಡಿ ಮುಂದೆ ನಡೆದರು.ಐದನೆಯ ತರಗತಿ ಓದುವ ಸುಲೋಚನ ಎಂಬ ಬಾಲಕಿ ಆ ಸಿಪ್ಪೆ ಎತ್ತಿ ಕಸದ ಡಬ್ಬಿಗೆ ಹಾಕಿದಳು .

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*