26 ಅಕ್ಟೋಬರ್ 2018

ಕಾಯಕವೇ ಕೈಲಾಸ (ಕವನ)ಕವಿ ಸಾಹಿತಿಗಳ ಜೀವಾಳ ಗುಂಪಿನ ರಾಜ್ಯ ಮಟ್ಟದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ


                         *ಕಾಯಕವೇ ಕೈಲಾಸ*

ಇಳಿ ವಯಸ್ಸಿನಲ್ಲೂ
ಇಳೆಗೆ ನಾ ಭಾರವಲ್ಲ
ಭಾರ ಹೊರುವ ಶಕ್ತಿ
ದೇವರು ನೀಡಿರುವನಲ್ಲ

ಜೀವನವೆಂಬ ಸೈಕಲ್
ಬಹಳ ತುಳಿದಿರುವೆ
ಕಾಯಕವೆ ಕೈಲಾಸ
ತತ್ಬ ಪಾಲಿಸುತಿರುವೆ

ಬಸ್ಸಿಗಿಂತ ಹಿರಿದು ಸೈಕಲ್
ಯಂತ್ರದ ಹಂಗು ಬೇಕಿಲ್ಲ
ಸ್ವಾಭಿಮಾನವ ಮರೆಯಲ್ಲ
ಮೈಯಲ್ಲಿ ಶಕ್ತಿ ಇದೆಯಲ್ಲ

ಚಳಿ ಮಳೆಯ ಹಂಗಿಲ್ಲ
ಕೆಲಸ ಮಾಡಿ ಮುಗಿಸುವೆ
ನನ್ನ ಮತ್ತು ಅವಲಂಬಿತರ
ತುತ್ತಿನ ಚೀಲ ತುಂಬಿಸುವೆ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*

25 ಅಕ್ಟೋಬರ್ 2018

ಉದಯಕುಮಾರ್ (ಕವನ)

                   *ಉದಯ ಕುಮಾರ*

ಹುಟ್ಟುವಾಗ ತಣ್ಣನೆಯ ಗುಣ
ಮೇಲೇರಿದಂತೆ ಬೆಳಗುವ
ಹೊತ್ತಿಳಿದಂತೆ ತಣ್ಣಗಾಗುವ
ಇದು ದೈನಂದಿನ ಕಾಯಕ
ನಮ್ಮ ಬಾನಿನ ನೇಸರನಿಗೆ
ಭುವಿಯಲೊಂದು ರವಿ
ಸೂರ್ಯನಂತೆ ಪ್ರತಿದಿನ
ಕಾಯಕನಿರತರಾಗಿರುವ  ನನ್ನ
ಗೆಳೆಯ ಉದಯಕುಮಾರ

ಧಣಿವರಿಯದ ಕಾಯಕ
ತೋಟದಲಿ ಮಾದರಿ ಕೃಷಿಕ
ವಿಕಲಚೇನರಿಗೆ ಪ್ರೇರಕ
ವ್ಯಾಪಾರದಲಿ ಶ್ರೇಷ್ಠ ವಣಿಕ
ವಯೋವೃದ್ದ  ಹೆತ್ತವರ ರಕ್ಷಕ
ಗೆಳೆಯರ ಪಾಲಿಗೆ  ಆಪ್ತರಕ್ಷಕ
ಮಕ್ಕಳ ಉತ್ತಮ ಪಾಲಕ
ದಾನ ಧರ್ಮದ ಪ್ರವರ್ತಕ
ಸದಾ ತರುಣ ನಮ್ಮ ಕುಮಾರ
ಇವರೇ ನಮ್ಮ ಉದಯಕುಮಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಅಕ್ಟೋಬರ್ 2018

ಗಜ಼ಲ್49( ಬಾರೆ )ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಯಲ್ಲಿ ಉತ್ತಮ ಗಜ಼ಲ್ ಎಂದು ಪುರಸ್ಕೃತ ಗಜ಼ಲ್


ಜಗ                    *ಗಜ಼ಲ್*

ಹುಚ್ಚನಂತೆ ನಾನು ಕಾಯತಿರುವ ತಾಣಕ್ಕಾದರೂ ಬಾರೆ
ಇಚ್ಚೆಯಲಿ  ನೀನೇ  ಹೇಳಿದ ಜಾಗಕ್ಕಾದರೂ ಬಾರೆ

ನೀನಿರುವೆಡೆ ಜಗ ಮಗ ಬೆಳಕು ನಕ್ಷತ್ರಗಳ ಹೊಳಪು
ಕತ್ತಲಾಗಿಹ  ಹೃದಯದ ದೀಪ ಹಚ್ಚಲಾದರೂ ಬಾರೆ

ದಿನ ಕಳೆದು  ದಿನಪ ಹೋಗಿ ಚಂದಮ ಬಂದ
ತಿಂಗಳ ಬೆಳಕಲ್ಲದರೂ ವರ್ಷದ ಜೊತೆಗಾದರೂ ಬಾರೆ

ಸಾಗರದ ತಟದಲ್ಲಿ ಸಾಗರ ದಷ್ಟು ಆಸೆ ಹೊತ್ತ ನಿರೀಕ್ಷೆ
ದಾರಿ ಕಾಯುತಿಹೆ ಏಕಾಂತದಿ ಈ ಕಾಂತನ ಮುದ್ದಿಸಲಾದರೂ  ಬಾರೆ

ಸೀಜೀವಿಯ ನೋಡದೆ ನೀ  ನಿಲ್ಲುವಳಲ್ಲ ಒಲವಿನ ನಲ್ಲೆ
ನಿನ್ನ ನೋಡದೆ ನಾ  ಹೇಗಿರಲಿ ಒಮ್ಮೆ ಸಂದಿಸಲಾದರೂ  ಬಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಅಕ್ಟೋಬರ್ 2018

ಕಲಿಕೆ (ಕವನ)

                *ಕಲಿಕೆ*

ಎಸ್ ಎಸ್ ಎಲ್ ಸಿ‌ ಯಲ್ಲಿ
ತನ್ನ ಮಗ ಪಾಸಾಗಿದ್ದ
ಪಕ್ಕದ ಮನೆಯ ಹುಡುಗಿ
ತೊಂಬತ್ತು ತಗೆದುಕೊಂಡಾಗ
ಇವನಪ್ಪ ಮತ್ಸರದಿ ಬೈದು
ನೀನ್ಯಾವಾಗ ತೊಂಬತ್ತು
ತೆಗೆದುಕೊಳ್ಳುವುದು ಎಂದಿದ್ದ

ಪಿ ಯು ಸಿ ಯಲ್ಲಿಯೂ
ಮಗ ಉತ್ತಮ ಅಂಕಗಳೊಂದಿಗೆ
ತೇರ್ಗಡೆಯಾದ ಅಪ್ಪನದು
ಅದೇ ರಾಗ ನೀನ್ಯಾವಾಗ
ತೊಂಬತ್ತು ತೆಗೆದುಕೊಳ್ಳುವುದು

ದೊಡ್ಡವನಾದ ಮೇಲೆ ಮಗ
ತೂರಾಡುತ್ತಾ ಮನೆಗೆ ಬಂದ
ದಿಗಿಲುಗೊಂಡ ಅಪ್ಪ
ಏನು ಬಂತೋ ರೋಗ
ಎಂದು  ಬೈದರು ಮಗ
ಉತ್ತರಿಸಿದ ಈಗೀಗ ತೊಂಬತ್ತು
ತೆಗೆದುಕೊಳ್ಳಲು ಕಲಿತಿದ್ದೇನೆ


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

18 ಅಕ್ಟೋಬರ್ 2018

ಆಯುಧಪೂಜಾ ಆನಂದ(ಕವನ)

                   *ಆಯುಧ ಪೂಜಾ ಆನಂದ*

ಬಾಲ್ಯದ ಆ ದಿನದಿ
ಹಳೆ ಸೈಕಲ್ ಟೈರ್ಗೆ
ಹೂ ಹಾಕಿ ಹರಿಷಣ
ಕುಂಕುಮು ಹಚ್ಚಿ
ಅದರ ಸೌಂದರ್ಯ ನಾ ಮೆಚ್ಚಿ
ಕೈಯಲೊಂದು ಕೋಲಿಡಿದು
ಟೈರ್ ತಳ್ಳತ್ತಾ ಗೆಳೆಯರೊಂದಿಗೆ
ಓಡುತ್ತಿದ್ದರೆ ಅದರ ಆನಂದ
ವರ್ಣಿಸಲಸದಳ

ನಮ್ಮನೆಗೂ ಸೈಕಲ್ ಬಂತು
ಆಯುಧ ಪೂಜೆಗೆ ಅಮ್ಮನ ಕಾಡಿ
ಬೇಡಿ ಹಣ ಪಡೆದು ಬಲೂನು
ಹೂ ಗಳಿಂದ ಸಿಂಗರಿಸಿ
ಕ್ಯಾರಿಯರ್ ಹಿಂದೆ ಡಬ್ಬ
ಅದಕ್ಕೊಂದು ತೂತು ಮಾಡಿ
ಹಬ್ ಗೆ ಕಟ್ಟಿ ಬರ್ ಎಂದು
ಸದ್ದು ಮಾಡಿ ಮುನ್ನೆಡೆದಾಗ
ಏನೋ  ಆನಂದ ಮನದಲ್ಲಿ

ಇಂದು ಬೈಕಿದೆ ಕಾರಿದೆ
ಹೂ ಹಣ್ಣಿಗೆ ಹಣವಿದೆ
ಅಲಂಕಾರ ಜೋರಿದೆ
ಆದರೂ ಬಾಲ್ಯದ ಆ
ಸೈಕಲ್ ಟೈರ್‌ ನೀಡಿದ
ಆನಂದ ಈ ಬೈಕ್ ಕಾರ್
ನೀಡುತ್ತಿಲ್ಲ

*ಸಿ ಜಿ ವೆಂಕಟೇಶ್ವರ*