22 ಸೆಪ್ಟೆಂಬರ್ 2018

ಯಾವಾಗ?(ಹನಿಗವನ)

                        *ಯಾವಾಗ?*

ದಿನ ದಿನ ಬರುವ
ದಿನಕರನು
ದಿನದಲಿ ಧರೆ ಬೆಳಗಿ
ಚಂದಿರಗೆ ಸಾಲ ನೀಡಿ
ಇರುಳಲಿ ಬೆಳಗುವನು
ತಮವ ಓಡಿಸುವನು
ಅಂದಕಾರದಲಿರುವ
ನಾವು ಬೆಳಗುವುದು
ಯಾವಾಗ?

*ಸಿ ಜಿ.ವೆಂಕಟೇಶ್ವರ
*ಗೌರಿಬಿದನೂರು*

21 ಸೆಪ್ಟೆಂಬರ್ 2018

ಮೌನವಾಗಿರೋಣ (ಕವನ)

             *ಮೌನವಾಗಿರೋಣ*

ಅತಿಯಾಗಿ ಬಾಯಿಬಿಟ್ಟರೆ
ಮೀನು ಬದುಕಲಾರದು
ಮಿತಿ ಮೀರಿ  ಮಾತನಾಡಿದರೆ
ತೊಂದರೆಗಳು  ತಪ್ದದು

ನಾಲಿಗೆಯ ಹರಿ ಬಿಟ್ಟರೆ
ಹರಿ ಹರರು  ಮುನಿವರು
ಯೋಚಿಸದೆ ಮಾತನಾಡಿದರೆ
ಕಷ್ಟಗಳು ಸಾವಿರಾರು

ಮಾತು ಮಾತಿಗೆ ‌ಜಗಳವೇಕೆ
ಮಾತಿನಲಿ ಹಿತವಿರಲಿ
ಮಾತಿನಲಿ ಮಧುರವಿರಲಿ
ಮಾತುಗಳು ಮೃದುವಾಗಿರಲಿ

ಮಾತು ಮನ ನೋಯಿಸದಿರಲಿ
ಮಾತುಗಳ ತುಪ್ಪದಂತೆ ಬಳಸೋಣ
ಮಾತುಮನೆ ಮುರಿಯದಿರಲಿ
ಕೆಟ್ಟ ಮಾತಿಗಿಂತ ಮೌನವಾಗಿರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


20 ಸೆಪ್ಟೆಂಬರ್ 2018

ಸಮರಸ(ಕವನ)

                      *ಸಮರಸ*
   

                          ನೀ
                         ಹೀಗೆ
                      ಮೌನವ
                      ತಾಳಿದರೆ
                    ನಾ ಸಹಿಸೆನು
                 ಒಮ್ಮೆ ನಕ್ಕುಬಿಡು

                            ನಾ
                         ಅಂದು
                        ಮುನಿದು
                     ಮಾತನಾಡಲಿಲ್ಲ
                 ಅದನು ಮರೆತು ಬಿಡು
               ಒಮ್ಮೆ ಮಾತನಾಡಿ ಬಿಡು

                             ನೀ
                          ನಾನು
                         ಎನ್ನದೇ
                      ಅಹಂ ಬಿಟ್ಟು
                    ಮಾತನಾಡೋಣ
               ಸಮರಸದಿ  ಬಾಳೋಣ

                     *ಸಿ ಜಿ*
                *ವೆಂಕಟೇಶ್ವರ*
             *ಗೌರಿಬಿದನೂರು*
           

ಕ್ಷಮಿಸಿ ಬಿಡು (ಕವನ)

             *ಕ್ಷಮಿಸಿ ಬಿಡು*

ಬರೆವೆನೊಂದು ಓಲೆ ಅಮ್ಮ
ಅರಿಯದೆ ತಪ್ಪೆಸಗಿದರೆ
ಹೊಟ್ಟೆಯೋಳಗಾಕಿ ಕೊಳ್ಳಮ್ಮ
ಅಕ್ಕರೆಯಲಿ ನಮ್ಮ ಪೊರೆಯಮ್ಮ

ಸುಂದರವಾದ ಪ್ರಕೃತಿ ಗೆ
ಕೊಡಲಿ ಹಾಕಿ ವಿಕೃತಿ ಮೆರೆದಿಹವು
ನದಿ ನದಗಳ  ಮಲಿನಗೊಳಿಸಿ
ತೊಂದರೆ ಅನುಭವಿಸುತಿಹೆವು

ಜಾತಿ ಮತಧರ್ಮದ ಹೆಸರಲಿ
ಕಚ್ಚಾಡಿ ಸಾಯುತಿಹೆವು
ಕ್ಷಮಿಸಿ ಬಿಡು ನಮ್ಮನ್ನು
ನಮಿಪೆವು ತೊರೆದು ಹಮ್ಮನ್ನು

ಭರತನ ಪೊರೆದ  ಭಾರತಿಯೆ
ನಾರಿಯರ  ಗೌರವಿಸದೆ
ಬಾರಿ ಅವಮಾನ ಮಾಡುತಿಹೆವು
ಕ್ಷಮಿಸಿ ಬಿಡು ನಮ್ಮನ್ನು


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


19 ಸೆಪ್ಟೆಂಬರ್ 2018

ಪ್ರಕೃತಿ ನ್ಯಾಯಾಲಯ (ಕವನ)

                *ಪ್ರಕೃತಿ ನ್ಯಾಯಾಲಯ*

ಬೀದಿಯಲಿದ್ದವನು
ಬಿಡಿಗಾಸು ಕಾಣದವನು
ಒಮ್ಮಿದೊಮ್ಮೆಲೆ ರಾಜಕಾರಣ
ಉದ್ಯಮ ಸೇರಿದನು

ಉದ್ಯಮಕ್ಕೆ ಬೇಕಾದ
ಅಕ್ರಮ ಅನ್ಯಾಯ ಅನೈತಿಕತೆ
ಭ್ರಷ್ಟಾಚಾರಗಳನ್ನು ಬೇಗನೆ
ಕರಗತಮಾಡಿಕೊಂಡನು

ಸಾವಿರ ಲಕ್ಷ ಗಳೆಲ್ಲಾ  ಅಲಕ್ಷ್ಯ
ಕೋಟಿಗಳ ಲೆಕ್ಕಾಚಾರ
ನೂರಾರು ಎಕರೆಗಳಷ್ಟು
ಜಮೀನು ಖರೀದಿಸಿದ್ದಾಯ್ತು
ಅಕ್ರಮಗಳ ಬೆನ್ನಟ್ಟಿ ಬಂದ
ನ್ಯಾಯಾಲಯದ ಜಾಮೀನು
ಪಡೆದಾಯ್ತು

ಪ್ರಕೃತಿಯ ವಿಕೋಪಕ್ಕೆ ಬಂಗಲೆ
ನೂರಾರು ಎಕರೆ ಜಮೀನು
ಕೊಚ್ಚಿ ಹೋಗಿತ್ತು ಭಯ ಆವರಿಸಿತ್ತು
ಸರಿ ತಪ್ಪುಗಳ ಮಾಡಿದ ಅಕ್ರಮಗಳ
ನೆನಪಾಗಿತ್ತು ಆದರೆ ಕಾಲ ಮಿಂಚಿತ್ತು
ಪ್ರಕೃತಿ ನ್ಯಾಯಾಲಯದಲ್ಲಿ ಜಾಮೀನು
ಸಿಗಲೇ ಇಲ್ಲ

ಎರಡು ದಿನ ಅನ್ನ ಆಹಾರವಿಲ್ಲದೆ
ಬಳಲಿದವನು ಮೂರನೇ ದಿನ
ಸಾಮಾನ್ಯ ನಿರಾಶ್ರಿತರ ಜೊತೆಗೆ
ತಟ್ಟೆ ಹಿಡಿದು ಕೈಯೊಡ್ಡಿದ್ದ


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*