28 ಮಾರ್ಚ್ 2018

ನಾನು ಮುಖ್ಯ ಮುಂತ್ರಿ ಆದರೆ?!!! (ಲೇಖನ) ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ನಾನು ಮುಖ್ಯ ಮಂತ್ರಿ ಆದರೆ

‌ನಾನು ಈ ರಾಜ್ಯದ ಮುಖ್ಯ ಮಂತ್ರಿಯಾದರೆ ಮೊದಲು ರಾಜ್ಯಾದ್ಯಂತ ಮದ್ಯಪಾನ ಮತ್ತು ಧೂಮಪಾನ ನಿಷೇಧ ಮಾಡುವೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವೆ.ರೈತರ ಕಷ್ಟಗಳ ನಿವಾರಣೆಗೆ ಶ್ರಮಿಸುವೆ.ನದಿಗಳ ಜೋಡಣೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವೆ.ಕೈಗಾರಿಕೆಗಳು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡುವಂತೆ ರೈತರು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡಲು (ಎಂ ಆರ್.ಪಿ) ಅವಕಾಶ ಕೊಡುವೆ.ಕೃಷಿಯನ್ನು ಆಧುನೀಕರಣ ಗೊಳಿಸಿ ಲಾಭದಾಯಕ ಉದ್ಯೋಗ ವನ್ನಾಗಿ ಮಾಡುವೆ .ಶೈಕ್ಷಣಿಕ ವಾಗಿ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ಖಾಸಗಿ ಶಾಲೆಗಳ ರಾಷ್ಟ್ರೀಕರಣ ಮಾಡಿ ಸರ್ಕಾರದ ವಶಕ್ಕೆ ಪಡೆದು ಏಕರೂಪದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವೆ ಒಂದರಿಂದ ಎಂಟನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಕಲಿತಲು ಶಾಸನ ಮಾಡುವೆ .

27 ಮಾರ್ಚ್ 2018

ಗಜ಼ಲ್ ೩೫(ಇದುವೆ ಜೀವನ)

*ಗಜ಼ಲ್ ೩೫*

ಇಲ್ಲದಿರೆ ತಿರಿದು ತಿವಿದರೂ ದಕ್ಕಲ್ಲ ಇದುವೆ ಜೀವನ
ಇದ್ದರೆ ಬೇಡವೆಂದು ಜಾಡಿಸಿದರೂ ಬರುವುದಲ್ಲ ಇದುವೆ ಜೀವನ

ಕಾಡಿ ಬೇಡಿದರೂ ದಮ್ಮಡಿ ದೊರೆಯಲಿಲ್ಲ ಅಂದು
ಅದೃಷ್ಟದ ಲಾಟರಿ ಒಡೆದು ಎಲ್ಲಾ ಸಿಕ್ಕಿತಲ್ಲ ಇದುವೇ ಜೀವನ

ಮರಳುಗಾಡಲಿ ಪಯಣ ಏಕಾಂಗಿ ಜೀವನದ ಹತಾಶೆ
ಯಶವಿರಲು ಊರೆಲ್ಲ ನೆಂಟರು ಬರುವರಲ್ಲ  ಇದುವೇ ಜೀವನ


ಬೆಂಬಿಡದೆ ಪೆಡಂಬೂತವಾಗಿ ಕಾಡುವುವು ದುರಿತಗಳು
ಪುಣ್ಯಕಾರ್ಯಗಳು ಕಾಯುವವು ಕೈಬಿಡಲ್ಲ  ಇದುವೆ ಜೀವನ

ಬೇವು ಬೆಲ್ಲ ಸಹಜ ಜೀವನದಿ ಸೀಜೀವಿ ಮುನ್ನುಗ್ಗು
ಕಷ್ಟಗಳ ನಂತರ ಸುಖಾಗಮನ ನಿಲ್ಲಲ್ಲ  ಇದುವೆ ಜೀವನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*.

ಬಂದಿ (ಹನಿಗವನ) ಮೊದಲ ಶತಕ 2018 ರ ನೂರನೇ( 100) ಪೋಸ್ಟ್ ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿಗವನ


ಹನಿಗವನ

ಬಂದಿ

ನಮಗೆ ಜೀವವಿಲ್ಲ‌ ಆತ್ಮ ವಿಲ್ಲ
ಆದರೂ ಬಂಧನ ತಪ್ಪಲಿಲ್ಲ
ನಿಮಗೆ ಆತ್ಮವಿದೆ ಜೀವಿಸುತ್ತಿಲ್ಲ
ನಿಮಗೂ ನಮಗೂ ವ್ಯತ್ಯಾಸವಿಲ್ಲ
ನೀವು ಸಂಸಾರ ಸಾಗರದಿ ಬಂದಿ
ನಾವು ತಂತಿ ಪಂಜರದಲ್ಲಿ ಬಂದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಮಾರ್ಚ್ 2018

ಗಜ಼ಲ್ ೩೪ (ಏನಾಗಿತ್ತು)


*ಗಜ಼ಲ್ ೩೪*

ಜೀವನ ಸವಿಯುವ ಮೊದಲು ಲೋಕ ತ್ಯಜಿಸಲು ಏನಾಗಿತ್ತು
ಜೀವನೀಡಿದವರ ತೊರೆದು ಹಾರಿ ಹೋಗಲು ಏನಾಗಿತ್ತು

ಮೀಸೆ ಮೂಡುವ ಮೊದಲು ಪ್ರೀತಿ ಪ್ರೇಮದ ಅಮಲು
ಹೆತ್ತವರ ಆಸೆಗಳ ಮಣ್ಣು ಪಾಲು ಮಾಡಿ ತೆರಳಲು ಏನಾಗಿತ್ತು

ಉಜ್ವಲವಾದ ಭವಿಷ್ಯದ ಕನಸ ಕಂಡ ಜನ್ಮದಾತರು
ಕನಸುಗಳಿಗೆ ಕೊಳ್ಳಿ ಇಟ್ಟು ಹೇಡಿಗಳಂತೆ ಸಾಯಲು ಏನಾಗಿತ್ತು

ತಾಳಿದವನು ಬಾಳಿಯಾನು ಎಂದರು ಅನುಭಾವಿ ಗಳು
ಆಕರ್ಷಣೆಯ ತೊರೆದು  ಕ್ಷಣ ಕಾಲ ಯೋಚಿಸಲು ಏನಾಗಿತ್ತು

ಯುವಮನಸುಗಳ ಜಾಗೃತಗೊಳಿಸಲು‌ ಸೀಜೀವಿಯ ಆಸೆ
ಹಿರಿಯರ ತಿಳುವಳಿಕೆ ಮಾತುಗಳ ಕೇಳಲು‌ ಏನಾಗಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*"ಬೇಸಿಗೆ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು

*"ಬೇಸಿಗ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು"

ನಮ್ಮ ಬಾಲ್ಯದ ದಿನಗಳಲ್ಲಿ ಪರೀಕ್ಷೆ ಮುಗಿದ ಮಾರನೆ ದಿನವೇ ನಮ್ಮ ನಿಜವಾದ ಹಬ್ಬ ಆರಂಭವಾಗುತ್ತಿತ್ತು.ಬೇಲಿ ಸಾಲಿನ ಓತಿಕ್ಯಾತ ಹೊಡೆಯುವ ಕಾರ್ಯದಿಂದ ಗೋಲಿ‌,ಗಜ್ಹುಗ, ಟಿಕ್ಕಿ,ಉಯ್ಯಾಲೆ, ಲಗೋರಿ,ಬುಗುರಿ,ಚಿನ್ನಿದಾಂಡು ....ಇತ್ಯಾದಿ ಆಟಗಳಲ್ಲಿ ಮುಳುತ್ತಿದ್ದ ನಾವು ಮನೆ ಸೇರದೆ ಅಮ್ಮನ ಬೆತ್ತದ ರುಚಿ‌ ಕಂಡದ್ದೂ‌ಇದೆ .
ನಮ್ಮ ಆ ಬಾಲ್ಯದ ದಿನಗಳ ಸಂಭ್ರಮ ನಿಜವಾದ ಮೋಜಿನ‌ ನೆನಪು

 ಈಗಿನ ಚಿತ್ರಣವೆದ ಬೇರೆ   ಬಹತೇಕ ನಗರ ಮತ್ತು ಹಳ್ಳಿಗಳಲ್ಲಿ ‌ಆಟವೆಂದರೆ  ಮೊಬೈಲ್ ಗೇಮ್ ಮನರಂಜನೆ ಎಂದರೆ ಟಿ ವಿ ಸೀರಿಯಲ್ ಕ್ರಿಕೆಟ್ ಎಂದಾಗಿದೆ ಈ ಹಿನ್ನೆಲೆಯಲ್ಲಿ ಕೆಲ ಪೋಷಕರು ಬೇಸಿಗೆ ಶಿಬಿರಗಳ ಮೂಲಕವಾಗಿ ನಮ್ಮ ಮಕ್ಕಳ ಮೊಬೈಲ್ ಮತ್ತು ಟಿ.ವಿ ಯಿಂದ ದೂರಸರಿಸಲು ಪ್ರಯತ್ನ ಮಾಡುವರು
ಇಂದು ಪರೀಕ್ಷೆ ಮುಗಿದ ಕೂಡಲೆ ಎಲ್ಲಾ ಪಟ್ಟಣ ನಗರಗಳಲ್ಲಿ ಬೇಸಿಗೆ ಶಿಬಿರಗಳ ಭರಾಟೆ ಆರಂಭವಾಗುತ್ತದೆ ‌ಕೆಲವು ಕಡೆ ಮಕ್ಕಳು ಓದುವ ಶಾಲೆಗಳೆ ಈ ರೀತಿಯ ಶಿಭಿರ ಆಯೋಜನೆ ಮಾಡಿದರೆ .ಇನ್ನೂ ಕೆಲವು ಕಡೆ ಈ ರೀತಿಯ ಶಿಬಿರ ಮಾಡುವ ದಂದೆ ಮಾಡಿ‌ ಕೇವಲ ಹಣ ಗಳಿಕೆಯನ್ನು ಮಾಡಲು ಇರುವ ಮಾರ್ಗ ವಾಗಿರುವುದು ವಿಪರ್ಯಾಸ

ಹಾಗಾದರೆ ಈ ಬೇಸಿಗೆ ಶಿಬಿರಗಳು ಬೇಡವೆ ?

ಖಂಡಿತವಾಗಿಯೂ ಬೇಡ ಎನ್ನಲಾಗುವುದಿಲ್ಲ ಇಂತಹ ಬೇಸಿಗೆ ಶಿಬಿರಗಳಲ್ಲಿ ಸರಿಯಾದ ರೀತಿಯಲ್ಲಿ ಆಯೋಜಿಸಿ ಮಕ್ಕಳ ಸಮಯದ ಸದುಪಯೋಗ ಮಾಡುವ ಕೆಲ ಸಂಘಟನೆ ಮತ್ತು  ಶಾಲೆಗಳು ಮಕ್ಕಳ ವಿರಾಮ ಕಾಲದ ಸದುಪಯೋಗ ಪಡಿಸಿಕೊಳ್ಳಲು ಮತ್ತು ಸೃಜನಶೀಲತೆ ಬೆಳೆಸಲು ಸಹಕಾರಿ ಆಗಿವೆ ಆದರೆ ಕೆಲ ಶಾಲೆ ಮತ್ತು ಸಂಘಟನೆಗಳು ನಡೆಸುವ ಬೇಸಿಗೆ ಶಿಬಿರಗಳು ಯಾಂತ್ರಿಕವಾಗಿ ಹಣಮಾಡುವ ಉದ್ಯೋಗ ಮಾಡಿಕೊಂಡು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿವೆ .

ಬೇಸಿಗೆ ಶಿಬಿರಕ್ಕೆ ಪರ್ಯಾಯ ಏನು?

೧ ಬೇಸಿಗೆ ರಜೆಯಲ್ಲಿ ಮಕ್ಕಳ ಅಜ್ಜ ಅಜ್ಜಿ ಯರ ಮನೆಗೆ ಹೋಗಿ ಅವರ ಜೊತೆ ಕಾಲ ಕಳೆದರೆ  ಸಂಬಂಧಗಳ ಬೆಳವಣಿಗೆಯಾಗುವುದು
೨ ಹಳ್ಳಿ ಗಳಲ್ಲಿ ಆಡುವ ಕೆಲ ಆಟಗಳ ಪರಿಚಯ ಆಗುತ್ತದೆ
೩ ಅಜ್ಜ ಅಜ್ಜಿಯರು ಹೇಳುವ ಕಥೆಗಳು ಧಾರ್ಮಿಕ  ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು‌ ಸಹಕಾರಿ
೪ ಹಳ್ಳಿಯ ಪರಿಸರ ,ಸಹಜೀವನ, ಕೂಡುಕುಟುಂಬದ ಪರಿಕಲ್ಪನೆಯನ್ನು ತಿಳಿಯುವರು
೫ ಕೇವಲ ಶಾಲಾ ಪರಿಸರ ದ ಏಕಾತಾನತೆಯನ್ನು ಹೋಗಲಾಡಿಸುವ ಮೂಲಕ ಅಪ್ಪ ಅಮ್ಮನಿಂದ ದೂರವಾಗಿ ಬೇರೆಯರ ಜೊತೆ ಬೆರೆಯುವ ಗುಣ ಬೆಳೆಯುತ್ತದೆ.
೬ ಪೋಷಕರು ತಮ್ಮ ಮಕ್ಕಳ ಜೊತೆ ಪ್ರವಾಸ ಹೋಗಬಹುದು.
೭ ಜಾತ್ರೆ ,ಸಂತೆ ,  ಕಾರ್ಯಾಗಾರ ಮುಂತಾದ ಕಡೆ ಕರೆದುಕೊಂಡು ಹೋಗಿ ನಮ್ಮ ಆಚರಣೆ, ಸಂಸ್ಕೃತಿ ಪರಿಚಯಿಸುವುದು
೮ ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳಾದ ಅಡುಗೆ ಮಾಡುವುದು, ನೀರು ತರುವುದು ಪ್ರಾಣಿಗಳ ಪಾಲ್ ಮುಂತಾದ ಕೆಲಸಗಳನ್ನು ಕೌಶಲ್ಯ ದಿಂದ ಮಾಡುವುದರ ಕಲಿಸಬಹುದು .

ಒಟ್ಟಾರೆ ಹೇಳುವುದಾದರೆ ಉತ್ತಮ ಉದ್ದೇಶ ಇಟ್ಟುಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮತ್ತು ಸೇವೆಯನ್ನು ಗುರಿಯಾಗಿಟ್ಟುಕೊಂಡು ಮಾಡುವ ಬೇಸಿಗೆ ಶಿಬಿರಗಳು ಇದ್ದರೆ ಪೋಷಕರು ಅಂತಹ ಕಡೆ ಮಕ್ಕಳನ್ನು ಕಳಿಸಬಹುದು .ಆದರೆ ಹಣ ಮಾಡುವ ದಂದೆಯಾಗಿರುವ ಕುರಿಗಳಂತೆ ಮಕ್ಕಳನ್ನು ಸೇರಿಸಿಕೊಂಡು ನಾಟಕ ಆಡುವ ಶಿಬಿರಗಳಿಂದ ದೂರವಿರವುದೇ ಒಳಿತು.ಅದರ ಬದಲಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಿಬರಬಹುದು ಅಥವ ಸಂಬಂಧಿಕರ ಮನೆಗೆ ಮತ್ತು ಅಜ್ಜ ಅಜ್ಜಿಯರ ಮನೆಗೆ ಹೋಗಿ ಬರಬಹುದು.
ಒಟ್ಟಿನಲ್ಲಿ ಬೇಸಿಗೆಯ ರಜೆಯು ಮಕ್ಕಳಿಗೆ ವರವಾಗಬೇಕೆ ಹೊರತು ಒತ್ತಡ ಹೇರಿ ಅವರ ಬಾಲ್ಯದ ಅಮೂಲ್ಯವಾದ ಕ್ಷಣಗಳನ್ನು ಕಿತ್ತುಕೊಳ್ಳುವಂತಿರಬಾರದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*