06 ಮಾರ್ಚ್ 2018

ಕೈಯಿಂದ ಊಟ ಮಾಡೋಣ ಆರೋಗ್ಯ ಹೊಂದೋಣ (ಸಂಗ್ರಹ ಲೇಖನ)

ಬೋಜನಂ ಅಮೃತಮಸ್ತ್
________________

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.

3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಪುರಾಣಗಳ ಪ್ರಕಾರ…

* ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

* ಹೆಬ್ಬೆರಳು: ಅಗ್ನಿತತ್ವ

* ತೋರು ಬೆರಳು: ವಾಯುತತ್ವ

* ಮಧ್ಯ ಬೆರಳು: ಆಕಾಶ

* ಉಂಗುರ ಬೆರಳು: ಭೂಮಿ

* ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ...

ಸಂಸ್ಕೃತಿಗೆ ಕೊಟ್ಟರೆ...

ಮಾನವ ಜೀವನ ಆರೋಗ್ಯಕರ.....

ಯೋಚಿಸಿ......

ಅಲಂಕಾರ ಬೇಕೆ ?
ಅಥವಾ
ಆರೋಗ್ಯವೇ ????

ಕನಸು (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ


ಹನಿಗವನ
*ಕನಸು*
ಕಂಡೆನು ಕನಸೊಂದನು
ಪಡೆಯಲು ಬೆಳಕನು
ಈಗ ಎಲ್ಲಡೆ  ಬೆಳಕಿಲ್ಲ
ಕತ್ತಲೆಯು ಎಲ್ಲೆಲ್ಲೂ
ಪಾಲಿಸಿದೆ ಅಹಿಂಸೆ ಸತ್ಯ
ಇಂದು ಹಿಂಸೆ,ಸುಳ್ಳು ನಿತ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮಾರ್ಚ್ 2018

ಗಜ಼ಲ್ ೨೮(ಬಂದೆಯಾ ) ಕನ್ನಡ ಕಾವ್ಯಲೋಕ ವಾಟ್ಸಪ್ ತಂಡದ ಸ್ಪರ್ಧೆ ಯಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್

ಗಜ಼ಲ್ ೨೮

ಎಲ್ಲಾ ಮುಗಿದು ಹೋದ ಮೇಲೆ ನೆನಪು ಮಾಡಲು ಬಂದೆಯಾ
ಸೊಲ್ಲಡಗಿದ ನನ್ನ ಹೃದಯವ ಮಾತನಾಡಿಸಲು ಬಂದೆಯಾ

ನಿನ್ನ ಸಂಗದ  ನೆನಪುಗಳ ಪ್ರವಾಹಕ್ಕೆ ಕಟ್ಟೆ ಕಟ್ಟಿ ನಿಲ್ಲಿಸಿದ್ದೇನೆ
ನೀನಿಲ್ಲದೇ ನನಗೆ  ಬಾಳು ಸಾದ್ಯವೇ ಎಂದು ಪ್ರಶ್ನಿಸಲು ಬಂದೆಯಾ

ಒಂದೊಮ್ಮೆ ನೀನಿಲ್ಲದ ನನ್ನ ಬಾಳು ನಶ್ವರ ಈ ಜಗ ಶೂನ್ಯ
ಈಶ್ವರನ ದಯೆಯಿಂದ ನೆಮ್ಮದಿ ಪಡೆದ ಆತ್ಮ ನೋಡಲು ಬಂದೆಯಾ

ನನ್ನ ಛಲ ಉತ್ತಮ ಸಂಸ್ಕಾರವುಳ್ಳ  ಮಾನವನಾಗುವದು
ನಿನ್ನ ಮರೆತು ನಾನೇಗೆ ಬದುಕಿರುವೆನೆಂದು ಪರೀಕ್ಷಿಸಲು‌ ಬಂದೆಯಾ

ಇಂದ್ರಿಯಾಸಕ್ತಿಗಳ ದಾಸನಾಗಿ ನಿನ್ನ ನೆನಪಲಿ ಹುಚ್ಚನಾಗಿದ್ದೆ
ಇಂದ್ರನಿಗಿಂತ ಆತ್ಮಾನಂದ ಸುಖ ಪಡೆವ ಸೀಜೀವಿಯ ವೀಕ್ಷಿಸಲು ಬಂದೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





04 ಮಾರ್ಚ್ 2018

ಹರಿ ಓಂ ಸ್ವಸ್ತಿ (ಹನಿಗವನ)



*ಹರಿ ಓಂ ಸ್ವಸ್ತಿ*

ಶುಭ ಕಾರ್ಯದ ರಂಗೋಲಿ
ಆಗಿದೆ ಬಣ್ಣಗಳ ಹೋಲಿ
ಜೋಡಿಸಿದೆ ಫಲ ತಾಂಬೂಲ
ನೀಡಲಿದೆಮಗೆ   ಶುಭ ಫಲ
ಅಲಂಕಾರ ಆಗಿಲ್ಲ ಜಾಸ್ತಿ
ಹೇಳೋಣ ಹರಿ ಓಂ  ಸ್ವಸ್ತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮೂತಿ (ಹನಿಗವನ)


ಹನಿಗವನ

*ಮೂತಿ*

ವರ್ಷಗಳಿಂದ ಅವಳ ಹಿಂದೆ
ಅಲೆದಾಡಿ ಪ್ರೀತಿಯ ನಾಟಕವಾಡಿ
ಮದುವೆಯಾಗು ಎಂದು ಅವಳೆಂದಾಗ
ಅವನು ಉತ್ತರಿಸಿದ ನಮ್ಮದು
ಬೇರೆ ಜಾತಿ
ಸಿಟ್ಟಿಗೆದ್ದ ಅವಳು ಜಾಡಿಸಿದಳು
ಊದಿಕೊಂಡಿದೆ
ಈಗ ಮೂತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*