16 ಜನವರಿ 2018

ಹನಿಗವನಗಳು (ಸೌಂದರ್ಯ)

ಹನಿಗವನಗಳು

*ಲಾವಣ್ಯವತಿ*

ನನ್ನವಳು
ಸೌಂದರ್ಯವತಿ
ಲಾವಣ್ಯವತಿ
ಅನುರೂಪವತಿ
ಅಂತೆಯೇ
ಖರ್ಚೂ ಅತಿ

*ಬೇಕು*

ಆ   ಬ್ರಹ್ಮದೇವನು ತನ್ನ
ಸೌಂದರ್ಯವನ್ನು ಒಟ್ಟುಗೂಡಿಸಿ
ನನ್ನವಳ ನಿರ್ಮಿಸಿರಬೇಕು
ಅದಕ್ಕೆ ಇವಳು  ಕೇಳುವಳು
ಅದೂ ಬೇಕು
ಇದೂ ಬೇಕು
ಕಂಡಿದ್ದೆಲ್ಲಾ ಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಜನವರಿ 2018

ಸುಗ್ಗಿ (ಕವನ)

*ಸುಗ್ಗಿ*

ಬಂದಿದೆ ಮಕರ  ಸಂಕ್ರಮಣ
ಹೊರಟ ರವಿ ಉತ್ತರದತ್ತ
ಮಾನವನ ಮುಖ ದಕ್ಷಿಣದತ್ತ
ಅವನ ನಡಿಗೆ ವಿನಾಶದತ್ತ

ಎಳ್ಳು ತಿಂದು ಒಳ್ಳೆ ಮಾತೆಲ್ಲಿ
ಬಾಯಿಬಿಟ್ಟರೆ ಬಣ್ಣಗೇಡು
ಇವರ ಅವ ತೆಗಳುವನು
ಅವರ ಇವ ಬಿಡುವನೆ ?

ಸಂಕ್ರಾಂತಿ ಎಂದರೆ ಸುಗ್ಗಿ
ಬೆಳೆದ ಫಸಲಿಗೆ ಪೂಜೆ
ಈಗ ನಮ್ಮನಾಳುವರಿಗೆ ಸುಗ್ಗಿ
ನಮ್ಮ ಹಣ ಕೊಳ್ಳೆ ಹೊಡೆವ ಸುಗ್ಗಿ

ರಾಸುಗಳಿಗೆ ಕಿಚ್ಚು ಹಾಯಿಸುವ ಕಾಲ
ಈಗೇನಿದ್ದರೂ ಕೆಸರೆರೆಚಾಟಕ್ಕೆ ಸಕಾಲ
ಸೂರ್ಯನ ಪಥ ಬದಲಾಗಿದೆ
ನಮ್ಮದು  ಯಾವಾಗ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*💐💐💐

10 ಜನವರಿ 2018

ನೀನಾಗು ಮನುಜ (ಕವನ) "ಕವಿ ಬಳಗ " ವಾಟ್ಸಪ್ ಗುಂಪಿನಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ


*ನೀನಾಗು ಮನುಜ*

ಬಾಳ ದಾರಿಯು ಅನಿಶ್ಚಿತ
ಇಲ್ಲಿ ಕಷ್ಟ ಸುಖವು ನಿಶ್ಚಿತ
ತುಂಬಿದ ಕಡಲು ಒಂದೆಡೆ
ನೀರಿಗೆ ಬರ ಮತ್ತೊಂದೆಡೆ

ಮರಳುಗಾಡ ಒಂಟೆಯಂತೆ
ಕಡಲ  ಈಜುವ ಮೀನಂತೆ
 ಸಂಪರ್ಕ ಸೇತುವೆಯಂತೆ
ನೀ ತೋರು ಸದಾ ಮಾನವತೆ

ಒಮ್ಮೆ ನಳನಳಿಪ ಪರಿಸರ
ಮತ್ತೊಮ್ಮೆ ಬೋಳುಮರ
ನಗು ಅಳು ಬಾಳಲಿ ಸಹಜ
ಎದರಿಸಿ ನೀನಾಗು ಮನುಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ಜನವರಿ 2018

ಸಹಬಾಳ್ವೆ (ಹನಿಗವನ)



*ಹನಿಗವನ*

*ಸಹಬಾಳ್ವೆ*

ಹುಟ್ಟು ಹಾಕು ನೀನು
ಹಿಡಿವೆ ನಾನು ಮೀನು
ಸಾಗರವೆ ನಮ್ಮ ತಾಯಿ
ಅನ್ನ ನೀಡುವ ಮಾಯಿ
ಬೀಸುವೆನೀಗ ಬಲೆಯ
ಕಲಿಸುವೆ ನಿನಗೆ ಕಲೆಯ
ಜೊತೆಗೆ ನಾವು ದುಡಿವ
ಜೊತೆಗೆ ನಾವು ಬಾಳುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಜನವರಿ 2018

ಖಚಿತ (ಹನಿಗವನ)

*ಹನಿಗವನ*

*ಖಚಿತ*

ಹಿಂದೊಮ್ಮೆ
ಸಿಗುತ್ತಿತ್ತು ,
ಜ್ಞಾನ, ಆರೋಗ್ಯ ,ಶಿಕ್ಷಣ
ಉಚಿತ
ಈಗ ಇವೆಲ್ಲವೂ ಸಿಗಲು
ನೀಡಲೇಬೇಕು ಹಣ
ಖಚಿತ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*