28 ಡಿಸೆಂಬರ್ 2017

ಮೂರು ಶಾಯಿರಿಗಳು


ಶಾಯಿರಿಗಳು

*೧*

*ಕಾರಣ*

ಮನಸೇ ಏಕೆ ಅಳುವೆ
ಸುಮ್ಮನಿರು
ನನ್ನರಸಿ ನನ್ನ ಬಿಟ್ಟು ಹೋಗಿರುವುದು
ನನಗೆ ನೋವು ನೀಡಲು ಅಲ್ಲ
ಬದಲಿಗೆ ನೋವುಂಡ ಹೃದಯಕೆ
ಮುಲಾಮು ತರಲು

*೨*

*ಫಸಲು*

ನೀನು ಹೋದ ಮೇಲೆ
ನನ್ನ ಬದುಕು ಹದಗೆಟ್ಟಿದೆ
ಗೆಳತಿ
ಮುಂಗಾರು ಮಳೆಯಂತೆ
ಬಂದು ನನ್ನದೆಯ ಹದಗೊಳಿಸು
ಬೆಳೆವ ನಾವು  ಪ್ರೀತಿ ಪ್ರೇಮದ
ಫಸಲು‌

*೩*

*ನಗು*


ತರಬೇಡ ಗೆಳತಿ ನೀನು
ಸೂಜಿದಾರ ಹೊಲಿಯಲು
ನನ್ನ ಹರಿದ ಹೃದಯ
ಮರಿಬೇಡ ಗೆಳತಿ ನೀನು
ಬೀರಲು ಮುಗಳ್ನಗೆಯ
ಅದೇ ನಲಿವಲಿ ಮರೆವೆ
ನನ್ನ ಹೃದಯದ ಗಾಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಡಿಸೆಂಬರ್ 2017

ಮೂರು ಹನಿಗವನಗಳು

*ಹನಿಗವನಗಳು*
*೧*

*ಆಕರ್ಷಣೆ*

ನಾನವಳಿಗಂದೆ
ನಿನ್ನ ತುಂಟ ಕಣ್ಗಳ
ಆಕರ್ಷಣೆಗೆ ನಿನ್ನನ್ನು
ಹಿಂಬಾಲಿಸುತ್ತಿರುವೆ
ಅವಳೆಂದಳು ಹೀಗೆ
ಹೌದು ಹಿಂದೆ ನೋಡು
ನಮ್ಮಪ್ಪನೂ ನಿನ್ನನ್ನೇ
ಹಿಂಬಾಲಿಸುತ್ತಿರುವ

*೨*

*ಜಟಾಪಟಿ*

ಮದುವೆಯ ಮೊದಲು
ಅವಳು ಕೋಮಲೆ  ತುಂಟಿ
ಮದುವೆಯ ನಂತರ
ಅವಳು ಜಗಳಗಂಟಿ
ನಿಲ್ಲುತ್ತಿಲ್ಲ ನಮ್ಮ ಜಾಟಾಪಟಿ


*೩*

*ಪ್ರಶ್ನೆ*

ಅವನಂದ ಈ ತುಂಟ ಮಕ್ಕಳ
ನೋಡಿಕೊಳ್ಳಲು
ನನಗಾಗುವುದಿಲ್ಲ.
ಅವಳೆಂದಳು ಈ ಮಾತನ್ನು
ನಾನು ಏಕಾಂತ ದಲ್ಲಿ ಇದ್ದಾಗ
ನನ್ನೊಂದಿಗೆ ತುಂಟಾಟ ಆಡುವಾಗ
ಏಕೆ ಹೇಳಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಣ್ಣುಗಳು (ಕವನ)

*ಕಣ್ಣುಗಳು*

ನನ್ನ ಮಕ್ಕಳ ಹೊತ್ತು ಹೊರಟಿರುವೆ
ಜೀವನದ ಬಟ್ಟೆಯನರಸಿ ನಡೆದಿರುವೆ
ಅಡ್ಡೆಯಲಿಹವು ನನ್ನಯ  ಕುಡಿಗಳು
ಅವುಗಳು ನನ್ನ ಬಾಳಿನ ಕಣ್ಣುಗಳು

ನನ್ನ ಕಂದಮ್ಮಗಳು ನನಗೆ ಭಾರವೆ
ಏರುಪೇರುಗಳಿರಲಿ ಸಲಹಿ ತೋರುವೆ
ಬಡತನ ಸಿರಿತನ ಕಂಡಿರುವೆ ನಾನು
ನಿಮಗೆ ಕಷ್ಟ ತಿಳಿಯದ ಹಾಗೆ ಸಾಕುವೆನು

ಹೆಣ್ಣು ನಾನೆಂಬ ಕೀಳರಿಮೆ ನನಗಿಲ್ಲ
ನನ್ನ ಕಂದಗಳ ಸಾಕಿ ತೋರಿಸುವೆನಿಲ್ಲಿ
ಜನರ ಅನುಕಂಪ ನನಗೆ ಬೇಕಿಲ್ಲ
ಪ್ರೋತ್ಸಾಹದ ಮಾತೆರಡು ಸಾಕಲ್ಲ

ಆಧುನಿಕ ಶ್ರವಣಕುಮಾರ ನಾನಲ್ಲ
ನನ್ನ ಮಕ್ಕಳ ಪೊರೆವುದ ನಿಲಿಸಲ್ಲ
ಬಾಳಿ ತೋರುವೆ ನಾನು ಜಗದಿ
ತಾಳಿ ಬದುಕುವೆ ಎಂದು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಡಿಸೆಂಬರ್ 2017

ನಾಲ್ಕು ಹನಿಗವನಗಳು

*ಹನಿಗವನಗಳು*

*೧*

*ಆಟಿಕೆಗಳು*

ಆಟಿಕೆ ಕೊಳ್ಳಲು ಅಂಗಡಿಗೋದೆ
ಯಾವುದು ಕೊಳ್ಳಲು ತಿಳಿಯದಾದೆ
ಟೋಪಿ‌ ಕನ್ನಡಕ  ಬೊಂಬೆಗಳು
ಸಾಲದಾಗಿವೆ ನೋಡಲೆನ್ನ  ಕಂಗಳು
ಕೇಳಿ ಅವುಗಳ  ಬೆಲೆಗಳ ಹೌಹಾರಿದೆ
ಮುಂದೆ ಕೊಳ್ಳುಲು ತೀರ್ಮಾನಿಸಿದೆ

*೨*
*ನಲ್ಲ*

ನೀನು ಅನುಮತಿಸಿದರೆ
ಈಗಲೇ ಆಗುವೆನು
ನಾನು ನಿನ್ನ ನಲ್ಲ
ಅವಳಂದಳು
ನೀನವನಲ್ಲ


*೩*

*ಬೇಡಿಕೆ*

ಬಟ್ಟೆ ಒಗೆವ ಯಂತ್ರ ಕೊಡಿಸಲೇಬೇಕು
ಎಂದು ಕೇಳಿದಳು ನನ್ನವಳು
ತೊರುತ್ತಾ ಆವೇಗ
ನಾನು ಶಾಂತವಾಗಿ ಉತ್ತರಿಸಿದೆ
ಖಂಡಿತ  ಕೊಡಿಸುವೆ ಜಾರಿಯಾಗಲಿ
ವೇತನ ಆಯೋಗ

*೪*

*ಪ್ರೀತಿ*

ಚಳಿಯಿರಲಿ ಮಳೆಯಿರಲಿ
ನಿನ್ನೆ ಪ್ರೀತಿಸುವೆ
ಅವಳೆಂದಳು
ರವಿಯೂ ಇರಲಿ ಶಶಿಯೂ ಇರಲಿ
ನಿನ್ನನೂ ಪ್ರೀತಿಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಡಿಸೆಂಬರ್ 2017

ಹನಿಗವನ (ಭಾರತ ಮಾರ್ಗ ವಿಧಾತ) ವಾಜಪೇಯಿ ಅವರ ಜನ್ಮದಿನದ ನೆನಪಿಗಾಗಿ

*ಭಾರತಮಾರ್ಗ ವಿಧಾತ*

ಗೊತ್ತಿಲ್ಲದ ಇಂಗ್ಲೆಂಡ್ ನವನಿಗೆ
ರಾಷ್ಟಗೀತೆಯಲ್ಲಿ  ಹೇಳುವೆವು
ಭಾರತ ಭಾಗ್ಯವಿಧಾತ
ಸುವರ್ಣ ಚತುಷ್ಪತ ರಸ್ತೆ ಕೊಟ್ಟ
ನಮ್ಮ ವಾಜಪೇಯಿ ಯವರಿಗೆ
ಹೇಳಲು ಮರೆತಿರುವೆವು
ಭಾರತ ಮಾರ್ಗ ವಿಧಾತ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಎ.ಬಿ.ವಾಜಪೇಯಿ ರವರ ಸ್ಮರಣಾರ್ಥವಾಗಿ