07 ನವೆಂಬರ್ 2017

ನಲ್ಲ (ಕವನ)

*ನಲ್ಲ*

ಕಾಲ್ತೆಗೆದು ಹೊರಟನಲ್ಲ ನಲ್ಲ
ಕಾಲ್ಗೆಜ್ಜೆಯ ದ್ವನಿಗೆ ಓಗೊಡಲಿಲ್ಲ
ಪರಿಪರಿಯ ಮನವಿಗೆ ಸ್ಪಂದಿಸಲಿಲ್ಲ
ನನಗಿನ್ನಾರೂ ಈಗ ಗತಿಯಿಲ್ಲ

ಉದಯಿಸಿದ ಪ್ರೀತಿ ಅಸ್ತಂಗತವಾಯಿತೇ
ನಾ ಕಂಡ ಸಾಗರದಷ್ಟು ಕನಸು ಕಮರಿತೇ
ಇನಿಯನ ಸನಿಹ ಬರೀ ಕನಸಾಯಿತೇ
ಕುಳಿತ ನೆಲ ಕಂಪಿಸುವಂತಾಯಿತೇ


ತೊರೆದು ಹೋಗದಿರು ಗೆಳೆಯ
ಬರಿದು ಮಾಡದಿರು ಒಲವ
ದಡವ ಸೇರಿಸು ಬಿಡದೆ ಇಲ್ಲೆ
ನನ್ನ ಮರೆತು ಹೇಗೆ ನೀನಿರಬಲ್ಲೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ನವೆಂಬರ್ 2017

ವಿಪರ್ಯಾಸವೆಂದರೆ......(ಸಂಗ್ರಹ ಲೇಖನ)

ಮಾನವಾ,  ಹಣವಿಲ್ಲದಾಗ ನೀನುಮನೆಯಲ್ಲಿ ತರಕಾರಿಯನ್ನು ತಿನ್ನುತ್ತೀಯಾ...

✍ಆದರೆ ಹಣವಿದ್ದಾಗ ಅದೇ
ತರಕಾರಿಯನ್ನು ಐಶರಾಮಿ ಹೋಟೆಲ್ ನಲ್ಲಿ ತಿನ್ನುತ್ತೀಯಾ..

✍ಹಣವಿಲ್ಲದಾಗ ನೀನು
ಸೈಕಲ್ನ ನಲ್ಲಿ ತಿರುಗುತ್ತೀಯಾ...

✍ಆದರೆ ಹಣವಿದ್ದಾಗ ಅದೇ exercise ಮಾಡುವ cycle  ಯ೦ತ್ರದ ಮೇಲೆ ತಿರುಗುತ್ತಿಯಾ..

✍ಹಣವಿಲ್ಲದಾಗ ಆಹಾರ ಪಡೆಯಲು ನಡೆಯುತ್ತೀಯಾ,

✍ಹಣವಿದ್ದಾಗ ಕೊಬ್ಬನ್ನು ಕರಗಿಸಲು ನಡೆಯುತ್ತೀಯಾ..

✍ಓ.. ಮಾನವಾ, ನಿನ್ನನ್ನು ನೀನು ವ೦ಚಿಸಿ ಕೊಳ್ಳುತ್ತೀಯಾ ...

✍ ಹಣವಿಲ್ಲದಾಗ ಮದುವೆಯಾಗಲು ಇಚ್ಚಿಸುತ್ತೀಯಾ...

✍ಹಣವಿದ್ದಾಗ ವಿಚ್ಚೇದನ ಕೊಡಲು ಬಯಸುತ್ತೀಯಾ...

✍ಹಣವಿಲ್ಲದಾಗ ಹೆ೦ಡತಿಯೇ ನಿನಗೆ ಸೆಕ್ರೆಟರಿ..

✍ಹಣವಿದ್ದಾಗ ಸೆಕ್ರೆಟರಿಯೇ ನಿನಗೆ  ಹೆ೦ಡತಿ...

✍  ಹಣವಿಲ್ಲದಾಗ ಶ್ರೀಮಂತನ೦ತೆ
ಹಣವಿದ್ದಾಗ ಬಡವನ೦ತೆ ನಟಿಸುತ್ತಿಯಾ...

✍ಓ ಮಾನವಾ ಸುಲಭ ಸತ್ಯವನ್ನು
ನೀನೆ೦ದೂ ಹೇಳಲಾರೆ
ಶೇರ್ ಮಾಕೆ೯ಟ್ ಕೆಟ್ಟದ್ದೆ೦ದು
ಹೇಳುತ್ತಿಯಾ...

✍ಆದರೆ ಸದಾ ಅದರಲ್ಲಿ ವ್ಯವಹರಿಸುತ್ತಿಯಾ
ಹಣವೆ೦ಬುದೊ೦ದು ಪಿಡುಗು
ಅನ್ನುತ್ತಿಯಾ...

✍ಆದರೆ ಅದನ್ನು ಗಳಿಸಲು ಹರಸಾಹಸ ಪಡುತ್ತಿಯಾ
ದೊಡ್ಡಸ್ತಿಕೆ ಒ೦ದು ಏಕಾ೦ಗಿತನ
ಎನ್ನುತ್ತಿಯಾ....

✍ ಆದರೆ ಅದನ್ನು
ಸದಾ ಇಷ್ಟಪಡುತ್ತಿಯಾ...

✍ಕುಡಿತ ಮತ್ತು ಜೂಜಾಟ ಕೆಟ್ಟದ್ದು ಅನ್ನುತ್ತಿಯಾ...

✍ಆದರೆ ಸದಾ ಅದರ
ದಾಸನಾಗುತ್ತಿಯಾ...

✍ಓ ಮಾನವ ನೀ ಹೇಳುವುದರಲ್ಲಿ ಅಥ೯ ಇಲ್ಲ ....

✍ಆದರೆ ನೀ ಮಾಡುವುದರಲ್ಲಿ ಮಾತ್ರ ಅಥ೯ವಿದೆ...

✍ನೀನು ಇದುವರೆಗೆ ಏನು ಮಾಡಿಲ್ಲವೋ ಅದು ಜೀವನವಲ್ಲ...

✍ನೀನು ಇನ್ನು ಏನು ಮಾಡುವೆಯೋ ಅದೇ ಜೀವನ
ಕಾದು ನೋಡಬೇಡ...
ಪ್ರತಿದಿನವೂ ಅದ್ಬುತಗಳು
ನಡೆಯುತ್ತವೆ...

✍ಇಪ್ಪತ್ತು ರೂಪಾಯಿ ಓವ೯ ಬಿಕ್ಷುಕನಿಗೆ ಕೊಡಲು ಹಿ೦ಜರಿಯುತ್ತೇವೆ....

✍ಆದರೆ  ಇಪ್ಪತ್ತು ರೂ. ಹೋಟೆಲ್ ಸವ೯ರ ಗೆ ಟಿಪ್ಸ್ ಕೊಡಲು ಅಳುಕು ಇಲ್ಲ....

✍ಇಡೀ ದಿವಸ ದುಡಿದ ನ೦ತರ ಜಿಮ್ನಲ್ಲಿ ಮೂರು ಗ೦ಟೆ ಕಳೆಯಲು ನಿಮಗೆ ಸಮಯವಿದೆ...

✍ಆದರೆ ಸ್ವಲ್ಪ
ಸಮಯ ಅಡಿಗೆಕೋಣೆಯಲ್ಲಿ
ಅಮ್ಮನಿಗೆ ಸಹಾಯ ಮಾಡಲು ನಿಮಗೆ ಸಮಯವೇ ಇಲ್ಲ...

✍ಐದು ನಿಮಿಷ ಪ್ರಾಥ೯ನೆಗಾಗಿ
ಉಪಯೋಗಿಸುವುದು ನಿಮಗೆ
ತು೦ಬಾ ಕಷ್ಟ....

✍ಆದರೆ ಮೂರು ಗ೦ಟೆ ಸಿನಿಮಾದಲ್ಲಿ ಆರಾಮವಾಗಿ
ಕಳೆಯುತ್ತೀರಿ...

✍ಇಡೀ ವಷ೯ ಪ್ರೇಮಿಗಳ ದಿನಾಚರಣೆ ಗಾಗಿ ಕಾಯುತ್ತೀರಿ
(valantineday).

✍ಆದರೆ ಅಮ್ಮ೦ದಿರ ದಿನಾಚರಣೆ(mothers day) ನಿಮಗೆ ನೆನಪಾಗುವುದೇ ಇಲ್ಲ

✍ರಸ್ತೆ ಬದಿ ನರಳುತ್ತಿರುವ ಬಡಮಕ್ಕಳಿಗೆ ಒ೦ದು ತು೦ಡು
ಬ್ರೆಡ್ಡನ್ನು ಕೊಡಲಾರಿರಿ...

✍ಆದರೆ ಅವರ painting ಚಿತ್ರ
ಲಕ್ಷಗಟ್ಟಲೆ ಬೆಲೆಗೆ ಮಾರಾಟವಾಗುತ್ತವೆ...

✍ನಾವು ಜೋಕ್ ಗಳನ್ನು ಬೇಗ ಷೇರ್ ಮಾಡುತ್ತೇವೆ...

✍ ಆದರೆ ಇ೦ತಹ ಸ೦ದೇಶಗಳನ್ನು ಅಸಡ್ಡೆ ಮಾಡುತ್ತೇವೆ...

ಆಲೋಚಿಸಿರಿ, ಬದಲಾಗಿರಿ...👍   

ಕೃಪೆ: ವಾಟ್ಸಪ್

ನೀರೆಯ ಪ್ರತಿಮೆ (ಹನಿಗವನಗಳು)




*ಗಡಿಗೆ*

ಗಡಿಗೆ ಹೊತ್ತ ತರುಣಿಯ
ಪ್ರತಿಮೆ ಮಾಡುವೆ ನಾನು
ಅಡಿಗಡಿಗೆ
ಕೆಡಿಸದಿರಿ ಹೊಡೆದು
ಹಿಡಿದುಬಡಿಗೆ
ಬಣ್ಣ ಬಳಿಯುವೆ ನಾನು
ಅಡಿಯಿಂದ ಮುಡಿಗೆ
ಅಣ್ಣ ಸ್ವಲ್ಪ ಸರಿ ನೀ
ಆ ಕಡೆಗೆ


*ನೀರೆ*

ಮಾಡುವೆ ಪ್ರತಿಮೆಯ
ನೀರಹೊತ್ತ ನೀರೆಯ
ಬಣ್ಣ ಕುಂಚಗಳ ಬಳಸಿರುವೆ
ಓರೆಕೋರೆಗಳ ತಿದ್ದಿರುವೆ
ಬಗಲಲಿ ಹಿಡಿದಿಹಳು  ಗಡಿಗೆ
ಕೊಳ್ಳಬಹುದು ಕಾಸಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮಗು (ಹನಿಗವನಗಳು)

*೧*
*ನಗು*

ನಿಮ್ಮ ನೋಡಿ ಆಕಳಿಸಿರುವೆನು
ನಗುವನೂ ಕಳಿಸಿರುವೆನು
ಶುಭ್ರವಸ್ತ್ರದ ನಿಷ್ಕಲ್ಮಶ ನಗು
ಸ್ವೀಕರಿಸಿ  ನೀನಾಗಿ ಮಗು .

*೨*
*ರಾಯಭಾರಿ*
ಕಣ್ಣು ಮೂಗು ಗಲ್ಲ
ಆಕಾರ ರಸಗುಲ್ಲ
ಬೊಚ್ಚುಬಾಯಿ ಸುಂದರ
ಸ್ವಚ್ಛ ಮನಸಿನ ಪೋರ
ಶುಭ್ರ ವಸ್ತ್ರಧಾರಿ
ನಗುವ ರಾಯಭಾರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ನವೆಂಬರ್ 2017

ಗಜಲ್ ೫(ತೊರೆದೆಯ)

ಗಜಲ್ ೫(ತೊರೆದೆಯ)

ಮುತ್ತಿನುಂಗುರಕೆ ಮರುಳಾಗಿ ಗೆಳೆಯನ ತೊರೆದೆಯ
ಮುತ್ತಿನಂತಹ ಮನಸುಳ್ಳ ಸ್ನೇಹಿತನ  ತೊರೆದೆಯ

ಮಂಜಿನಂತಹ ನನ್ನ ಹೃದಯಕ್ಕೆ ನಂಜು ಹಾಕಿ
ಸಂಜೆವೇಳೆ ಕೈಬಿಟ್ಟು ಸಹಚರನ   ತೊರೆದೆಯ

ಕಪ್ಪಗಿರುವ ನೇರಳೆ ಹಣ್ಣಂತಹ ನನ್ನ ಬಿಟ್ಟು
ಹತ್ತಿಯ ಹಣ್ಣಂತಹ  ಗೆಳೆಯ ಸಿಕ್ಕನೆಂದು ಒಳ್ಳೆಯವನ  ತೊರೆದೆಯ

ನೀನನ್ನ ಬಾಳಿನ ಸೊಡರಾಗುವೆ ಎಂದು ಬಯಸಿದ್ದೆ
ನನ್ನ ಹೃದಯಕ್ಕೆ ಕಿಚ್ಚು ಹಚ್ಚಿ ಇನಿಯನ   ತೊರೆದೆಯ

ತಿಂಗಳ ಬೆಳಕಿನಲಿ ನನಗೆ ಮಧುರ ಸಂಗವ ನೀಡಿ
ತಿಂಗಳಾಗುವ ಮೊದಲೆ ಮನ್ಮಥನ  ತೊರೆದೆಯ

ವಂಚಕಿ ಚಂಚಲೆಯೆಂದು ಗೆಳೆಯರು ನಿನ್ನ ನಿಂದಿಸಿದರೂ
ಒಪ್ಪದ "ಸೀಜೀವಿ"ಯೆಂಬ ಮುಗ್ಧ ನಂಬಿಕಸ್ಥನ ತೊರೆದೆಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*