06 ನವೆಂಬರ್ 2017

ನೀರೆಯ ಪ್ರತಿಮೆ (ಹನಿಗವನಗಳು)




*ಗಡಿಗೆ*

ಗಡಿಗೆ ಹೊತ್ತ ತರುಣಿಯ
ಪ್ರತಿಮೆ ಮಾಡುವೆ ನಾನು
ಅಡಿಗಡಿಗೆ
ಕೆಡಿಸದಿರಿ ಹೊಡೆದು
ಹಿಡಿದುಬಡಿಗೆ
ಬಣ್ಣ ಬಳಿಯುವೆ ನಾನು
ಅಡಿಯಿಂದ ಮುಡಿಗೆ
ಅಣ್ಣ ಸ್ವಲ್ಪ ಸರಿ ನೀ
ಆ ಕಡೆಗೆ


*ನೀರೆ*

ಮಾಡುವೆ ಪ್ರತಿಮೆಯ
ನೀರಹೊತ್ತ ನೀರೆಯ
ಬಣ್ಣ ಕುಂಚಗಳ ಬಳಸಿರುವೆ
ಓರೆಕೋರೆಗಳ ತಿದ್ದಿರುವೆ
ಬಗಲಲಿ ಹಿಡಿದಿಹಳು  ಗಡಿಗೆ
ಕೊಳ್ಳಬಹುದು ಕಾಸಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮಗು (ಹನಿಗವನಗಳು)

*೧*
*ನಗು*

ನಿಮ್ಮ ನೋಡಿ ಆಕಳಿಸಿರುವೆನು
ನಗುವನೂ ಕಳಿಸಿರುವೆನು
ಶುಭ್ರವಸ್ತ್ರದ ನಿಷ್ಕಲ್ಮಶ ನಗು
ಸ್ವೀಕರಿಸಿ  ನೀನಾಗಿ ಮಗು .

*೨*
*ರಾಯಭಾರಿ*
ಕಣ್ಣು ಮೂಗು ಗಲ್ಲ
ಆಕಾರ ರಸಗುಲ್ಲ
ಬೊಚ್ಚುಬಾಯಿ ಸುಂದರ
ಸ್ವಚ್ಛ ಮನಸಿನ ಪೋರ
ಶುಭ್ರ ವಸ್ತ್ರಧಾರಿ
ನಗುವ ರಾಯಭಾರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ನವೆಂಬರ್ 2017

ಗಜಲ್ ೫(ತೊರೆದೆಯ)

ಗಜಲ್ ೫(ತೊರೆದೆಯ)

ಮುತ್ತಿನುಂಗುರಕೆ ಮರುಳಾಗಿ ಗೆಳೆಯನ ತೊರೆದೆಯ
ಮುತ್ತಿನಂತಹ ಮನಸುಳ್ಳ ಸ್ನೇಹಿತನ  ತೊರೆದೆಯ

ಮಂಜಿನಂತಹ ನನ್ನ ಹೃದಯಕ್ಕೆ ನಂಜು ಹಾಕಿ
ಸಂಜೆವೇಳೆ ಕೈಬಿಟ್ಟು ಸಹಚರನ   ತೊರೆದೆಯ

ಕಪ್ಪಗಿರುವ ನೇರಳೆ ಹಣ್ಣಂತಹ ನನ್ನ ಬಿಟ್ಟು
ಹತ್ತಿಯ ಹಣ್ಣಂತಹ  ಗೆಳೆಯ ಸಿಕ್ಕನೆಂದು ಒಳ್ಳೆಯವನ  ತೊರೆದೆಯ

ನೀನನ್ನ ಬಾಳಿನ ಸೊಡರಾಗುವೆ ಎಂದು ಬಯಸಿದ್ದೆ
ನನ್ನ ಹೃದಯಕ್ಕೆ ಕಿಚ್ಚು ಹಚ್ಚಿ ಇನಿಯನ   ತೊರೆದೆಯ

ತಿಂಗಳ ಬೆಳಕಿನಲಿ ನನಗೆ ಮಧುರ ಸಂಗವ ನೀಡಿ
ತಿಂಗಳಾಗುವ ಮೊದಲೆ ಮನ್ಮಥನ  ತೊರೆದೆಯ

ವಂಚಕಿ ಚಂಚಲೆಯೆಂದು ಗೆಳೆಯರು ನಿನ್ನ ನಿಂದಿಸಿದರೂ
ಒಪ್ಪದ "ಸೀಜೀವಿ"ಯೆಂಬ ಮುಗ್ಧ ನಂಬಿಕಸ್ಥನ ತೊರೆದೆಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ನವೆಂಬರ್ 2017

ಕನಸು (ನ್ಯಾನೋ ಕಥೆ)

*ನ್ಯಾನೋ ಕಥೆ*

*ಕನಸು*

"ನಮ್ಮ ಮಗಳು  ನಮ್ಮಂತೆ ಕಟ್ಟಡ ಕೆಲಸಗಾರರಾಗದೇ ಇಂತಹ ದೊಡ್ಡ ಕಟ್ಟಡದ ಒಡತಿಯಾಗಬೇಕು ಇದು ನನ್ನ ಕನಸು" ಎಂದು ದೂರದ ಬಳ್ಳಾರಿಯಿಂದ ಬೆಂಗಳೂರಿನಲ್ಲಿ ಕಟ್ಟಡ ಕೆಲಸ ಮಾಡಲು ಬಂದ  ಮಾರಣ್ಣ ತನ್ನ ಶೆಡ್ ನಲ್ಲಿ  ಹೆಂಡತಿಗೆ ರಾತ್ರಿ ಊಟಮಾಡುವಾಗ ಹೇಳಿದನು .ಆಗ ಮಗುವು ತಣ್ಣಗೆ ನಿದ್ರಿಸುತ್ತಿತ್ತು
ಮಾರನೆಯ ದಿನ ತನ್ನ ಮಗುವನ್ನು  ಸೀರೆಯಿಂದಾದ ಜೋಲಿಯಲ್ಲಿ  ಮಲಗಿಸಿ ಕೆಲಸಕ್ಕೆ ಹೊರಟರು .ಮಧ್ಯಾಹ್ನದ ವೇಳೆಗೆ ಮಾರಣ್ಣ ಕೆಲಸದಲ್ಲಿ ನಿರತನಾಗಿದ್ದಾಗ ಮಗಳು ಜೋಲಿಯಿಂದಿಳಿದು ಕಟ್ಟಡದ ಕೆಲಸ ಮಾಡುವ ಕಡೆಗೆ ಅಂಬೆಗಾಲಿಟ್ಟು ಬಂದಳು .ಹತ್ತು ಅಂತಸ್ತಿನ ನಿರ್ಮಾಣದ ಕಟ್ಟಡದಿಂದ ಮೇಲಿನಿಂದ ಒಂದು ಚೂಪಾದ ಸರಳು ಇನ್ನೇನು ಮಗುವಿನ ಮೇಲೆ ಬೀಳುವ ವೇಳೆಗೆ ಓಡಿ ಬಂದ ಮಾರಣ್ಣ ಮಗಳನ್ನು ದೂರ ತಳ್ಳಿ ತಾನು ಮುಂದೆ ಸಾಗಲು ಪ್ರಯತ್ನಿಸಿದ ಅದಾಗಲೇ ಸರಳು ಅವನ ದೇಹ ಸೀಳಿ ರಕ್ತ ಚಿಮ್ಮಿ ಪ್ರಾಣ ಪಕ್ಷಿ ಹಾರಿತ್ತು ಕಣ್ಣು ಮಾತ್ರ ಮುಚ್ಚದೇ  ಅವನ ಮಗಳ ಭವಿಷ್ಯದ ಮನೆ ಕಣ್ಣುಗಳಲ್ಲಿ ಪ್ರತಿಫಲನ ಆಗುತ್ತಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮದ್ಯವಯಸ್ಸಿನ ನಂತರ ......(ಸಂಗ್ರಹ ಲೇಖನ)

*ನಮ್ಮ ಆತ್ಮೀಯರೊಬ್ಬರು ಕಳುಹಿಸಿದ ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು*:
*"ಮಧ್ಯವಯಸ್ಸಿನ ನಂತರ"*

೧.  ಜೀವನದ ರಹಸ್ಯ :
       1.ಮಧ್ಯವಯಸ್ಸಿನ ವರೆಗೆ  ಹೆದರ  ಬೇಡಿ....
       2.ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ.....

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ...

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವುದು ಬೇಡ.

೧೨.   ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ....
 
             ೧.   ನಿಮ್ಮ  ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ  ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)....
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ" ಮತ್ತು "ನಗುತ್ತಿರಿ"

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು... ಅಂತೆಯೇ ನಮ್ಮ ಜೀವನ..  ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

*ಸಂಗ್ರಹ*:
*ಸಿ.ಜಿ.ವೆಂಕಟೇಶ್ವರ*

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳಿ....
🙏🌹

🌷🌷🌷🌷🌷🌷🌷🌷🌷