This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
29 ಅಕ್ಟೋಬರ್ 2017
ನೆರಳಾಗು (ಕವನ)
*ನೆರಳಾಗು*
ನಾ ನೀಡುವೆನೀಗ ಮೊಲೆ ಹಾಲ
ನೀ ಬೆಳಗು ಮುಂದೆ ಜಗವೆಲ್ಲ /
ತಾಯಿಯ ಎದೆ ಹಾಲು ಅಮೃತ
ಭುವಿಯಲೆಲ್ಲೂ ಸಿಗದ ಪಂಚಾಮೃತ
ಈಗ ನಾ ನೀಡುವೆ ಹಾಲನ್ನ
ಉಜ್ವಲವಾಗಲಿ ನಿನ್ನ ಜೀವನ //
ನೀ ನನ್ನ ಹೊಟ್ಟೆಯಲುದಿಸಿದ ಸಸಿ
ಚಿಗುರೊಡಿಸಿ ಬೆಳೆಸುವೆ ಇರುವಂತೆ ಹಸಿ
ಈ ಹಳೆಬೇರು ಮರೆಯದಿರು ಮಂದೆ
ಹೊಸ ಚಿಗುರೊಡೆದ ಮದದಿಂದ //
ಹರಿ ಹರರು ಕುಡಿದರು ದೇವಿ ಹಾಲ
ಅಮ್ಮನ ಋಣ ಅವರು ಮರೆಯಲಿಲ್ಲ
ತಾಯಿಯ ಹಾರೈಕೆ ನಿನಗಿದೆ ಸದಾ ಕಾಲ ಹೆಮ್ಮರವಾಗಿ ನೆರಳಾಗು ಅನುಗಾಲ//
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ನಾ ನೀಡುವೆನೀಗ ಮೊಲೆ ಹಾಲ
ನೀ ಬೆಳಗು ಮುಂದೆ ಜಗವೆಲ್ಲ /
ತಾಯಿಯ ಎದೆ ಹಾಲು ಅಮೃತ
ಭುವಿಯಲೆಲ್ಲೂ ಸಿಗದ ಪಂಚಾಮೃತ
ಈಗ ನಾ ನೀಡುವೆ ಹಾಲನ್ನ
ಉಜ್ವಲವಾಗಲಿ ನಿನ್ನ ಜೀವನ //
ನೀ ನನ್ನ ಹೊಟ್ಟೆಯಲುದಿಸಿದ ಸಸಿ
ಚಿಗುರೊಡಿಸಿ ಬೆಳೆಸುವೆ ಇರುವಂತೆ ಹಸಿ
ಈ ಹಳೆಬೇರು ಮರೆಯದಿರು ಮಂದೆ
ಹೊಸ ಚಿಗುರೊಡೆದ ಮದದಿಂದ //
ಹರಿ ಹರರು ಕುಡಿದರು ದೇವಿ ಹಾಲ
ಅಮ್ಮನ ಋಣ ಅವರು ಮರೆಯಲಿಲ್ಲ
ತಾಯಿಯ ಹಾರೈಕೆ ನಿನಗಿದೆ ಸದಾ ಕಾಲ ಹೆಮ್ಮರವಾಗಿ ನೆರಳಾಗು ಅನುಗಾಲ//
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
28 ಅಕ್ಟೋಬರ್ 2017
ಎದ್ದೇಳು (ಗಜಲ್)
*ಗಜಲ್*
ಸೋತ ಹತಾಶೆಯಲಿ ಬೀಳದಿರು ಎದ್ದೇಳು/
ಗೆಲುವು ಕಾದಿದೆ ನಿನಗೆ ಬಳಲದಿರು ಎದ್ದೇಳು /
ಮೋಡ ಮುಸುಕಿದ ರವಿಯು ಬೆಳಗದಿರುವನು/
ಕತ್ತಲು ಮುಗಿದ ಮೇಲೆ ಬೆಳಕು ಬರುವಂತೆ ಎದ್ದೇಳು/
ಪಕ್ಷಿಗಳ ಗೂಡು ಎನಿತು ಸಾರಿ ಬಿದ್ದರು ಮತ್ತೆ ಕಟ್ಟುವವು/
ಜೇಡ ತನ್ನ ಬಲೆ ಹರಿದರೂ ಛಲ ಬಿಡದೆ ಅನವರತ ನೇಯುವಂತೆ ಎದ್ದೇಳು/
ನಡೆವರೆಡಹದೆ ಕುಳಿತವರೆಡಹರೆ ಎಡವಿದರು ನಿಲ್ಲದಿರು/
ಕಷ್ಟಗಳ ಮಳೆಸುರಿಯೆ ಹೆಬ್ಬಂಡೆಯಂತೆ ಎದ್ದೇಳು /
ಅದೃಷ್ಟವನು ನಂಬಿ ಬದುಕದಿರು ಅದೃಷ್ಟ ದೈರ್ಯವಂತರ ಪರ /
ನಿನ್ನ ಅಂಜುಬುರುಕನೆಂದವರು ಕರುಬುವಂತೆ ಎದ್ದೇಳು /
ಕಷ್ಟಗಳು ನಿರಂತರವಲ್ಲ ಸುಖವು ಬರದಿರವುದಿಲ್ಲ/
ವೆಂಕಟೇಶ್ವರನ ದಯೆ ಪಡೆದು ಪರಮಶಕ್ತಿಯಂತೆ ಎದ್ದೇಳು /
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಸೋತ ಹತಾಶೆಯಲಿ ಬೀಳದಿರು ಎದ್ದೇಳು/
ಗೆಲುವು ಕಾದಿದೆ ನಿನಗೆ ಬಳಲದಿರು ಎದ್ದೇಳು /
ಮೋಡ ಮುಸುಕಿದ ರವಿಯು ಬೆಳಗದಿರುವನು/
ಕತ್ತಲು ಮುಗಿದ ಮೇಲೆ ಬೆಳಕು ಬರುವಂತೆ ಎದ್ದೇಳು/
ಪಕ್ಷಿಗಳ ಗೂಡು ಎನಿತು ಸಾರಿ ಬಿದ್ದರು ಮತ್ತೆ ಕಟ್ಟುವವು/
ಜೇಡ ತನ್ನ ಬಲೆ ಹರಿದರೂ ಛಲ ಬಿಡದೆ ಅನವರತ ನೇಯುವಂತೆ ಎದ್ದೇಳು/
ನಡೆವರೆಡಹದೆ ಕುಳಿತವರೆಡಹರೆ ಎಡವಿದರು ನಿಲ್ಲದಿರು/
ಕಷ್ಟಗಳ ಮಳೆಸುರಿಯೆ ಹೆಬ್ಬಂಡೆಯಂತೆ ಎದ್ದೇಳು /
ಅದೃಷ್ಟವನು ನಂಬಿ ಬದುಕದಿರು ಅದೃಷ್ಟ ದೈರ್ಯವಂತರ ಪರ /
ನಿನ್ನ ಅಂಜುಬುರುಕನೆಂದವರು ಕರುಬುವಂತೆ ಎದ್ದೇಳು /
ಕಷ್ಟಗಳು ನಿರಂತರವಲ್ಲ ಸುಖವು ಬರದಿರವುದಿಲ್ಲ/
ವೆಂಕಟೇಶ್ವರನ ದಯೆ ಪಡೆದು ಪರಮಶಕ್ತಿಯಂತೆ ಎದ್ದೇಳು /
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
27 ಅಕ್ಟೋಬರ್ 2017
ನವೆಂಬರ್ ಕನ್ನಡಿಗರು(ಕವನ)
*ನವೆಂಬರ್ ಕನ್ನಡಿಗರು*
ನಾವು ನವೆಂಬರ್ ಕನ್ನಡಿಗರು
ಕನ್ನಡದ ಬೆಳೆಸುವ ಕಟ್ಟಾಳುಗಳು /
ಬೇರೆ ಭಾಷೆಯ ವ್ಯಾಮೋಹಿಗಳು
ನಮ್ಮ ಭಾಷೆಯ ಮರೆತವರು
ಹೊರನಾಡಿಗರಿಗೆ ಔದಾರ್ಯ ತೋರುವೆವು
ಕನ್ನಡಮ್ಮನ ಸೌಂದರ್ಯ ಮರೆವೆವು //
ಕನ್ನಡ ಚಿತ್ರಗಳು ನಮಗೆ ನಗಣ್ಯ
ಇತರೆ ಭಾಷೆ ಚಿತ್ರಗಳು ಅಗ್ರಗಣ್ಯ
ಕನ್ನಡದಲ್ಲಿ ಮಾತಾಡಿದರೆ ಅವಮಾನ
ಇತರೆ ಭಾಷಿಕರಿಗೆ ರತ್ನ ಸಿಂಹಾಸನ //
ಕನ್ನಡ ಹಾಡುಗಳುಗೆ ಬೆಲೆಯಿಲ್ಲ
ಆಂಗ್ಲ ಹಿಂದಿಗಳಿಗೆ ನೆಲೆ ಇಲ್ಲಿ
ವರ್ಷ ಪೂರ್ತಿ ಕನ್ನಡ ನೆನೆಪಿರಲ್ಲ
ನವೆಂಬರ್ ತೋರಿಕೆ ಮರೆಯಲ್ಲ //
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
26 ಅಕ್ಟೋಬರ್ 2017
ಕಾಲ್ಗೆಜ್ಜೆ (ಹನಿಗವನಗಳು)
ಹನಿಗವನಗಳು
"೧*
*ಮನದನ್ನೆ*
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಬಂದಳು ನನ್ನ ಮನದನ್ನೆ
ಲಜ್ಜೆಯ ಆಭರಣತೊಟ್ಟು
ಕದ್ದಳು ನನ್ನ ಮನಸನ್ನೆ
*ಸದ್ದು*
ಅಮವಾಸ್ಯೆ ದಿನ ಪಾಳುಬಂಗಲೆ
ಬಳಿ ಕೇಳಿತು ಗೆಜ್ಜೆ ಸದ್ದು
ಎದ್ದೆನೋ ಬಿದ್ದೆನೋ ಎಂದು
ಓಡಿದೆನು ಎದ್ದು ಬಿದ್ದು
*ನಾಗವಲ್ಲಿ*
ಆಪ್ತ ಮಿತ್ರ ಚಿತ್ರದಲ್ಲಿನ ಗೆಜ್ಜೆ ಸದ್ದಿಗೆ
ಹೆದರಿರಲಿಲ್ಲ ಚಿತ್ರಮಂದಿರದಲ್ಲಿ
ಏಕೆಂದರೆ ನಮ್ಮನೆಯಲ್ಲಿ
ದಿನವೂ ನೋಡಿದ್ದೆನಲ್ಲ ನಾಗವಲ್ಲಿ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
"೧*
*ಮನದನ್ನೆ*
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಬಂದಳು ನನ್ನ ಮನದನ್ನೆ
ಲಜ್ಜೆಯ ಆಭರಣತೊಟ್ಟು
ಕದ್ದಳು ನನ್ನ ಮನಸನ್ನೆ
*ಸದ್ದು*
ಅಮವಾಸ್ಯೆ ದಿನ ಪಾಳುಬಂಗಲೆ
ಬಳಿ ಕೇಳಿತು ಗೆಜ್ಜೆ ಸದ್ದು
ಎದ್ದೆನೋ ಬಿದ್ದೆನೋ ಎಂದು
ಓಡಿದೆನು ಎದ್ದು ಬಿದ್ದು
*ನಾಗವಲ್ಲಿ*
ಆಪ್ತ ಮಿತ್ರ ಚಿತ್ರದಲ್ಲಿನ ಗೆಜ್ಜೆ ಸದ್ದಿಗೆ
ಹೆದರಿರಲಿಲ್ಲ ಚಿತ್ರಮಂದಿರದಲ್ಲಿ
ಏಕೆಂದರೆ ನಮ್ಮನೆಯಲ್ಲಿ
ದಿನವೂ ನೋಡಿದ್ದೆನಲ್ಲ ನಾಗವಲ್ಲಿ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






