20 ಅಕ್ಟೋಬರ್ 2017

ಆಸೆ (ನ್ಯಾನೋ ಕಥೆ)

             *  ನ್ಯಾನೊಕಥೆ*

*ಆಸೆ*


ಸಂಧ್ಯಾವಂದನೆ ಮುಗಿಸಿ ಊಟಕ್ಕೆ ಸಿದ್ದವಾದ ಸತೀಶ್ "ಎಲ್ಲಿ ಮಗಳು ಎರಡು ದಿನವಾದರೂ ಬರಲಿಲ್ಲ "ಎಂದು‌  ಮಮತಗೆ ಕೇಳಿದ ಈ ಪ್ರಶ್ನೆಗೆ ತಡವರಿಸಿ ಬರುವಳು ಸ್ನೇಹಿತೆ ಮನೆಗೆ ಹೋಗಿರುವುದಲ್ಲ  ಇನ್ನೇನು ಬರಬಹುದು ಎಂದಳು .
ಆದರೆ ಪೂಜಾಳ ಅಂದಿನ ದಿನಚರಿಯೇ ಬೇರೆಯಾಗಿರುತ್ತು ಸಾಂಪ್ರದಾಯಿಕ ಕುಟುಂಬದ ಹುಡುಗಿಯಾದ ಗೀತಳಿಗೆ ನಿರೀಕ್ಷೆಯಂತೆ ಮನೆಯಲ್ಲಿ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು ಅದು ಉಡುಗೆ ತೊಡುಗೆ ಆಚಾರ ವಿಚಾರಗಳಲ್ಲೂ ಮುಂದುವರೆದಿತ್ತು. ಹುಚ್ಚುಕೋಡಿ ಮನಸ್ಸು ಈ ನಿರ್ಬಂಧಗಳನ್ನು ದಾಟಲು ಕಾಯುತ್ತಿತ್ತು ಅವರ ಕಾಲೇಜಿನ ಕೆಲ ಯವಕ ಯವತಿಯರು ಗೋವಾ ಪ್ರವಾಸ ಗೊರಟಾಗ ಪೂಜಾಳ ಕನಸಿಗೆ ರೆಕ್ಕೆ ಮೂಡಿ ತಾನೂ ಗೋವಾ ಪ್ರವಾಸಕ್ಕೆ ಅಣಿಯಾದಳು ಆದರೆ ಅಪ್ಪ ಒಪ್ಪಬೇಕಲ್ಲ .ಇರುವುದೊಂದೇ ದಾರಿ ಅಮ್ಮನ ಮನವೊಲಿಸುವುದು .ಅಮ್ಮನಿಗೆ ವಿಷಯ ತಿಳಿದಾಗ ಕೆಂಡಾಮಂಡಲವಾದರೂ ಒಪ್ಪಿಗೆ ಸೂಚಿಸಿದಳು .ಕೊನೆಗೆ ಅಪ್ಪನಿಗೆ ತಿಳಿಯದಂತೆ ಗೋವಾ ಪ್ರವಾಸಕ್ಕೆ ನಡದೇ ಬಿಟ್ಟಳು .ಅವಳಿಗಿಷ್ಟದ ಉಡುಪು ಧರಿಸಿ. ಅವಳಿಷ್ಟದ ಸಂಗೀತವನ್ನು ಆಸ್ವಾದಿಸಿ ಮೈಮರೆತಿದ್ದಳು.
ಊಟ ಮುಗಿಸಿ ಹಜಾರದಲ್ಲಿ ಕುಳಿತ ಸತೀಶ್ ಮೊಬೈಲ್ "ತಿರುಮಲವಾಸ....ಶ್ರೀ ವೆಂಕಟೇಶ..." ಎಂದು ರಿಂಗಣಿಸಿತು .ಹಲೋ ಎಂದವನೆ ಒಂದು ಕ್ಷಣ ಮೌನವಾದ ಹೆಂಡತಿ ಏನೆಂದು ಕೇಳಿದರೆ ಮಾತನಾಡದೆ ಗಾಡಿ ಹತ್ತಿಸಿಕೊಂಡು ಹೊರಟೇಬಿಟ್ಟ .ಹತ್ತು ಕಿಲೋಮೀಟರ್ ಅಂತರದಲ್ಲಿ ರಸ್ತೆಯ ಮದ್ಯ ಜನಜಂಗುಳಿ. ಜನರ ಸರಿಸಿ ಮುಂದೆ ದಂಪತಿಗಳಿಗೆ ಕಂಡಿದ್ದು ಘೋರ ದೃಶ್ಯ. ಮಗಳು ಮಾಡ್ ಡ್ರೆಸ್ ನಲ್ಲಿ ಶವವಾಗಿ ಬಿದ್ದಿದ್ದಾಳೆ ಮಗಳ ಸ್ಥಿತಿ ನೋಡಿದ  ಸತೀಶ್ ಅಲ್ಲೇ ಕುಸಿದು ಕಣ್ಮುಚ್ಚಿದ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಅಕ್ಟೋಬರ್ 2017

ದಂತಭಗ್ನಂ (ಹನಿಗವನಗಳು)

*೧*
*ಚುಂಬನ*

ಉಲ್ಲಸಿತವಾಗುವುದು ನನ್ನ
ಮೈಮನ
ಕೇಳದೇ  ನೀ ನೀಡಿದರೆ
ಚುಂಬನ
*೨*

*ಬೆನ್ನುಡಿ*

ನಿನ್ನ ಚುಂಬನ ನಮ್ಮ ಪ್ರೇಮಕ್ಕೆ
ಮುನ್ನಡಿ
ಈಗಿರುವ ಇಬ್ಬರು ಮಕ್ಕಳು
ಬೆನ್ನುಡಿ

*೩*

*ದಂತಭಗ್ನಂ*

ನೀನಿತ್ತ ಮೊದಲ ಚುಂಬನದಿಂದ
ನಾನು ಪ್ರೀತಿಯಲಿ ಮಗ್ನ
ನೀನೆಂದು ತಿಳಿದು ಅದೇ ಹುರುಪಲ್ಲಿ
ಅವಳಿಗೆ ಚುಂಬಿಸಿದೆ ದ್ವಿತೀಯ ಚುಂಬನದಲ್ಲಿ
ಎರಡು ದಂತಭಗ್ನ

*೪*

*ಸ್ಯಾರಿ*

ಚುಂಬಿಸಲು‌ ಆತುರದಿ ಹೋದೆ
ನಲ್ಲೆಯ ಬಳಿಸಾರಿ
ಅವಳು ಕೇಳೇ ಬಿಟ್ಟಳು
ಎಲ್ಲಿ ಇಳಕಲ್ ಸ್ಯಾರಿ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಪ್ರಶ್ನೆ (ಕವನ)


*ಪ್ರಶ್ನೆ*

ಸತಿ ಸುತರನ್ನು ಪೊರೆದಿದ್ದೆ
ಪ್ರೀತಿಯ ಧಾರೆಯರೆದಿದ್ದೆ
ಕೇಳಿದೆಲ್ಲವ  ನಾನುನೀಡಿದ್ದೆ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸತಿಯೆಂದು ಅತಿ ಪ್ರೀತಿಮಾಡಿ
ಮಿತಿಯಿರದ ಕಾಳಜಿ ಮಾಡಿ
ಪ್ರತಿನಿಮಿಷ ಜೊತೆಗಿದ್ದ ನನ್ನ ಸತಿಯಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸುತನೆಂದು ಹೊತ್ತು ಸಾಕಿದ್ದೆ
ಅತಿಸವಲತ್ತು ನೀಡಿದ್ದೆ
ಮದುವೆ ಮಾಡಿದ ಮೇಲೆ ಸುತನಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ದೇಹಾರೋಗ್ಯ ನೋಡಲು ಯಾರಿಲ್ಲ
ಮನಕೆ ಸಾಂತ್ವನ ಹೇಳಲು ದಿಕ್ಕಿಲ್ಲ
ಸತಿ ಸುತರ ಪ್ರೀತಿ ಬಯಸಿದ್ದು ತಪ್ಪೇ
ಹೇಳಿ ನಾನೇನು ತಪ್ಪು ಮಾಡಿದ್ದೆ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

17 ಅಕ್ಟೋಬರ್ 2017

ಸಂಗೀತ(ಹನಿಗವನಗಳು)

             *೧*

*ಸಂಗೀತ*

ನಿನಗಾಗಿ ಹಾಡುವೆನು ದಿನವೂ
ಸಂಗೀತ
ಬಾರೆ ನನ್ನ ದಿನವೂ
ಪ್ರೀತಿಸು ಗೀತ

*೨*

*ತಾತ*

ನಿನಗೋಸ್ಕರ ಹಾಡುವೆ ದಿನವೂ
ಸಂಗೀತ|
ನಿನಗೋಸ್ಕರ ಬರೆಯವೆ ದಿನವೂ
ಗೀತ
ನನಗೊಲಿದು ಬಿಡು  ನಾನಾಗುವ ಮುನ್ನ
ತಾತ||

*೩*

*ಪ್ರಪಾತ*

ಸಂಸಾರ ಸರಿ ಇದ್ದರೆ
ಸರಿಗಮ ಸಂಗೀತ|
ಹೆಚ್ಚು ಕಡಿಮೆ ಆದರೆ
ಆಳ ಕಂದಕದ
ಪ್ರಪಾತ||


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*