19 ಅಕ್ಟೋಬರ್ 2017

ಪ್ರಶ್ನೆ (ಕವನ)


*ಪ್ರಶ್ನೆ*

ಸತಿ ಸುತರನ್ನು ಪೊರೆದಿದ್ದೆ
ಪ್ರೀತಿಯ ಧಾರೆಯರೆದಿದ್ದೆ
ಕೇಳಿದೆಲ್ಲವ  ನಾನುನೀಡಿದ್ದೆ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸತಿಯೆಂದು ಅತಿ ಪ್ರೀತಿಮಾಡಿ
ಮಿತಿಯಿರದ ಕಾಳಜಿ ಮಾಡಿ
ಪ್ರತಿನಿಮಿಷ ಜೊತೆಗಿದ್ದ ನನ್ನ ಸತಿಯಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸುತನೆಂದು ಹೊತ್ತು ಸಾಕಿದ್ದೆ
ಅತಿಸವಲತ್ತು ನೀಡಿದ್ದೆ
ಮದುವೆ ಮಾಡಿದ ಮೇಲೆ ಸುತನಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ದೇಹಾರೋಗ್ಯ ನೋಡಲು ಯಾರಿಲ್ಲ
ಮನಕೆ ಸಾಂತ್ವನ ಹೇಳಲು ದಿಕ್ಕಿಲ್ಲ
ಸತಿ ಸುತರ ಪ್ರೀತಿ ಬಯಸಿದ್ದು ತಪ್ಪೇ
ಹೇಳಿ ನಾನೇನು ತಪ್ಪು ಮಾಡಿದ್ದೆ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

17 ಅಕ್ಟೋಬರ್ 2017

ಸಂಗೀತ(ಹನಿಗವನಗಳು)

             *೧*

*ಸಂಗೀತ*

ನಿನಗಾಗಿ ಹಾಡುವೆನು ದಿನವೂ
ಸಂಗೀತ
ಬಾರೆ ನನ್ನ ದಿನವೂ
ಪ್ರೀತಿಸು ಗೀತ

*೨*

*ತಾತ*

ನಿನಗೋಸ್ಕರ ಹಾಡುವೆ ದಿನವೂ
ಸಂಗೀತ|
ನಿನಗೋಸ್ಕರ ಬರೆಯವೆ ದಿನವೂ
ಗೀತ
ನನಗೊಲಿದು ಬಿಡು  ನಾನಾಗುವ ಮುನ್ನ
ತಾತ||

*೩*

*ಪ್ರಪಾತ*

ಸಂಸಾರ ಸರಿ ಇದ್ದರೆ
ಸರಿಗಮ ಸಂಗೀತ|
ಹೆಚ್ಚು ಕಡಿಮೆ ಆದರೆ
ಆಳ ಕಂದಕದ
ಪ್ರಪಾತ||


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು(ರಸ್ತೆ ಗುಂಡಿ)

            *ಹನಿಗವನಗಳು*

*ಗುಂಡಿಗೆ*

ನಮ್ಮ ಬೆಂಗಳೂರು ರಸ್ತೆಯಲ್ಲಿ
ವಾಹನ ಚಲಾಯಿಸುವ ಮೊದಲು
ನನಗಿದ್ದವು ಎರಡು ಗುಂಡಿಗೆ
ಆಮೇಲೆ ಬಿದ್ದೆ ಗುಂಡಿಗೆ

*ಗಂಡಾಗುಂಡಿ*

ಕವಿಗಳು ಹೇಳಿದರು ಸಯೋತನಕ
ಸಂಸಾರದೊಳಗೆ ಗಂಡಾಗುಂಡಿ
ಸಾಯೋದು ಗ್ಯಾರಂಟಿ ಬಿದ್ದರೆ
ಈ ರಸ್ತೆ ಗುಂಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 ಅಕ್ಟೋಬರ್ 2017

ಯಾರನ್ನು ದೂರಲಿ (ಕವನ)

               *೧*
*ಯಾರನ್ನು ದೂರಲಿ*

ಗುರುತು ಸಿಗದಾಗಿವೆ ನನ್ನೂರಿನ ರಸ್ತೆಗಳು
ಎಡೆ ಬಿಡದೆ ಸುರಿದ ಜಡಿ ಮಳೆಗೆ
ಯಾರ ದೂರಲಿ ನಾವು
ತಡೆದು ಸುರಿದ ವರುಣನಿಗೋ
ರಸ್ತೆ ಮಾಡಿದ ಕಂಟ್ರಾಕ್ಟರ್ ಗೋ

ರಸ್ತೆಯಲಿ ಗುಂಡಿ ಇವೆಯೋ
ಗಂಡಿಯಲಿ ರಸ್ತೆಯಿವೆಯೋ
ಅರಿಯದಾಗಿದೆ  ರಸ್ತೆ ಗುಂಡಿಗಳಿಗೆ
ದಿನದಿನವೂ ಬಲಿಗಳಾಗುತಿವೆ
ಯಾರನ್ನು ನಾವು ದೂರಲಿ

ಗುಂಡಿಗೆ ಅದುರುತಿದೆ ಗುಂಡಿ ರಸ್ತೆಗೆ
ಗಂಡಾಂತರದ ಗುಂಡಿಗಳು
ಗುರಿಮುಟ್ಟಲು ತಡೆಯುತಿವೆ
ಗುಂಡಿಗೆ ಇನ್ನೆಷ್ಟು ಬಲಿ ಬೇಕೋ
ಯಾರನ್ನು ನಾವು ದೂರಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*