04 ಅಕ್ಟೋಬರ್ 2021

ವಟವಟವೀರರು


 


ಅಲ್ಪ ವಿದ್ಯೆ ಮಹಾಗರ್ವಿ .

ಲೇಖನ


ಅಲ್ಪ ಜ್ಞಾನವಿದ್ದರೂ

ಗರ್ವಕ್ಕೇನೂ ಕಮ್ಮಿ ಇಲ್ಲ|

ಅರ್ಧ ತುಂಬಿದ ಕೊಡ

ಸದ್ದು ಮಾಡಿತು 

ಬೀದಿಯಲೆಲ್ಲಾ||


ಎಂಬಂತೆ ಇತ್ತೀಚಿನ ದಿನಗಳಲ್ಲಿ ಅರೆ ಬರೆ ಕಲಿತು ಬುದ್ದಿಜೀವಿಗಳೆಂದು ಸ್ವಯಂ ಘೋಷಿಸಿಕೊಂಡ ಕೆಲವರು ಗರ್ವದಿಂದ ಮಾತನಾಡುವ, ಮತ್ತು ಅವರ ನಡವಳಿಕೆಗಳನ್ನು ಗಮನಿಸಿದರೆ ಅಸಹ್ಯ ಉಂಟಾಗುತ್ತದೆ.


ವಿದ್ಯೆ ಮಾನವನನ್ನು ಸುಸಂಸ್ಕೃತನನ್ನಾಗಿ ಮುಕ್ತಿಯ ಕಡೆಗೆ ಕೊಂಡಯ್ಯುವ ಒಂದು ವಾಹಕ 

ಅದಕ್ಕೆ "ಸಾವಿದ್ಯಾಯಾ ವಿಮುಕ್ತಯೆ" ಎಂದು ಹೇಳಿರುವುದು.

ಕೆಲವರು ಅಲ್ಪ ಜ್ಞಾನ ಹೊಂದಿದವರು ಮಹಾಗರ್ವ ಪಡುವವರನ್ನು ನಮ್ಮ ಜೀವನದಲ್ಲಿ ಬಹಳ ಜನರನ್ನು ನೋಡಿರುತ್ತೇವೆ.ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಕೆಲವರು ಮಾತ್ರ ಹೆಚ್ಚು ತಿಳಿದಿದ್ದರೂ ತಮ್ಮ ವಿದ್ಯೆಯನ್ನು ಪ್ರದರ್ಶನ ಮಾಡದೆ ಸಮಯ ಸಂಧರ್ಭ ಬಂದಾಗ ಅದನ್ನು ಪ್ರಕಟ ಮಾಡುವರು. 


ನಾವೂ ಸಹ ನಮ್ಮ ವಿದ್ಯೆಯನ್ನು ಅನವಶ್ಯಕವಾಗಿ ಒಣ ಪ್ರದರ್ಶನ ಮಾಡದೇ ಇರೋಣ. ಕಲಿಕೆಯು ಗರ್ಭದಿಂದ ಗೋರಿಯವರೆಗೆ ನಿರಂತರವಾಗಿರುವಂತೆ ನೋಡಿಕೊಳ್ಳೋಣ.

ತನ್ಮೂಲಕ ‌ನಿಜವಾದ ವಿದ್ಯಾವಂತರಾಗೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

9900925529


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ