09 ಜುಲೈ 2018

ಸಾಮಾಜಿಕ ಕಳಕಳಿ (ಲೇಖನ)

               *ಸಾಮಾಜಿಕ ಕಳಕಳಿ*

ನಮ್ಮ ಮೆಟ್ರೋಗೆ ಇನ್ಪೋಸಿಸ್ ಫೌಂಡೇಷನ್200 ಕೋಟಿ ರೂಗಳ ದೇಣಿಗೆ ನೀಡಿರುವುದು ಶ್ಲಾಘನೀಯ.ಅದರಲ್ಲೂ ಸುಧಾ ಮೂರ್ತಿಯವರ ಸಾಮಾಜಿಕ ಕಳಕಳಿ ಅನುಕರಣೀಯ   ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಲು ಈ‌ರೀತಿಯ ಸಹಾಯ ಮಾಡುವುದು ವಾಡಿಕೆಯಲ್ಲಿದ್ದರೂ ಕರ್ನಾಟಕ ಸರ್ಕಾರ ಕ್ಕೆ ಇಷ್ಟು ಮೊತ್ತದ ಚೆಕ್ ಒಮ್ಮೆಲೆ ನೀಡಿರುವುದು ಇದೇ ಮೊದಲು .ಕೆರೆಯ ನೀರನು‌ ಕೆರೆಗೆ  ಚೆಲ್ಲಿ ಎಂದು ದಾಸವರೇಣ್ಯರು ಹೇಳಿದಂತೆ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಲಾಭಾಂಶ ದಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಮೀಸಲಿಟ್ಟರೆ  ಸರ್ವಜನರ ಕಲ್ಯಾಣ ಆಗುವುದು.ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಮತ್ತೋರ್ವ ಉದ್ಯಮಿ ಅಜೀಂ ಪ್ರೇಮ್ ಜೀ ರವರು  ಸಹ ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಪಂಚದ ನಂಬರ್ ಒನ್ ಶ್ರೀಮಂತ ರಾದ ವಾರ್ನ್ ಬಫೆಟ್ ರವರು ತಮ್ಮ ಆಸ್ತಿ ಯ ಅರ್ಧ ಸಂಪತ್ತನ್ನು ಸಮಾಜಕ್ಕೆ ದಾನ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.
ಇದೇ ರೀತಿ ಉಳ್ಳವರು ಇಲ್ಲದವರ ಒಳಿತಿಗೆ ಕೈ ಜೋಡಿಸಿದರೆ ಪ್ರಪಂಚದಲ್ಲಿ ಸರ್ವಜನ ಸಮಾನವಾಗಿ ಜೀವಿಸುವ ಸಂತರ ಕನಸು ನನಸಾದೀತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ