This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ಫೆಬ್ರವರಿ 2019
15 ಫೆಬ್ರವರಿ 2019
ಜೈ ಭಾರತಾಂಭೆ ( ಹುತಾತ್ಮ ಯೋಧರಿಗೆ ನಮನ)
*ಜೈ ಭಾರತಾಂಬೆ*
ನರಿಬುದ್ದಿಯ ಉಗ್ರರೇ
ನಾಚಿಕೆಯಿಲ್ಲದ ನೀವು
ಮನುಷ್ಯರೇ?
ಎದುರು ನಿಲ್ಲಲು
ಅದುರುವ ನೀವು
ಬೆನ್ನಿಗೆ ಚೂರಿ ಹಾಕುವಿರಾ?
ಭಾರತೀಯರ ಕಿಚ್ಚು
ಜ್ವಾಲೆಯಾಗಿ ಉರಿದರೆ
ನೀವು ಉಳಿಯುವಿರಾ?
ಸಮರದಲಿ ಸೋತು
ಸುಣ್ಣವಾದ ಪಾಪಿಸ್ತಾನದ
ಪಾಪಿಗಳೇ, ರಕ್ತಪಿಪಾಸುಗಳೇ
ನಮ್ಮನು ಕೆಣಕಿದ್ದೀರಿ
ಮುಂದೆ ವಿಶ್ವ ಭೂಪಟದಲಿ
ನಿಮ್ಮ ದೇಶವನ್ನು ಹುಡುಕುತ್ತೀರಿ
ನಮ್ಮ ಯೋಧರ ಪ್ರಾಣಹರಣಮಾಡಿದ
ನಿಮ್ಮನು ಸುಮ್ಮನೆ ಬಿಡೆವು
ಶಾಂತವಾಗಿರುವುದು
ನಮ್ಮ ದೌರ್ಬಲ್ಯವಲ್ಲ
ಹುಲಿಯನ್ನು ಕೆಣಕಿದ
ನಿಮಗೆ ಉಳಿಗಾಲವಿಲ್ಲ
ದಿಟ್ಡತನದಿ ನಿಮ್ಮ ಹುಟ್ಟಡಗಿಸಿ
ಘರ್ಜಿಸುವೆವು ಜೈ ಭಾರತಾಂಬೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ನರಿಬುದ್ದಿಯ ಉಗ್ರರೇ
ನಾಚಿಕೆಯಿಲ್ಲದ ನೀವು
ಮನುಷ್ಯರೇ?
ಎದುರು ನಿಲ್ಲಲು
ಅದುರುವ ನೀವು
ಬೆನ್ನಿಗೆ ಚೂರಿ ಹಾಕುವಿರಾ?
ಭಾರತೀಯರ ಕಿಚ್ಚು
ಜ್ವಾಲೆಯಾಗಿ ಉರಿದರೆ
ನೀವು ಉಳಿಯುವಿರಾ?
ಸಮರದಲಿ ಸೋತು
ಸುಣ್ಣವಾದ ಪಾಪಿಸ್ತಾನದ
ಪಾಪಿಗಳೇ, ರಕ್ತಪಿಪಾಸುಗಳೇ
ನಮ್ಮನು ಕೆಣಕಿದ್ದೀರಿ
ಮುಂದೆ ವಿಶ್ವ ಭೂಪಟದಲಿ
ನಿಮ್ಮ ದೇಶವನ್ನು ಹುಡುಕುತ್ತೀರಿ
ನಮ್ಮ ಯೋಧರ ಪ್ರಾಣಹರಣಮಾಡಿದ
ನಿಮ್ಮನು ಸುಮ್ಮನೆ ಬಿಡೆವು
ಶಾಂತವಾಗಿರುವುದು
ನಮ್ಮ ದೌರ್ಬಲ್ಯವಲ್ಲ
ಹುಲಿಯನ್ನು ಕೆಣಕಿದ
ನಿಮಗೆ ಉಳಿಗಾಲವಿಲ್ಲ
ದಿಟ್ಡತನದಿ ನಿಮ್ಮ ಹುಟ್ಟಡಗಿಸಿ
ಘರ್ಜಿಸುವೆವು ಜೈ ಭಾರತಾಂಬೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
14 ಫೆಬ್ರವರಿ 2019
ಗಜ್ಹಲ್ ೫೨ (ನೆಮ್ಮದಿ)
*ಗಜ್ಹಲ್*
ಹೆಣ್ಣು ಹೊನ್ನು ಮಣ್ಣಿದೆ ಸಿಗಬಹುದೆ ನೆಮ್ಮದಿ
ಮಣ್ಣಾಗುವ ಮುನ್ನವಾದರೂ ಲಭಿಸುವುದೆ ನೆಮ್ಮದಿ
ಏಸು ದಿನ ನೀರಲಿದ್ದರೆ ಮೆದುವಾಗುವುದೆ ಕಲ್ಲು
ನದಿಗಳಲಿ ತೀರ್ಥ ಸ್ನಾನ ಮಾಡಿದರೆ ದೊರೆವುದೆ ನೆಮ್ಮದಿ
ಮನಃಪೂರ್ವಕವಾಗಿ ದಾನ ಧರ್ಮ ಮಾಡಲಿಲ್ಲ
ತೋರಿಕೆಯ ಸಹಾಯಹಸ್ತ ಚಾಚಿದರೆ ಸಿಗುವುದೆ ನೆಮ್ಮದಿ
ಮಾಡುವುದು ಅನಾಚಾರ ಮನೆಮುಂದೆ ವೃಂದಾವನ
ಒಳಗೊಂದು ಹೊರಗೊಂದು ಇದ್ದರೆ ಕಾಣಬಹುದೆ ನೆಮ್ಮದಿ
ಸಿಹಿಯೇ ಬೇಕು ಜೀವನದಿ ಸಿಹಿಜೀವಿಗೆ
ಕಹಿಯ ದಾರಿ ಸವೆಸದೇ ಪಡೆಯಬಹುದೆ ನೆಮ್ಮದಿ
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಹೆಣ್ಣು ಹೊನ್ನು ಮಣ್ಣಿದೆ ಸಿಗಬಹುದೆ ನೆಮ್ಮದಿ
ಮಣ್ಣಾಗುವ ಮುನ್ನವಾದರೂ ಲಭಿಸುವುದೆ ನೆಮ್ಮದಿ
ಏಸು ದಿನ ನೀರಲಿದ್ದರೆ ಮೆದುವಾಗುವುದೆ ಕಲ್ಲು
ನದಿಗಳಲಿ ತೀರ್ಥ ಸ್ನಾನ ಮಾಡಿದರೆ ದೊರೆವುದೆ ನೆಮ್ಮದಿ
ಮನಃಪೂರ್ವಕವಾಗಿ ದಾನ ಧರ್ಮ ಮಾಡಲಿಲ್ಲ
ತೋರಿಕೆಯ ಸಹಾಯಹಸ್ತ ಚಾಚಿದರೆ ಸಿಗುವುದೆ ನೆಮ್ಮದಿ
ಮಾಡುವುದು ಅನಾಚಾರ ಮನೆಮುಂದೆ ವೃಂದಾವನ
ಒಳಗೊಂದು ಹೊರಗೊಂದು ಇದ್ದರೆ ಕಾಣಬಹುದೆ ನೆಮ್ಮದಿ
ಸಿಹಿಯೇ ಬೇಕು ಜೀವನದಿ ಸಿಹಿಜೀವಿಗೆ
ಕಹಿಯ ದಾರಿ ಸವೆಸದೇ ಪಡೆಯಬಹುದೆ ನೆಮ್ಮದಿ
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
31 ಜನವರಿ 2019
ದೇವಾಲಯಗಳಲ್ಲಿ ನಾವು ಮಾಡುವ ಅಪರಾಧಗಳು (ಸಂಗ್ರಹ ಲೇಖನ)
" *ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು*..
೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.
೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.
೩.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.
೪.ಭಗವಂತನ ಮಂದಿರಕ್ಕೆ ಸಿಗರೇಟು,ಬೀಡಾ,ಸರಾಯಿ,ಮಾಂಸ ಸೇವಿಸಿ ಪ್ರವೇಶಿಸುವದು.
೫.ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್,ಚಪ್ಪಲಿ,ಕೈ ಚೀಲ ಧರಿಸಿ ಕೊಂಡು ಹೋಗುವುದು.
೬.ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
೭.ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.
೮.ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.
೯.ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.
೧೦.ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
೧೧.ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.
೧೨.ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..
೧೩.ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.
೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.
೧೫. ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.
೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..
೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..
೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..
೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..
೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..
೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..
೨೨.ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..
೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..
೨೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..
೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..
೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..
೨೭. ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..
೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.
೨೯. ಯಾವುದೇ ದೇವರನ್ನು ನಿಂದಿಸುವುದು..
೩೦. ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..
೩೧. ಗುರುಗಳ ಸ್ಮರಣೆ ಮಾಡದೇ ಇರುವುದು..
೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..
೩೩.ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.
೩೪.ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.
೩೫.ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ,ಬಿಕ್ಷುಕರಿಗೆ ನೀಡುವುದು.
೩೬.ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು.
೩೭.ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.
೩೮.ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.
೩೯.ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.
೪೦.ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.
೪೧.ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.
೪೨.ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು ಆಘ್ರಾಣಿಸುವುದು(ಮೂಸಿ ನೋಡುವುದು).
೪೩.ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು.ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.
೪೪.ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.
೪೫.ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.
****ಇತ್ಯಾದಿ
ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..
ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ..
ಸಂಗ್ರಹ:
ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು
೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.
೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.
೩.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.
೪.ಭಗವಂತನ ಮಂದಿರಕ್ಕೆ ಸಿಗರೇಟು,ಬೀಡಾ,ಸರಾಯಿ,ಮಾಂಸ ಸೇವಿಸಿ ಪ್ರವೇಶಿಸುವದು.
೫.ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್,ಚಪ್ಪಲಿ,ಕೈ ಚೀಲ ಧರಿಸಿ ಕೊಂಡು ಹೋಗುವುದು.
೬.ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
೭.ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.
೮.ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.
೯.ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.
೧೦.ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
೧೧.ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.
೧೨.ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..
೧೩.ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.
೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.
೧೫. ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.
೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..
೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..
೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..
೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..
೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..
೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..
೨೨.ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..
೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..
೨೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..
೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..
೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..
೨೭. ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..
೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.
೨೯. ಯಾವುದೇ ದೇವರನ್ನು ನಿಂದಿಸುವುದು..
೩೦. ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..
೩೧. ಗುರುಗಳ ಸ್ಮರಣೆ ಮಾಡದೇ ಇರುವುದು..
೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..
೩೩.ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.
೩೪.ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.
೩೫.ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ,ಬಿಕ್ಷುಕರಿಗೆ ನೀಡುವುದು.
೩೬.ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು.
೩೭.ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.
೩೮.ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.
೩೯.ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.
೪೦.ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.
೪೧.ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.
೪೨.ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು ಆಘ್ರಾಣಿಸುವುದು(ಮೂಸಿ ನೋಡುವುದು).
೪೩.ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು.ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.
೪೪.ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.
೪೫.ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.
****ಇತ್ಯಾದಿ
ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..
ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ..
ಸಂಗ್ರಹ:
ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು
30 ಜನವರಿ 2019
ವರಕವಿ ( ಕವನ)
*ವರಕವಿ*
ನೀಡಿದಿರಿ ನಮಗೆ ಸಾಹಿತ್ಯದ ಸವಿ
ಮರೆಯಲಿ ಹೇಗೆ ನಿನ್ನ ವರಕವಿ
ರಸವೆ ಜನನ
ವಿರಸವೇ ಮರಣ
ಸಮರಸವೆ ಜೀವನ
ಎಂದ ತತ್ವಜ್ಞಾನಿಯ
ಮರೆಯಲಿ ಹೇಗೆ ?
ಸಾದನಕೇರಿಯಲಿ ನಿಂತ
ಸಾಧಕರಿಗೆ ಸ್ಫೂರ್ತಿಯಾದ
ಜೀವನದಲಿ ಬೆಂದರೂ
ಸಾಹಿತ್ಯದ ನಳಪಾಕ ಬಡಿಸಿದ
ಬೇಂದ್ರೆ ಅಜ್ಜನ
ಮರೆಯಲಿ ಹೇಗೆ?
ಕುಣಿಯೋಣ ಬಾರಾ ಎಂದು
ಮಕ್ಕಳ ಕುಣಿಸಿದ
ಪಾತರಗಿತ್ತಿ ಅಂದವ ತೋರಿದ
ಇಳಿದುಬಾ ತಾಯಿ ಎಂದ
ಅಂಬಿಕಾತನಯದತ್ತನ
ಮರೆಯಲಿ ಹೇಗೆ?
ಕನ್ನಡಕೆ ಜ್ಞಾನ ಪೀಠ ಗರಿಯನಿತ್ತ
ಶ್ರಾವಣದ ಸೊಬಗ ಬಣ್ಣಿಸಿದ
ನಾಕುತಂತಿಯ ಮೀಟಿ
ನಾದಲೀಲೆಯ ತೋರಿದ
ವರಕವಿಯೇ ನಿನ್ನ
ಮರೆಯಲಿ ಹೇಗೆ ?
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ನೀಡಿದಿರಿ ನಮಗೆ ಸಾಹಿತ್ಯದ ಸವಿ
ಮರೆಯಲಿ ಹೇಗೆ ನಿನ್ನ ವರಕವಿ
ರಸವೆ ಜನನ
ವಿರಸವೇ ಮರಣ
ಸಮರಸವೆ ಜೀವನ
ಎಂದ ತತ್ವಜ್ಞಾನಿಯ
ಮರೆಯಲಿ ಹೇಗೆ ?
ಸಾದನಕೇರಿಯಲಿ ನಿಂತ
ಸಾಧಕರಿಗೆ ಸ್ಫೂರ್ತಿಯಾದ
ಜೀವನದಲಿ ಬೆಂದರೂ
ಸಾಹಿತ್ಯದ ನಳಪಾಕ ಬಡಿಸಿದ
ಬೇಂದ್ರೆ ಅಜ್ಜನ
ಮರೆಯಲಿ ಹೇಗೆ?
ಕುಣಿಯೋಣ ಬಾರಾ ಎಂದು
ಮಕ್ಕಳ ಕುಣಿಸಿದ
ಪಾತರಗಿತ್ತಿ ಅಂದವ ತೋರಿದ
ಇಳಿದುಬಾ ತಾಯಿ ಎಂದ
ಅಂಬಿಕಾತನಯದತ್ತನ
ಮರೆಯಲಿ ಹೇಗೆ?
ಕನ್ನಡಕೆ ಜ್ಞಾನ ಪೀಠ ಗರಿಯನಿತ್ತ
ಶ್ರಾವಣದ ಸೊಬಗ ಬಣ್ಣಿಸಿದ
ನಾಕುತಂತಿಯ ಮೀಟಿ
ನಾದಲೀಲೆಯ ತೋರಿದ
ವರಕವಿಯೇ ನಿನ್ನ
ಮರೆಯಲಿ ಹೇಗೆ ?
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)