03 ಅಕ್ಟೋಬರ್ 2017

ಬಂದು ನೋಡು (ಕವನ)

             ೧
       *ಬಂದು ನೋಡು*

ಓ ಬಾಪು ನೀ ಬಂದು ನೋಡು
ಸತ್ಯ ಧರ್ಮ ಅಹಿಂಸೆಯ ಪಾಡು

ಸತ್ಯಕ್ಕೆ ಇಂದು ಬೆಲೆ ಇಲ್ಲ
ಅಸತ್ಯವೆ ನೋಡು ಎಲ್ಲೆಲ್ಲೂ
ಸತ್ಯವನು  ಮಿಥ್ಯೆ ಮಾಡಿ
ಸತ್ಯ ಹರಿಶ್ಚಂದ್ರರೆನುತಿಹರು

ಧರ್ಮವು ಓಟಿನ ಸರಕಾಗಿ
ಅಧರ್ಮದ  ಕೈ ಮೇಲಾಗಿ
ಕಚ್ಚಾಟವಾಡುವರು ತಮ್ಮೋಳಗೆ
ಸ್ವಚ್ಛಮನಸಿನವರೆಂದು ಉಲಿವರು

ಅಹಿಂಸೆಯ ಅರ್ಥ ಕಳೆದುಕೊಂಡಿದೆ
ಹಿಂಸೆಯು ಎಲ್ಲೆಡೆ  ರಾರಾಜಿಸುತಿದೆ
ಪರಸ್ಪರ   ಹಿಂಸಾಚಾರದಲ್ಲಿ‌ ತೊಡಗಿ
ಅಹಿಂಸಾವಾದಿಗಳೆಂದು ಬೀಗುವರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಅಕ್ಟೋಬರ್ 2017

ತಲೆ ತಿರುಗು (ನ್ಯಾನೋ ಕಥೆ)

       ತಲೆ ತಿರುಗು
ನ್ಯಾನೋ ಕಥೆ

ಯು.ಕೆ.ಜಿ ಬಾಲಕಿಗೆ ಗಾಂದೀಜಿಯವರ ಕುರಿತು ಪ್ರಾಜೆಕ್ಟ್ ಮಾಡಲು ಶಿಕ್ಷಕರು ಹೇಳಿದ್ದರು .ಆ ಬಾಲಕಿ ಮನೆಗೆ ಬಂದು ತನ್ನ ಅಪ್ಪನ ಜೇಬಲ್ಲಿದ್ದ ೨೦೦೦ ನೋಟಿನಲ್ಲಿದ್ದ ಗಾಂಧೀಜಿಯವರ ಚಿತ್ರ ಕತ್ತರಿಸಿ .ಅಂಟಿಸಿ  ಪ್ರಾಜೆಕ್ಟ್  ಮುಗಿಸಿದಳು .ಮಗಳ
ಪ್ರಾಜೆಕ್ಟ್ ನೋಡಿ ಅಪ್ಪ ತಲೆ ತಿರುಗಿ ಬಿದ್ದರು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

ಕರಿಮಣಿ ತಾ (ಕವನ)

             *ಕರಿ ಮಣಿ ತಾ*

ಬರೆಯುವೆ ನಲ್ಲನೆ ನಿನಗಾಗಿ
ಬರುವೆಯಾ  ನಿನ್ನೊಲವಿಗಾಗಿ

ಹಾಳೆಗಳೆ ಖಾಲಿ ನಿನಗಾಗಿ ಬರೆದು
ನಾಳೆಗಳ ಕನಸಾಗಲಿಲ್ಲ ಬರಿದು
ನೀನಿತ್ತ ಸವಿ ಮುತ್ತ ಮರೆತಿಲ್ಲ
ನಿನ್ನಾಗಮನದ ನಿರೀಕ್ಷೆ ಬಿಟ್ಟಿಲ್ಲ

ನನ್ನ ಮದುವೆ ತಯಾರಿ ಮನೆಯಲ್ಲಿ
ಅನ್ಯ ಹುಡುಗ ಬೇಡ ನನ ಮನದಲ್ಲಿ
ನಿನ್ನನೇ ವರಿಸುವೆನು ಈ ಜನುಮದಲಿ
ಇನ್ನೂ ಭರವಸೆ  ನೀನಿತ್ತ  ಮಾತಿನಲಿ

ಬರುವೆಯೆಂದಿದ್ದೆ ಕಳೆದ ವಾರ
ಬರದೇ ಹೋದೆ ಇದು ನನಗೆ ಬರ
ಸರ ಕೊಂಡು ತಂದಿದ್ದೆ ಅಂದು
ಕರಿ ಮಣಿ ತಾ ಬೇಗ ಬಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಅಕ್ಟೋಬರ್ 2017

ಕಾಯಿ(ಹನಿಗವನ)

         
  *ನೋವು*

ನೋಡುತಾ ಮಾವು
ನಾನು ಮರೆವೆ
ನನ್ನ ಇಳಿ
ಜೀವನದ ನೋವು.

*ಕಾಯಿ*

ಇವು ಮಾವಿನ ಕಾಯಿ
ನನ್ನಂತೆಯೇ ನಿನಗೂ
ವಯಸ್ಸಾಗುವುದು
ಸ್ವಲ್ಪ ದಿನ ಕಾಯಿ .

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು



ದೀನದಯಾಳು (ಕವನ)

                *೧*
*ದೀನದಯಾಳು*

ಸ್ವಾಮಿಯೇ ದೇವನೆ ಓ ತಿರಮಲನೆ
ಭಕ್ತರ ಕಾಯುವ ಕರುಣಾಕಾರನೆ

ಏಳು ಬೆಟ್ಟಗಳೊಡೆಯ ನಮ್ಮನರಸು
ಭವದ ಬಂಧನದಿಂದ ಬಿಡಿಸು
ಸವಿ ಮಾತನಾಡಲು ಕಲಿಸು
ಎಲ್ಲರೊಳಗೊಂದಾಗಿ ಬೆರಸು /

ಬಾಲಜಿ ಗೋವಿಂದ ನಾಮ ಪಡೆದವನೆ
ಭಕ್ತರಕ್ಷಕ ದೀನದಯಾಳು ಎನಿಸಿದವನೆ
ಪ್ರಾರ್ಥನೆಗೆ ಮೆಚ್ಚಿ ಓಗೊಡುವವನೆ
 ಕಾಪಾಡು ನಮ್ಮನೆಲ್ಲರ  ಸುಮ್ಮನೆ /

ವೆಂಕಟರಮಣನು  ಸಂಕಟಹರಣನು
ಸಂಕಷ್ಟ ಹರಿಸಿ ಕಾಪಾಡುವನು
ಅಲಂಕಾರ ಪ್ರಿಯ ಇವನು
ಪದ್ಮಾವತಿಯ ಪ್ರಿಯರಮಣನು /

ವರಕೊಡು ನಾಡು ಸುಭಿಕ್ಷವಾಗಲಿ
 ಸಕಲ   ಚರಾಚರಗಳಿಗೆ ಒಳಿತಾಗಲಿ
ಕಲಿಯುಗದ ಕಾಮಧೇನು ನೀನು
ವರಕೊಟ್ಟು ಹರಸು ನಮ್ಮೆಲ್ಲರನು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*