02 March 2018

ಫಲಿತಾಂಶ (ಕಿರುಗಥೆ)

"ಕಿರುಗಥೆ*

*ಫಲಿತಾಂಶ*

ತನ್ನ ಅಪ್ಪ ಹಾವು ಕಡಿದು ಕಾಲವಾದ ಮೇಲೆ ಬಾಲಜಿ ಮತ್ತು ಅಣ್ಣ ಇಂದ್ರೇಶ್ ಅಮ್ಮನೊಂದಿಗೆ ಮಾವನ ಮನೆಯಲ್ಲಿ ಇದ್ದರು .
ಅಣ್ಣಾ ಇಂದ್ರೇಶ್ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ಪಾಸಾದರೂ  ಪಿ.ಯು .ಸಿ ಯಲ್ಲಿ ಪೇಲಾಗಿ ಮಾವನ ಮನೆಯಲ್ಲಿ ಕೃಷಿ ಕೆಲಸ ಮಾಡುವುದು ನೋಡಿ ನಾಳೆ ನನ್ನ ಪಿ.ಯು ಸಿ   ಫಲಿತಾಂಶ ನಾನು ಫೇಲಾದರೆ? ಮುಂತಾದ ಯೋಚನೆಯಲ್ಲಿ ಬಾಲಜಿಗೆ ರಾತ್ರಿ ನಿದ್ದೆಯೇ  ಬರಲಿಲ್ಲ.
"ಯಾರು ಆ ಕೃಷ್ಣಪ್ಪನ ಅಳಿಯ ಇಡೀ ಕಾಲೇಜಿಗೆ ಪಸ್ಟ್ ಬಂದನಾ ?" ಎಂದು ಊರ ಜನರು ಅರಳಿ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದರು ."ಓ ಆ ಹುಡುಗ ಒಂದು ದಿನನೂ ಈ ಕಡೆ ಕಾಣಿಸುತ್ತಿರಲಿಲ್ಲ ಚೆನ್ನಾಗಿ ಮಾರ್ಕ್ಸ್ ತೆಗೆದವ್ನಲ್ಲ" ಎಂದು ರಾಮಣ್ಣ ಹೇಳುವ ಸಮಯಕ್ಕೆ ಬಾಲಾಜಿ ಆ ಕಟ್ಟೆಯ ಮುಂದೆ ಬಂದ. ಅಲ್ಲಿನ ಜನ "ಇವನೆ ಅ ಹುಡುಗ  ಚೆನ್ನಾಗಿ ಓದಿದಿಯಾ ಮಗ ಈಗೆ ಓದು ಮುಂದೆ ನಿನಗೆ ಯಾವುದಾದರೂ ಗವರ್ನಮೆಂಟ್ ಕೆಲ್ಸ ಸಿಗುತ್ತೆ ನನ್ನ ಮಗ ನೂ ಅದಾನೆ ಕಳ್ ನನ್ ಮಗ ನಾಲಕ್ ಸಬ್ಜೆಕ್ಟ ಪೇಲ್ ಆಗವ್ನೆ" ಎಂದರು  .ತಿಮ್ಮಣ್ಣ ಮುಂದುವರಿದು "ಈ ಹುಡುಗುಂಗೆ ಅಪ್ಪ ಇಲ್ಲ ಅವರ ಮಾವ ಕೃಷ್ಣಪ್ಪ ಇಲ್ಲೆ ಓದಿಸತವ್ನೆ ಈ ಹುಡುಗನೂ ಚೆನ್ನಾಗಿ ಓದುತಾನೆ" ಎಂದರು .ಎಲ್ಲೋ ಬಾಲಜಿಗ ಸ್ವೀಟ್? ಎಂದು ಕೇಳುವ ಸಮಯಕ್ಕೆ ಕೃಷ್ಣಪ್ಪ ಕೈಯಲ್ಲಿ ಮೈಸೂರ್ ಪಾಕ್ ಬಾಕ್ಸ್ ಹಿಡಿದು ಅಲ್ಲಿಗೇ ಬಂದರು. ಊರವರಿಗೆ ಸಿಹಿ ಕೊಡಲು ಮುಂದಾದ ಕೃಷ್ಣಪ್ಪ ಗೆ "ಮೊದಲು ನಿನ್ನ ಅಳಿಯನಿಗೆ ಕೊಡು ಸ್ವೀಟ್ ನಾವೇನು ದಬ್ಬಾಕಿದಿವಿ" ಎಂದರು ಬಾಲಾಜಿಗೆ ಅವನ ಮಾವ ಸಿಹಿ‌ತಿನ್ನಿಸಿದಾಗ ಬಾಲಾಜಿಯ ಕಣ್ಣುಗಳಲ್ಲಿ ಗೊತ್ತಿಲ್ಲದೇ ನಾಲ್ಕು ಹನಿಗಳು ಹೊರಬಂದವು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: