31 ಅಕ್ಟೋಬರ್ 2021

ಅಪ್ಪುಗೆ ನಾಲ್ಕು ಹನಿ ನಮನ


 



*ಅಪ್ಪು ಗೆ ನಾಲ್ಕು ಹನಿ ನಮನ*




ನಡೆನುಡಿಯಲಿ 

ಯಾವಾಗಲೂ 

ವಿನೀತ|

ಅವರೇ ಕನ್ನಡ

ನಾಡಿನ ಹೆಮ್ಮೆಯ

ಪುನೀತ||




ಇವರ ತಂದೆ 

ಮೇರು ನಟ 

ರಾಜಕುಮಾರ|

ಇವರೇನು 

ಕಡಿಮೆಯಲ್ಲ

ಗುಣದಲಿ ಬಂಗಾರ||



ಬೌತಿಕವಾಗಿ ನಮ್ಮನ್ನು

ಅಗಲಿದ್ದಾರೆ

ದೊಡ್ಮನೆ ಹುಡುಗ|

ಅವರ ಚಿತ್ರಗಳು 

ಅವರ ಸಮಾಜ ಸೇವೆಯ

ಸದಾ ಸ್ಮರಿಸುವುದು ಜಗ||



ಮೇಲು ಕೀಳು

ಬಡವ ಬಲ್ಲಿದ

ಭೇದವಿರಲಿಲ್ಲ

ನಮ್ಮ ಅಪ್ಪುಗೆ|

ಕಷ್ಟದಲ್ಲಿರುವವರಿಗೆ

ನೊಂದವರಿಗೆ ನೀಡುತ್ತಿದ್ದರು

ಸಾಂತ್ವನದ ಬಿಸಿ ಅಪ್ಪುಗೆ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ನಾಡಿಗಾಗಿ ನಾಡಿ ಮಿಡಿಯಲಿ

 


    

*ನಾಡಿಗಾಗಿ ಒಟ್ಟಾಗೋಣ* 


ಕನ್ನಡದ ಕವಿಗಳು, ಮುತ್ಸದ್ದಿಗಳ ಅವಿರತ ಹೋರಾಟದ    ಫಲವಾಗಿ ನಮ್ಮ  ಕರುನಾಡು ಉದಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದ ಫಲವಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ದುರದೃಷ್ಟಕರ. ನಮ್ಮ ನಾಡಿನ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ  ಉತ್ಕೃಷ್ಟವಾದ ಭಾಷೆ ಮತ್ತು ಸಾಹಿತ್ಯವನ್ನು  ಗಮನಿಸಿ ಇತ್ತೀಚೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ.ಕನ್ನಡಿಗರಾದ ನಾವು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ.ಕೀಳರಿಮೆ ಬಿಟ್ಟು ನಮ್ಮ ಭಾಷೆಯ ಮಹತ್ವದ ಬಗ್ಗೆ ಇತರರಿಗೆ ಮನದಟ್ಟು ಮಾಡಿಕೊಡಬೇಕಿದೆ.ಗಡಿನಾಡಿನಲ್ಲಿ ಪ್ರಾಬಲ್ಯ ಮೆರೆಯಲು  ಕಾಲುಕೆರೆದುಕೊಂಡು ಜಗಳ ಕಾಯುವ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.ನೆಲ ಜಲದ ವಿಷಯಗಳಲ್ಲಿ ನಿರಭಿಮಾನ ತೊರೆದು ಒಗ್ಗಟ್ಟು ಪ್ರದರ್ಶನ ಮಾಡಿ ಕನ್ನಡಿಗರು ಎದ್ದರೆ ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ.  ನಮ್ಮ ನಾಡಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯುವ ಎಕೈಕ ಉದ್ದೇಶ ನಮ್ಮದಾಗಿ ಒಗ್ಗಟ್ಟನ್ನು ಪ್ರದರ್ಶಿಸಿದರೆ ಯಾವ ದುಷ್ಟ ಶಕ್ತಿಗಳು ಕನ್ನಡಮ್ಮನ ಕೂದಲು ಕೊಂಕಿಸಲು ಸಾದ್ಯವಿಲ್ಲ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು