04 ಜುಲೈ 2021

ತರಲೆ

 *ತರಲೆ*


ಕಛೇರಿಯಿಂದ

ಮನೆಗೆ ಬರುವಾಗ

ನನ್ನವಳ ಕೇಳಿದೆ

ತರಲೆ ಬದನೆ

ಟೊಮ್ಯಾಟೊ

ತರಲೆ ಮಾಡುತ

ಅವಳಂದಳು

ಬೇಡ ಬನ್ನಿ 

ಇವೆಯಲ್ಲ ಸ್ವಿಗ್ಗಿ

ಜೊಮ್ಯಾಟೊ||



#ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

 

ಹೊಗೆಸೊಪ್ಪು .ಹನಿ


 ನನ್ನಜ್ಜಿಗೆ ಕಲಿಸಲು

ಹೋದೆ ಪೇಸ್ ಬುಕ್

ವಾಟ್ಸಪ್|

ಪೋನ್ ಎಸೆದು

ಅಂದುಬಿಟ್ಟರು

ಇದೇನೂ ಬೇಡ

ಮೊದಲು ಕೊಡು

ಹೊಗೆಸೊಪ್ಪು||



#ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* 4/7/21

 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

03 ಜುಲೈ 2021

ಐದು ಹಾಯ್ಕುಗಳು .


 


ಹಾಯ್ಕುಗಳು

*೧*

ಶಾಲೆಯೇ ಗುಡಿ
ಮರಳಿ ಬಾ ಕಂದನೆ
ಜ್ಞಾನವ ಪಡೆ.

*೨*

ಬದುಕಬೇಕೆ?
ಮರಳಬೇಕಾಗಿದೆ
ನಿಸರ್ಗದತ್ತ

*೩*

ಅಯ್ಯೋ ಮರುಳೆ
ಪ್ರಕೃತಿಯತ್ತ ನೋಡು
ಎಲ್ಲವೂ ಇದೆ.

*೪*

ನೋವೇಕೆ ಬೇಕು
ನೀಡಿದ ಹೃದಯವ
ಮರಳಿ ನೀಡು

*೫*

ನೆಮ್ಮದಿಗಾಗಿ
ಮರಳೋಣ ಬಾಲ್ಯಕೆ
ಸವಿಕಾಲಕೆ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

ಅರಿವಾಗದು .ಹನಿ

 



ಖಂಡಿತವಾಗಿಯೂ 

ನಮಗೆ ತಿಳಿಯುವುದು

 ಯಾವಾಗ 

ಮುಗಿಯುವುದು

ನಮ್ಮ ಹಣ| 

ನಮಗಾರಿಗೂ 

ಅರಿವಾಗದು

ಎಂದಿಗೆ ನಾವು

ಆಗುವುವೆವು ಹೆಣ| |


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

 ತುಮಕೂರು