16 ಜೂನ್ 2021

ನಿರ್ಲಕ್ಷ್ಯ ಬೇಡ .ಹನಿ


 #ಜನರ ನಿರ್ಲಕ್ಷ್ಯ

 

ಅನವಶ್ಯಕವಾಗಿ 

ಗುಂಪು ಸೇರದಿರಿ

 ಓ ನನ್ನ ಬಾಂಧವರೆ|

ಮೈಮರೆತು ವರ್ತಿಸಿದರೆ

 ತಪ್ಪಿದ್ದಲ್ಲ ತೊಂದರೆ||


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ಸಿ ಜಿ ಹಳ್ಳಿ

 

 

ಗಜಲ್ ಪ್ರತಿನಿಧಿ ೧೫/೬/೨೧


 

ಸಿಂಹ ಧ್ವನಿ ಲೇಖನ ೧೫/೬/೨೧


 

15 ಜೂನ್ 2021

ಮಾದರಿಯಾಗೋಣ .ಲೇಖನ


 *ಮಾದರಿಯಾಗೋಣ"

ನಾನು ಇದುವರೆಗೆ ವೃದ್ದಾಶ್ರಮಕ್ಕೆ ಭೇಟಿ ನೀಡಿಲ್ಲ
ಆದರೆ ಆ ಪದ ಕೇಳಿಯೇ ಮನದಲ್ಲಿ ಬೇಸರ ಮೂಡುವುದು, ಮಾನವನು ಏಕೆ ಹೀಗೆ ಸ್ವಾರ್ಥಿಯಾದ? ಎಂದು ಪ್ರಶ್ನೆ ಏಳುವುದು ,

ಹೆತ್ತು, ಹೊತ್ತು ಸಾಕಿ ಸಲಹಿದ  ತಂದೆ ತಾಯಿಗಳು ಅವರ ಸಂಧ್ಯಾ ಕಾಲದಲ್ಲಿ ಮಕ್ಕಳಿಗೆ ಬೇಡವಾಗುವುದು ವಿಪರ್ಯಾಸ,

ಮೌಲ್ಯಗಳ ಅಧಃಪತನ, ಆಧುನಿಕ ಸಮಾಜದ ಪ್ರಭಾವ ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವ, ಹೆಚ್ಚಾದ ವಿಭಕ್ತ ಕುಟುಂಬಗಳ ಒಲವು ಹೀಗೆ ವೃದ್ದಾಶ್ರಮಗಳು ಹೆಚ್ಚಾಗಲು ನಾನಾ ಕಾರಣಗಳನ್ನು ನೀಡಬಹುದು.

ಈ ಸಂಧರ್ಭದಲ್ಲಿ ಡುಂಡಿರಾಜ್ ರವರ ಹನಿಗವನ ನೆನಪಾಯಿತು

"ಜನ ಆದರೂ ಅಷ್ಟೇ
ದನ ಆದರೂ ಅಷ್ಟೇ
ಒಂದೇ ಲಾಜಿಕ್ಕು
ಲಾಭ ಇರುವವರೆಗೆ
ಸಾಕು|
ಆಮೇಲೆ

ಬಿಸಾಕು||"


ಹೌದಲಲ್ಲವೆ ? ನಾವೆಲ್ಲರೂ ಇದನ್ನೇ ಮಾಡುವುದು ನಮ್ಮ ಪಾಲಕರಿಂದ ನಮಗೆ ಲಾಭ ಆಗುವಂತಿದ್ದರೆ ಮಾತ್ರ ಅವರನ್ನು ಸಾಕುವೆವು ಅವರಿಂದ ನಮಗೆ ಉಪಯೋಗ ಇಲ್ಲವೆಂದು ಗೊತ್ತಾದ ನಂತರ ವೃದ್ದಾಶ್ರಮದ ಕಡೆ ಸಾಗಹಾಕುವೆವು, ಈ ವಿಚಾರದಲ್ಲಿ ನಮ್ಮ ನಡವಳಿಕೆಗಳು ಪ್ರಾಣಿಗಳಿಗಿಂತ ಕಡೆಯಾಗಿವೆ ಎಂದು ಹೇಳಲು ಬೇಸರವಾಗುತ್ತದೆ.


ವೃದ್ದಾಶ್ರಮಗಳು ಹೆಚ್ಚಾಗಲು ಕುಟುಂಬದ ಕಲಹಗಳು ಕೆಲವೊಮ್ಮೆ ಕಾರಣವಾಗುತ್ತವೆ ,ಹೊಸದಾಗಿ ಮದುವೆಯಾಗಿ ಬಂದ ಸೊಸೆಗೆ ಅತ್ತೆ ಮಾವ ಹೊರೆಯಾಗಿ ಅವರಿಂದ ದೂರ ಸರಿಯಲು ಸಂಚು ರೂಪಿಸುವರು( ಎಲ್ಲರೂ ಅಲ್ಲ) ಇಲ್ಲವೇ ಹಿರಿಜೀವಗಳಿಗೆ ಕಿರಿ ಜೀವಗಳು ಕಿರುಕುಳ ನೀಡಿ ಅವರೆ ವೃದ್ದಾಶ್ರಮದ ಕಡೆ ಹೋಗುವಂತೆ ಮಾಡುವರು.


ವಯಸ್ಸಾದ ಅಪ್ಪ ಅಮ್ಮನ


ವೃದ್ದಾಶ್ರಮಕ್ಜೆ ಸೇರಿಸಿ


ಬಂದ ಮಗ ಅಂದುಕೊಂಡ


ತಪ್ಪಿತು ಒಂದು ಯೋಚನೆ |


ಮರುಗುತ್ತಾ ಅಮ್ಮ
ಮನದಲ್ಲೇ ಹಾರೈಸಿದಳು
ನಿನ್ನ ಮಕ್ಕಳು ನಿನ್ನಂತೆ
ಮಾಡದಿರಲಿ ಯೋಜನೆ||

ಕೆಲವು ಕಡೆ, ಕೋರ್ಟ್ ಗಳು ,ಇನ್ನೂ ಕೆಲವು ಕಡೆ ಕಾನೂನುಗಳ ಮೂಲಕ ಪೋಷಕ ರನ್ನು ನೋಡಿಕೊಳ್ಳಲು ಬಲವಂತವಾದ ಪ್ರಯತ್ನ ನಡೆದಿವೆ ,ಆದರೆ ಮಾನವನ ಹೃದಯದಾಂತರಾಳದಿ ಪೋಷಕರ ಮೇಲಿನ ಪ್ರೀತಿಯಿಂದ ಪೋಷಕರ ಹಾರೈಕೆ ಮಾಡದಿದ್ದರೆ ಎಷ್ಟೇ ಕಾನೂನು ಮಾಡಿದರೂ ವ್ಯರ್ಥ.

ನಾವು ಎಷ್ಟೇ ಅನಾಧರ ಮಾಡಿದರೂ ನಮ್ಮ ಪೋಷಕರು ನಮ್ಮ ಏಳ್ಗೆ ಬಯಸುತ್ತಾರೆ, ಒಂದು ಬಾರಿ ನಾವೂ ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ನಮಗೂ ವಯಸ್ಸಾಗುವುದು, ಎಂದು ಅರಿತರೆ ನಮ್ಮ ತಂದೆ ತಾಯಿಗಳು ನಮಗಾಗಿ ಮಾಡಿದ ತ್ಯಾಗ, ಕಷ್ಟಗಳನ್ನು ನೆನೆದರೆ ಖಂಡಿತವಾಗಿಯೂ ನಾವು ನಮ್ಮ ತಂದೆ ತಾಯಿಗಳನ್ನು ವೃದ್ದಾಶ್ರಮಗಳಿಗೆ ಸೇರಿಸುವುದಿಲ್ಲ, ಬದಲಾವಣೆ ಯಾವಾಗ ಬೇಕಾದರೂ ಯಾರಿಂದ ಬೇಕಾದರೂ ಆಗಬಹುದು, ಅದು ನಮ್ಮಿಂದಲೇ ಆಗಲಿ, ನಾವು ಪ್ರತಿಯೊಬ್ಬರೂ ನಮ್ಮ ತಂದೆ ತಾಯಿಗಳನ್ನು ಹಾರೈಕೆ ಮಾಡುವುದನ್ನು ಆಂದೋಲನ ರೂಪದಲ್ಲಿ ಜಾರಿಗೊಳಿಸಿಕೊಳ್ಳೋಣ , ಒಳ್ಳೆಯ ಆಚರಣೆಗಳು ಬೇಗ ಎಲ್ಲೆಡೆಗೂ ವಿಸ್ತಾರವಾಗಿ ಹರಡದಿದ್ದರೂ ಕ್ರಮೇಣವಾಗಿ ಒಳ್ಳೆಯದಾಗುತ್ತದೆ, ನಾವೆಲ್ಲರೂ ನಮ್ಮ ಪೋಷಕರನ್ನು ಅವರ ಇಳಿವಯಸ್ಸಿನಲ್ಲಿ ಹಾರೈಕೆ ಮಾಡುವ ಪಣ ತೊಡೋಣ ಇತರರಿಗೆ ಮಾದರಿಯಾಗೋಣ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಿ ಜಿ ಹಳ್ಳಿ
ಚಿತ್ರದುರ್ಗ

14 ಜೂನ್ 2021

ರಕ್ತದಾನ ಮಾಡಲೇಬೇಕು .ಲೇಖನ


 


ರಕ್ತದಾನ  ಮಾಡಲೇಬೇಕು


ಅನ್ನದಾನ ,ವಿದ್ಯಾದಾನ ದಂತೆ ಬಹಳ ಪ್ರಮಖ ವಾದುದು ರಕ್ತದಾನ 

ಕೋವಿಡ್ ನ ಈ ದುರಿತ ಕಾಲದಲ್ಲಿ ರಕ್ತದಾನಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ ರಕ್ತದ ಕೊರತೆಯೂ ಉಂಟಾಗಿದೆ , ಇದಕ್ಕೆ ಪರಿಹಾರವೆಂದರೆ ಅರ್ಹ ವಯಸ್ಕರು ರಕ್ತದಾನ ಮಾಡಬೇಕು. 


ಹಾಗಾದರೆ ಯಾರು ರಕ್ತದಾನ ಮಾಡಬಹುದು.


ಉಳಿಸಲಾಗುವುದಿಲ್ಲ

ಅಮೂಲ್ಯವಾದ ಪ್ರಾಣವ

ನಮ್ಮಲ್ಲಿ ಎಷ್ಟಿದ್ದರೂ 

ಮನಿ|

ಜೀವವುಳಿವುದು

ಸೂಕ್ತ ಸಮಯದಲ್ಲಿ

ದೊರೆತರೆ ರಕ್ತದ 

ಹನಿ|


ಎಂಬ ಹನಿಯು ರಕ್ತದ ಮಹತ್ವ ಸಾರುವುದು. ಆದ್ದರಿಂದ ಅರ್ಹರು ರಕ್ತದಾನ ಮಾಡಬಹುದು


ನಲವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆರೋಗ್ಯಕರವಾಗಿರುವವರು,

ರಕ್ತದ ಒತ್ತಡ ನಿಯಂತ್ರಣದಲ್ಲಿ ಇರುವವರು,ಕಳೆದ ಒಂದು ತಿಂಗಳುಗಳ ಯಾವುದೇ ಸಾಂಕ್ರಾಮಿಕ ರೋಗದಿಂದ ಬಳಲದೆ ಇರುವವರು ಮಾನಸಿಕವಾಗಿ ಸದೃಢವಾಗಿರುವ ಯಾರಾದರೂ ರಕ್ತದಾನ ಮಾಡಬಹುದು.ರಕ್ತ ದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ  ರೆಡ್ ಕ್ರಾಸ್ ಸಂಸ್ಥೆ ಅಮೂಲ್ಯವಾದ ಜೀವವುಳಿಸುವ  ಕೈಂಕರ್ಯದಲ್ಲಿ ತೊಡಗಿದೆ.


ರಕ್ತ ದಾನದ ಉಪಯೋಗಗಳು


ಇತರರ  ಅಮೂಲ್ಯವಾದ ಜೀವ ಉಳಿಸಲು ಸಾಧ್ಯವಾಗುತ್ತದೆ.

ಹೊಸರಕ್ತ ಉತ್ಪಾದನೆ ಆಗಲು ಸಾಧ್ಯವಾಗುತ್ತದೆ.

ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಶೇ. 80ರಷ್ಟು ಹೃದಯಾಘಾತ ಕಡಿಮೆ.

ರಕ್ತದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗುವ ತೊಂದರೆ ಸಮಸ್ಯೆಗಳು ಕಡಿಮೆಯಾಗುತ್ತವೆ.



ರಕ್ತದಾನ ಮಾಡಲು ದಾನ ಮಾಡುವ ವ್ಯಕ್ತಿಯ ರಕ್ತದ ಗುಂಪು A , B, AB, ಮತ್ತು ಮಾದರಿಯ ಯಾವುದಾದರೂ ಗುಂಪು ಆದರೂ ದಾನ ಮಾಡಬಹುದು ,ಅದನ್ನು ಸೂಕ್ತವಾಗಿ ಸಂಸ್ಕರಿಸಿ ಅಗತ್ಯವಿರುವ ರೋಗಿಗಳಿಗೆ ನೀಡುವರು.


ಕೆಲ ಸಹೃದಯರು ಐವತ್ತಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದಿರುವರು ನಮ್ಮ ಭಾಗದಲ್ಲಿ ಮಧುಗಿರಿ ಡಯಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಣೆ ಮಾಡುವ  ಶ್ರೀಕೃಷ್ಣಪ್ಪ ರವರು ಈಗಾಗಲೇ 26 ಬಾರಿ ರಕ್ತದಾನ ಮಾಡಿ ನಿಮಗೆಲ್ಲಾ ಪ್ರೇರಣೆಯಾಗಿರುವರು.


ನಮ್ಮ ದೇಶದಲ್ಲಿ ಪ್ರತಿವರ್ಷ5 ಕೋಟಿ ಯುನಿಟ್ ರಕ್ತ ಅಗತ್ಯವಿದೆ,ಆದರೆ ಸಂಗ್ರಹವಾಗುವುದು ಕೇವಲ 2.5 ಕೋಟಿ ಯುನಿಟ್ ಅದರಲ್ಲೂ ಕೋವಿಡ್ ಸಮಯದಲ್ಲಿ ಇನ್ನೂ ಕಡಿಮೆ ಸಂಗ್ರಹವಾಗುತ್ತದೆ ಇದಕ್ಕೆ ಕಾರಣ

ರಕ್ತದಾನಕ್ಕೆ ಸಂಬಂದಿಸಿದ ಕೆಲವು ವದಂತಿಗಳು . 


ರಕ್ತ ವೃದ್ಧಿಯಾಗಲು ಯಾವ ಆಹಾರವನ್ನು ಸೇವಿಸಬೇಕು.


ಆರೋಗ್ಯಕರವಾದ ಮತ್ತು ಸಮತೊಲನ  ಅಹಾರವು ರಕ್ತ ವೃದ್ಧಿ ಗೆ ಸಹಾಯಕ ಇದರ ಜೊತೆಗೆ ದಾಳಿಂಬೆ ,ಬೆಳ್ಳುಳ್ಳಿ,ಅರಿಷಿಣ, ಸೊಪ್ಪು ತರಕಾರಿಗಳು,ಶುಂಠಿ, ವಿಟಮಿನ್ ಸಿ ಇರುವ ಹಣ್ಣುಗಳಾದ ಮೊಸಂಬಿ, ಕಿತ್ತಳೆ ಹಣ್ಣುಗಳು ರಕ್ತ ವೃದ್ಧಿ ಮಾಡುವವು.


ವೈಯಕ್ತಿಕವಾಗಿ ನಾನು ಈಗಾಗಲೇ ಎರಡು ಬಾರಿ ರಕ್ತ ದಾನ ಮಾಡಿರುವೆ, ಅವಕಾಶ ಸಿಕ್ಕಾಗ ಪುನಃ ರಕ್ತ ದಾನ ಮಾಡಲು ಸಿದ್ದನಿರುವೆ 


ನಮ್ಮ ಬಾಂಧವರಿಗೆ

ಅಪಘಾತವಾದಾಗ

ಅನಾರೋಗ್ಯದಿಂದ

ಆಸ್ಪತ್ರೆಯಲ್ಲಿರುವಾಗ

ರಕ್ತ ಬೇಕೇ ಬೇಕು|

ಅದಕ್ಕಾಗಿ ಸಮಯ

ಸಂದರ್ಭಕ್ಕೆ ತಕ್ಕಂತೆ

ನಾವೂ ರಕ್ತದಾನ

ಮಾಡಲೇಬೇಕು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ