07 ಜೂನ್ 2021

ನನ್ನ ಕುಟುಂಬಕ್ಕೊಂದು ಪತ್ರ


 


 


 ನನ್ನ ಕುಟುಂಬಕ್ಕೊಂದು ಪತ್ರ 


ಆತ್ಮೀಯ ಕುಟುಂಬಕ್ಕೆ

ನಮಸ್ಕಾರಗಳು....

ನೀನೀಗ ಸೌಖ್ಯವಾಗಿಲ್ಲ ಎಂದು ನನಗೆ ಗೊತ್ತು ಆದರೂ ನಿನ್ನ ಸಮಾಧಾನ ಮಾಡಲು ಈ ಪತ್ರ ಬರೆಯುತ್ತಿರುವೆ .

ಈ ಪತ್ರ ತಲುಪಿದ ಕೂಡಲೆ ಪತ್ರ ಬರೆಯುವುದನ್ನು ಮರೆಯದಿರು.


ನಮ್ಮದು ಜೇನು ಗೂಡು, ಅವಿಭಕ್ತ ಕುಟುಂಬದ ಸವಿಯನ್ನು ಸವಿದವರು ನಾವು , ಅಜ್ಜಿ, ಅಮ್ಮ,ಅಪ್ಪ, ದೊಡ್ಡಪ್ಪ,, ಚಿಕ್ಕಪ್ಪ, ಅಣ್ಣ, ತಂಗಿ, ಎಲ್ಲರೂ ಸೇರಿ ನಗು ನಗುತಾ ಬಾಳುತ್ತಿದ್ದೆವು, ಆರು ವರ್ಷಗಳ ಹಿಂದೆ ನಮ್ಮ ಅಜ್ಜಿ ದೈವಾದೀನರಾದರು, ಅಂದು ನಮ್ಮ ದೊಡ್ಡ ಕೊಂಡಿ ಕಳಚಿತು, ಅವರೊಂದಿಗಿನ ಒಡನಾಟದ ಸವಿನೆನಪುಗಳೊಂದಿಗೆ ಜೀವಿಸಿದೆವು, ಹಬ್ಬಹರಿದಿನಗಳಲ್ಲಿ ಸಂಭ್ರಮಿಸಿದೆವು, ಸಣ್ಣ ಪುಟ್ಟ ಮನಸ್ತಾಪಗಳನ್ನು ಕುಳಿತು ಮಾತನಾಡಿ ಸರಿಪಡಿಸಿಕೊಂಡೆವು, ನೆರೆಹೊರೆಯವರ, ಸಂಬಂಧಿಗಳ ಕಷ್ಟ ಸುಖಗಳಿಗೆ ಭಾಗಿಯಾದೆವು, ಮೂರು ವರ್ಷಗಳ ಹಿಂದೆ ನಮ್ಮ ಸಹೋದರಿ ನಮ್ಮ ಕುಟುಂಬವನ್ನು ಅಗಲಿದರು , ಅವರ ಅಗಲಿಕೆಯ ನೋವು ಮರೆತು ನಮ್ಮ ಕುಟುಂಬದಲ್ಲಿ ವಸಂತನಾಗಮನವಾಯಿತು ಎಂದು ಭಾವಿಸಿದ್ದ ನಮಗೆ ಹದಿನೈದು ದಿ‌ನಗಳ ಹಿಂದೆ ನಮ್ಮ ಅತ್ತೆಯವರು ನಿಧನರಾದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾದ್ಯವೇ ಆಗಲಿಲ್ಲ,ಗಾಯದ ಮೇಲೆ ಬರೆ ಎಳೆದಂತೆ ನಮ್ಮ ಕುಟುಂಬಕ್ಕೆ ಬಂದ ಮತ್ತೊಂದು ಸಿಡಿಲಾಘಾತ,ಈ ಜೂನ್ ಮೂರು 2021 ರಂದು ನಮ್ಮ ಮಾವನವರು ನಮ್ಮನ್ನು ತೊರೆದು ನಡೆದು ಬಿಟ್ಟರು, ಈ ಆಘಾತದಿಂದ ನಾವೀಗ ಚೇತರಿಕೊಳ್ಳಬೇಕಿದೆ, 

ಸಾವು ಎಲ್ಲರಿಗೂ ನಿಶ್ಚಿತ ಎಂದು ತಿಳಿದಿದ್ದರೂ ಅಕಾಲಿಕ ಸಾವುಗಳು ಕುಟುಂಬಕ್ಕೆ ಬಹಳ ನೋವು ನೀಡುತ್ತವೆ , ಒಟ್ಟಿನಲ್ಲಿ ಈಗ ನಮ್ಮ ಕುಟುಂಬಕ್ಕೆ ಆಶಾಡದ ಕಾಲ ,ವಸಂತನಾಗಮನ ಬರುವುದು ಎಂಬ ನಿರೀಕ್ಷೆಯಲ್ಲಿ ಇರುವ ನಿನ್ನ ಕುಟುಂಬದ ಸದಸ್ಯ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು 

06 ಜೂನ್ 2021

*ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ " ಬಾಲಜಿಯು ಬಾಲಾಜಣ್ಣನಾದ "* ೬/೬/೨೧


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ"ಪವಾಡದ ಪುಸ್ತಕ "* ೬/೬/೨೧


 

ಛಲಬಿಡದ ತ್ರಿವಿಕ್ರಮ ನಾರಾಯಣ ಮೂರ್ತಿ .ಲೇಖನ


 


ಛಲಬಿಡದ ತ್ರಿವಿಕ್ರಮ ಶ್ರೀ ನಾರಾಯಣ ಮೂರ್ತಿ ರವರು. ಲೇಖನ

"ಮನಸ್ಸಿದ್ದಲ್ಲಿ ಮಾರ್ಗ" , "ಕಾಯಕವೇ ಕೈಲಾಸ " ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದರೆ ಸಾಮಾನ್ಯನೂ ಅಸಮಾನ್ಯ ಆಗುವನೆಂದು ಹಲವಾರು ಮಹಾತ್ಮರು ಸಾಧಿಸಿ ತೊರಿಸಿರುವರು. ಅಂತಹ ಸಾಧಕರ ಪಟ್ಟಿಯಲ್ಲಿ ಕಾಣಸಿಗುವ ಹೆಮ್ಮೆಯ ಕನ್ನಡಿಗರೇ ನಮ್ಮ ನಾರಾಯಣ ಮೂರ್ತಿ ರವರು.

ತಮ್ಮ ಬುದ್ದಿ ಮತ್ತು ಶ್ರಮದಿಂದ ಒಂದು ಚಿಕ್ಕ ಕಾರ್ ಶೆಡ್ ನಲ್ಲಿ ಆರಂಭವಾದ ಐಟಿ ಕಂಪನಿಯು ಇಂದು ಪ್ರಪಂಚದ ಟಾಪ್ ಟೆನ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದಕ್ಕೆ ಅವರ ಧರ್ಮ ಪತ್ನಿ ಸುಧಾ ಮೂರ್ತಿ ರವರ ಸಹಕಾರ, ಪ್ರೋತ್ಸಾಹ, ಮತ್ತು ತ್ಯಾಗ ವನ್ನು ಸ್ಮರಿಸಲೇಬೇಕು,

 ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಔಟ್ ಸೋರ್ಸ್‌ ಸೇವೆಗಳನ್ನು ಒದಗಿಸುತ್ತಿದೆ.

ಅಮೇರಿಕಾದ ಪ್ರತಿಷ್ಠಿತ ನಾಸ್ಡಾಕ್ ( ನಮ್ಮಲ್ಲಿ ಬಾಂಬೆ ಶೇರು ಮಾರುಕಟ್ಟೆಯ ತರಹ) ನಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಕಂಪನಿ ಎಂದರೆ ನಿಮಗೆ ಅರ್ಥವಾಗಬೇಕು ನಾರಾಯಣಮೂರ್ತಿ ರವರು ತಮ್ಮ ಕಂಪನಿಯನ್ನು ಬೆಳೆಸಿದ ಪರಿಯನ್ನು.

ಈಗಲೂ ಲಕ್ಷಗಟ್ಟಲೆ ಉದ್ಯೋಗಿಗಳು ಇನ್ಪೋಸಿಸ್ ಕಂಪನಿಯಿಂದ ಉದ್ಯೋಗ ಪಡೆದು ಜೀವನ ಮಾಡುತ್ತಿದ್ದಾರೆ, ಆ ಕಂಪನಿಯ ಶೇರುಗಳನ್ನು ಕೊಂಡ ಸಾವಿರಾರು ಮಂದಿ ಕೋಟ್ಯಾದಿಶರಾಗಿರುವರು.

ಸಿ ಎಸ್ ಆರ್ ಅಡಿಯಲ್ಲಿ ಕೋಟಿಗಟ್ಟಲೆ ಹಣವನ್ನು ನಾರಾಯಣ ಮೂರ್ತಿ ರವರು, ಮತ್ತು ತಮ್ಮ ಧರ್ಮ ಪತ್ನಿ ಸುಧಾ ಮೂರ್ತಿ ರವರು ಸಮಾಜಮುಖಿ ಕೆಲಸಗಳಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಕಾರ್ಯ.

೧೯೯೬ರಲ್ಲಿ ಇನ್ಫೊಸಿಸ್  ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ನಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸಮಾಜದ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಕಂಪನಿಯನ್ನು ಆರಂಭಮಾಡಲು ಹಣಕಾಸಿನ ‌ಕೊರತೆ ಬಿದ್ದಾಗ ಹೆಂಡತಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ಹೊಂದಿಸಿ ಛಲಬಿಡದ ತ್ರಿವಿಕ್ರಮನಂತೆ ಕಂಪನಿಯನ್ನು ಕಟ್ಟಿ ಬೆಳೆಸಿ ತೋರಿಸಿದವರು ನಮ್ಮ ನಾರಾಯಣ ಮೂರ್ತಿ ರವರು.

ಇಂದಿನ ಯುವ ಉದ್ದಿಮೆದಾರರಿಗೆ ಇಂತಹ ಕಷ್ಟದ ಪರಿಸ್ಥಿತಿಗಳಿಲ್ಲ, ಸರ್ಕಾರಗಳು ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ  ,ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾರಾಯಣ ಮೂರ್ತಿ ರವರನ್ನು ರೋಲ್ ಮಾಡಲ್ ಆಗಿ ಸ್ವೀಕಾರ ಮಾಡಿ ವಿವಿಧ ರಂಗಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ,ನಮ್ಮ ದೇಶದಲ್ಲಿ ಯುವ ಉದ್ದಿಮೆದಾರರು ಹೆಚ್ಚಾದರೆ, ಇನ್ಫೋಸಿಸ್ ನಂತಹ ನೂರಾರು ಕಂಪನಿಗಳು ದೇಶದಲ್ಲಿ ತಲೆ ಎತ್ತಿ ,ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶವು ಇನ್ನೂ ಪ್ರಗತಿ ಹೊಂದುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ 6/6/21