This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
23 ಮೇ 2021
22 ಮೇ 2021
ಗಜಲ್ .
*ಗಜಲ್*
ಹಸಿದ ಜೀವಗಳಿಗೆ ಅನ್ನ ನೀಡಿ
ನೊಂದವರಿಗೆ ಸಾಂತ್ವನವನ್ನ ನೀಡಿ
ಉಳ್ಳವರಿಗೆ ಬಹುಮಹಡಿಯಲಿ ವಾಸ
ಮನೆಯಿಲ್ಲದವರಿಗೆ ಸೂರನ್ನ ನೀಡಿ.
ಬಟ್ಟೆಯಿದ್ದರೂ ದಿಗಂಬರರು ನೋಡಿಲ್ಲಿ
ಮರ್ಯಾದಸ್ತರಿಗೆ ವಸನವನ್ನ ನೀಡಿ.
ಕಲಿತರೂ ಕತ್ತಲಲಿ ತೊಳಲುತಿಹರಲ್ಲ
ಅಂಧಕಾರಲ್ಲಿರುವವರಿಗೆ ಬೆಳಕನ್ನ ನೀಡಿ.
"ಸಿಹಿಜೀವಿ" ಗಳಿಗೆ ಸಂಕಟವಿಹುದಿಲ್ಲಿ
ಅಶಕ್ತರಿಗೆ ಸಹಾಯಹಸ್ತವನ್ನ ನೀಡಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




